ಹುಣಸೂರು: ಕೊಟ್ಟಿಗೆಗೆ ದಾಳಿ ಮಾಡಿ ಕುರಿಯನ್ನು ಕೊಂದ ಚಿರತೆ
Team Udayavani, Sep 24, 2020, 11:41 AM IST
ಹುಣಸೂರು (ಮೈಸೂರು): ಚಿರತೆ ದಾಳಿ ನಡೆಸಿ ಕುರಿಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ ಕಳೆದ ರಾತ್ರಿ ನಡೆದಿದೆ.
ತಾಲೂಕಿನ ನಂಜಾಪುರದ ವರದರಾಜು ಎಂಬವರಿಗೆ ಸೇರಿದ ಕುರಿ ಇದಾಗಿದ್ದು, ರಾತ್ರಿ ಕೊಟ್ಟಿಗೆಯಲ್ಲಿ ಕೂಡಿದ್ದ ಕುರಿ ಮೇಲೆ ದಾಳಿ ನಡೆಸಿದ ವೇಳೆ ಕುರಿಗಳ ಚೀರಾಟ ಕೇಳಿ ಹೊರಬಂದ ಮಾಲೀಕರು ಕೂಗಾಟ ನಡೆಸಿದ ವೇಳೆ ಚಿರತೆ ಓಡಿ ಹೋಗಿದೆ.
ಗ್ರಾಮದ ಬಳಿ ಇರುವ ರೇಷ್ಮೆ ಫಾರಂ ಕುರಿಚಲು ಕಾಡಿನಿಂದ ಹೊರಬರುವ ಚಿರತೆಗಳು ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಈ ಕುರುಚಲು ಕಾಡಿನಲ್ಲಿ ಹಲವು ಚಿರತೆ ಮರಿಗಳಿದ್ದು, ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ರಿಜ್ವಾನ್, ದೇವಯ್ಯ ಭೇಟಿ ನೀಡಿ ಪರಿಶೀಲಿಸಿದ್ದು, ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲಾಗುವುದೆಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ