Bihar: ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಜಮೀನು ಹಗರಣ: ಲಾಲು ಕುಟುಂಬಕ್ಕೆ ಜಾಮೀನು
Team Udayavani, Oct 4, 2023, 8:50 PM IST
ನವದೆಹಲಿ: ರೈಲ್ವೇ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ಗೆ ದೆಹಲಿಯ ಕೋರ್ಟ್ ಬುಧವಾರ ಜಾಮೀನು ನೀಡಿದೆ. ಅವರ ಜತೆಗೆ ಮಾಜಿ ಸಿಎಂ, ಲಾಲು ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ ಯಾದವ್ಗೆ ಕೂಡ ಜಾಮೀನು ಸಿಕ್ಕಿದೆ.
ವಿಶೇಷ ಕೋರ್ಟ್ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ಮೂವರು ಕೂಡ ಖುದ್ದಾಗಿ ಕೋರ್ಟ್ಗೆ ಹಾಜರಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ 50 ಸಾವಿರ ರೂ. ಬಾಂಡ್ ಮೊತ್ತ ನೀಡುವಂತೆ ಆದೇಶಿಸಿ ಜಾಮೀನು ನೀಡಿದ್ದಾರೆ. ಇದರ ಜತೆಗೆ ವಿಚಾರಣೆ ವೇಳೆ ಮೂವರನ್ನು ಬಂಧಿಸದಂತೆ ಸಿಬಿಐಗೆ ಆದೇಶವನ್ನೂ ನೀಡಿದ್ದಾರೆ.