ಸೀಮಿತ ಬಸ್ ಓಡಾಟವಿದ್ದರೂ ಪ್ರಯಾಣಿಕರ ಕೊರತೆ
Team Udayavani, May 23, 2020, 6:00 AM IST
ಉಡುಪಿ: ರಾಜ್ಯ ಸರಕಾರ ಲಾಕ್ಡೌನ್ ಸಡಿಲಿಕೆ ಮಾಡಿ ಸಾರ್ವಜನಿಕರಿಗೆ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ನಗರದಲ್ಲಿ ಸೀಮಿತ ಸಂಖ್ಯೆಯ ಕೆಎಸ್ಆರ್ಟಿಸಿ ಮತ್ತು ಒಂದು ಸಂಸ್ಥೆಗೆ ಸೇರಿದ ಖಾಸಗಿ ಬಸ್ಗಳು ಬೇಡಿಕೆಯಿರುವ ಮಾರ್ಗಗಳಲ್ಲಿ ಓಡುತ್ತಿವೆ. ಅವುಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಸೀಮಿತ ಬಸ್ಗಳಿಗೂ ಪ್ರಯಾಣಿಕರ ಸ್ಪಂದನೆಯಿಲ್ಲ. ನಗರ ಇನ್ನು ಹಿಂದಿನ ಶೈಲಿಗೆ ಮರಳದೇ ಇರುವುದು ಇದರಿಂದ ಸ್ಪಷ್ಟವಾಗುತ್ತದೆ.
ಕೆಎಸ್ಆರ್ಟಿಸಿ ಮತ್ತು ಖಾಸಗಿ ಸಂಸ್ಥೆಯಾದ ಭಾರತಿ ಸಂಸ್ಥೆಗೆ ಸೇರಿದ ಬಸ್ಗಳು ಮಾತ್ರ ಈಗ ಓಡಾಟ ನಡೆಸುತ್ತಿವೆ. ಉಡುಪಿ ಕುಂದಾಪುರ ಮಧ್ಯೆ ದಿನವೊಂದಕ್ಕೆ ತಲಾ ಮೂರು ಬಾರಿಯಂತೆ ಆರು ಟ್ರಿಪ್ ಗಳಲ್ಲಿ ಭಾರತಿ ಬಸ್ ಓಡಾಟ ನಡೆಸುತ್ತಿದೆ. ಬೆಳಗ್ಗೆ 11ರಿಂದ ಸಂಜೆ 4ರ ತನಕ ಬಸ್ಗಳಲ್ಲಿ 7ರಿಂದ 8 ಮಂದಿಯಷ್ಟು ಪ್ರಯಾಣಿಕರು ಮಾತ್ರ ಇರುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನ ಟ್ರಪ್ಗಳ ಬಸ್ಗಳಲ್ಲಿ 20ರಿಂದ 25ರಷ್ಟು ಮಂದಿ ಪ್ರಯಾಣಿಕರು ಇರುತ್ತಾರೆ. ನಗರದ ಜನತೆ ಹೆಚ್ಚಾಗಿ ಬಳಸುವುದು ಖಾಸಗಿ ಬಸ್ಗಳನ್ನು ಜನ ಎಲ್ಲ ಚಟುವಟಿಕೆಗಳಿಗೂ ಖಾಸಗಿ ಬಸ್ಗಳನ್ನೇ ಅವಲಂಬಿಸಿಕೊಂಡಿದ್ದಾರೆ.
ಜನರ ಪ್ರಮಾಣ ವಿರಳ
ಉಡುಪಿ ಘಟಕದಿಂದ ಕಾರ್ಕಳಕ್ಕೆ 2, ಹೆಬ್ರಿ 1, ಹೆಜಮಾಡಿ 1, ಕುಂದಾಪುರ 1, ಮಣಿಪಾಲದಿಂದ ಕುಂದಾಪುರಕ್ಕೆ 3 ಸರಕಾರಿ ಬಸ್ಸುಗಳು ಮಾತ್ರ ಈಗ ಸಂಚರಿಸುತ್ತಿವೆ. ಕುಂದಾಪುರ ಘಟಕದಿಂದಲೂ ಐದಾರು ಸರಕಾರಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಈ ಬಸ್ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಈ ಎರಡು ಹೊತ್ತು ಹೊರತುಪಡಿಸಿ ಇತರೆ ಅವಧಿಯಲ್ಲಿ ಪ್ರಯಾಣಿಕರ ಕೊರತೆ ಇರುತ್ತದೆ. ಜಿಲ್ಲೆಯಿಂದ ಅಂತರ್ ಜಿಲ್ಲೆಗಳಿಗೆ ಸಾರಿಗೆ ಸಂಸ್ಥೆ ಬಸ್ಗಳು ಸಂಚರಿಸುತ್ತಿವೆ. ಇತರೆ ಖಾಸಗಿ ಬಸ್ಗಳು ಇನ್ನು ರಸ್ತೆಗಿಳಿದಿಲ್ಲ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಬಸ್ಗಳು ಓಡಾಟ ಆರಂಭಿಸದೆ ಇರುವುದು ಹಾಗೂ ಇನ್ನು ಅನೇಕ ಕಾರಣಗಳಿಂದ ನಗರದ ಜನಜೀವನ ಹಿಂದಿನ ಹಿಂದಿನ ಸ್ಥಿತಿಗೆ ಮರಳಿಲ್ಲ.ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಖಾಸಗಿ ಬಸ್ ನಿಲ್ದಾಣಗಳಲ್ಲಿ ಕೂಡ ಜನರ ಪ್ರಮಾಣ ವಿರಳವಾಗಿ ಕಂಡುಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ