ಚಿರತೆ ದಾಳಿಗೆ ಕರು ಜಿಂಕೆ ಬಲಿ : ಮನೆಯಿಂದ ಹೊರಬರಲು ಹೆದರುತ್ತಿರುವ ನಿವಾಸಿಗಳು
Team Udayavani, Dec 8, 2020, 3:25 PM IST
ಬ್ಯಾಡಗಿ: ಚಿರತೆ ದಾಳಿಗೆ ಕರು ಹಾಗೂ ಜಿಂಕೆಯೊಂದು ಬಲಿಯಾಗಿರುವ ಘಟನೆ ಬ್ಯಾಡಗಿ ತಾಲೂಕಿನ ಹೊಸ ಗುಂಗರಕೊಪ್ಪ
ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೊಸ ಗುಂಗರಕೊಪ್ಪ ಗ್ರಾಮದ ನಿವಾಸಿ ರೈತ ಬಸವರಾಜ ಮೇಗಳಮನಿ ತಮ್ಮ ಹೊಲದಲ್ಲಿ ಕರುವನ್ನು ಮೇಯಲು ಬಿಟ್ಟಿದ್ದು ಎಲ್ಲಿಂದಲೋ ಏಕಾಏಕಿ ಪ್ರತ್ಯಕ್ಷವಾದ ಚಿರತೆ ಕರುವಿನ ಮೇಲೆ ದಾಳಿ ಮಾಡಿ ಹೊತ್ತೂಯ್ದು ಅರ್ಧಂಬರ್ಧ ತಿಂದು ಕೊಂದು ಹಾಕಿದೆ. ಅಲ್ಲದೇ ಕೆಲ ದಿನಗಳ ನಂತರದ ಅವಧಿಯಲ್ಲಿ ಮತ್ತೆ ಜಿಂಕೆಯೊಂದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದು ಜಿಂಕೆಯ ದೇಹ ಹೊಲದ ಪೊದೆಯೊಂದರಲ್ಲಿ ಪತ್ತೆಯಾಗಿದೆ.
ಭಯದಲ್ಲಿ ರೈತರು: ಚಿರತೆ ದಾಳಿಯಿಂದ ಕಂಗಾಲಾಗಿರುವ ಹೊಸ ಗುಂಗರಕೊಪ್ಪ ಗ್ರಾಮದ ಜನ ಹಾಗೂ ರೈತರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ರಾತ್ರಿ ಸಮಯದಲ್ಲಿ ಹೊಲಗಳಿಗೆ ನೀರು ಹಾಯಿಸಲು ಹೋಗಲು ರೈತರು ಭಯ ಪಡುತ್ತಿದ್ದು
ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ: ರೌಡಿ ಶೀಟರ್ಗಳಿಗೆ ಎಚ್ಚರಿಕೆ ನೀಡಿದ DYSP
ಹೊಸ ಗುಂಗರಕೊಪ್ಪ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಕರು ಹಾಗೂ ಜಿಂಕೆ ಕೊಂದಿರುವ ಘಟನೆ ಕುರಿತಂತೆ ಅರಣ್ಯ ಇಲಾಖೆ ಗಾರ್ಡ್ಗೆ ತಿಳಿಸಲಾಗಿದೆ. ಇಷ್ಟಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಯಾವಾಗ ಯಾವ ಮೂಲೆಯಿಂದ ಯಾರ ಮೈಮೇಲೆ ಚಿರತೆ ಬಂದೆರಗುವುದೋ ಎಂಬ ಭಯದಲ್ಲಿಯೇ ಗ್ರಾಮಸ್ಥರು ಜೀವಿಸುವಂತಾಗಿದೆ.
– ಬಸವರಾಜ ಮೇಗಳಮನಿ, ಸಂತ್ರಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ