ಕರ್ತವ್ಯ ಪ್ರಜ್ಞೆಯ ಪಾಠ


Team Udayavani, Jul 7, 2020, 4:57 AM IST

lokamanya

ಸ್ವಾತಂತ್ರ್ಯ ಹೋರಾಟಗಾರರ ಬೆನ್ನ ಹಿಂದೆ ಗುಪ್ತಚರರು ಓಡಾಡುವುದು ಮಾಮೂಲಾಗಿದ್ದ ಕಾಲ. ಕೆಲವರನ್ನು ಬ್ರಿಟಿಷ್‌ ಸರಕಾರ ನೇಮಿಸಿದ್ದರೆ, ಇನ್ನು ಕೆಲವರನ್ನು ಬ್ರಿಟಿಷ್‌ ಸರಕಾರಕ್ಕೆ ತಲೆಬಾಗಿ ನಡೆಯುವ ದೇಶೀಯ ಸಂಸ್ಥಾನಗಳೇ  ನೇಮಿಸಿಕೊಂಡಿದ್ದವು. ಹೋರಾಟಗಾರರು ಎಲ್ಲೆಲ್ಲಿ ಹೋಗುತ್ತಾರೆ, ಯಾರೊಡನೆ ಸಂಪರ್ಕದಲ್ಲಿದ್ದಾರೆ, ಯಾವ ಬಗೆಯ ಹೋರಾಟದ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಬಗ್ಗೆ ಗೂಢಚಾರರು ಮಾಹಿತಿ ಕಲೆಹಾಕಿ, ಮೇಲಧಿಕಾರಿಗಳಿಗೆ  ಮುಟ್ಟಿಸುತ್ತಿದ್ದರು.

ಬರೋಡೆಯ ಸರಕಾರ, ಲೋಕಮಾನ್ಯ ಬಾಲಗಂಗಾಧರ ತಿಲಕರ ಬೆನ್ನ ಹಿಂದೆ ಅಂಥ ಗೂಢಚಾರರನ್ನು ನೇಮಿಸಿತ್ತು. ಕ್ರಾಂತಿಕಾರಿ ತಿಲಕರದು ನಿರ್ಭೀತ ವ್ಯಕ್ತಿತ್ವ. ಮಾತ್ರವಲ್ಲ, ಅತ್ಯಂತ ಚುರುಕುಬುದ್ಧಿಯೂ  ಕೂಡ. ಅವರ ಸ್ಮರಣಶಕ್ತಿ ಅದೆಷ್ಟು ಅಗಾಧವಾಗಿತ್ತೆಂದರೆ- ಜೈಲಿನಲ್ಲಿ ಗೀತಾರಹಸ್ಯ ಕೃತಿ ಬರೆಯುತ್ತಿದ್ದಾಗ ಸರಕಾರಿ ಅಧಿಕಾರಿಗಳು ಅವರು ಬರೆದಿಟ್ಟಿದ್ದ ಎಲ್ಲ ಹಾಳೆಗಳನ್ನೂ ವಶಪಡಿಸಿಕೊಂಡರಂತೆ.

ತಿಲಕರು ತುಸುವೂ ಧೃತಿಗೆಡದೆ,  ತಾನು ಬರೆದಿಟ್ಟಿದ್ದ ಅಷ್ಟೂ ಸಂಗತಿಗಳನ್ನು ಮತ್ತೆ ಬರೆದು, ಕೃತಿಯನ್ನು ಪೂರ್ಣ ಗೊಳಿಸಿದರಂತೆ! ಅಂಥ ಅದ್ಭುತ ಸ್ಮರಣಶಕ್ತಿ ಮತ್ತು ನಿಶಿತಮತಿ ಇದ್ದ ತಿಲಕರಿಗೆ, ತನ್ನ ಬೆನ್ನ ಹಿಂದೆ ಎಂತೆಂಥ ಮಸಲತ್ತುಗಳು ನಡೆಯುತ್ತಿದ್ದವೆಂಬುದು  ತಿಳಿಯದ ವಿಷಯವೇ? ಗೂಢಾಚಾರರು ಹಿಂದೆ ಬಿದ್ದಿದ್ದಾರೆ ಎಂಬುದು ಗೊತ್ತಿದ್ದರೂ ಅವರ ಚಟುವಟಿಕೆಗಳಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಅದೊಂದು ದಿನ ತಿಲಕರು ಸ್ನೇಹಿತರೊಬ್ಬರನ್ನು ಭೇಟಿ ಮಾಡುವುದಿತ್ತು. ಅಲ್ಲಿ ಮಾತಾಡುತ್ತ,  ಹರ ಟುತ್ತ ಬಹಳಷ್ಟು ಸಮಯವೇ ಕಳೆದುಹೋಯಿತು.

ಅವರನ್ನು ಗುಟ್ಟಾಗಿ ಹಿಂಬಾಲಿಸುತ್ತ ಬಂದಿದ್ದ ಗೂಢಚಾರ, ಪಕ್ಕದ ಒಂದು ಜಾಗದಲ್ಲಿ ಅಡಗಿ ಕೂತಿದ್ದ. ಸಮಯ ಸರಿದಂತೆ ಆತ ಕಾದು ಕಾದು ನಿದ್ದೆಗಿಳಿದುಹೋದ! ತಡರಾತ್ರಿ  ಸ್ನೇಹಿತರ ಮನೆ ಯಿಂದ ಹೊರಬಂದ ತಿಲಕರು, ನೇರವಾಗಿ ಗೂಢ ಚಾರ ಅಡಗಿಕೂತಿದ್ದ ಜಾಗದತ್ತ ನಡೆದು, ಮಲಗಿದ್ದ ಅವನನ್ನು ಎಬ್ಬಿಸಿ- ನಾನು ನನ್ನ ಕೆಲಸ ಮುಗಿಸಿ ಇದೀಗ ಮನೆಗೆ ಹೊರಟಿದ್ದೇನೆ. ನೀವೂ ನಿಮ್ಮ ಡ್ಯೂಟಿ ಮಾಡಲು  ಸಜ್ಜಾಗಿ ಸ್ವಾಮಿ! ಇಲ್ಲವಾದರೆ ಕರ್ತವ್ಯ ಮರೆತ ತಪ್ಪಿಗೆ ನಿಮ್ಮ ಯಜಮಾನರಿಂದ ಒದೆ ತಿನ್ನುತ್ತೀರಲ್ಲವೇ? ಎಂದರು. ಈ ಮಾತು ಕೇಳಿದ ಆ ಗೂಢಚಾರನ ಪರಿಸ್ಥಿತಿ ಹೇಗಾಗಿದ್ದಿರ ಬಹುದೋ ಯೋಚಿಸಿ…

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.