ಅಡೆತಡೆಗಳನ್ನು ಮೀರಿ ಮುನ್ನಡೆಯೋಣ


Team Udayavani, Jun 1, 2021, 6:30 AM IST

ಅಡೆತಡೆಗಳನ್ನು ಮೀರಿ ಮುನ್ನಡೆಯೋಣ

ಮಾನವ ಜೀವನ ಮಾತ್ರವಲ್ಲ ಈ ಸೃಷ್ಟಿಯಲ್ಲಿರುವ ಪ್ರತಿಯೊಂದೂ ಜೀವಿಯ ಜೀವನದಲ್ಲೂ ಅಡೆತಡೆ, ಸಮಸ್ಯೆ, ಸವಾಲುಗಳು ಸಹಜ. ಇವೆಲ್ಲ ವನ್ನು ಮೆಟ್ಟಿ ನಿಂತು ಮುಂದೆ ಸಾಗಿದಲ್ಲಿ ಮಾತ್ರವೇ ನಾವು ಜೀವನದ ಸ್ವಾರಸ್ಯವನ್ನು ಸವಿಯಲು ಸಾಧ್ಯ. ಜೀವನ ಎಂದರೆ ಹಾಗೆಯೇ ಕಡಲಲ್ಲಿ ಈಜಿದಂತೆ. ಹಾಗೆಂದು ಜೀವನ ಎಂಬ ಸಾಗರದಲ್ಲಿ ಈಜಲು ಮುಂದಾಗುವಾಗ ಒಂದಿಷ್ಟು ಯೋಚಿಸಿ, ಸಂದರ್ಭ, ಸಮಯಕ್ಕೆ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಿ ಕಡಲಿಗಿಳಿಯಬೇಕು. ಹಾಗಾದಲ್ಲಿ ಮಾತ್ರವೇ ನಮ್ಮ ಗುರಿ ತಲುಪಲು ಸಾಧ್ಯ.

ನಾವು ಯಾವುದೇ ಕೆಲಸಕ್ಕೆ ಮುಂದಡಿ ಇಡುವಾಗಲೂ ಒಂದಷ್ಟು ಅಡೆತಡೆಗಳು ಎದುರಾಗುತ್ತವೆ. ಸಣ್ಣಪುಟ್ಟ ಅಡೆತಡೆಗಳು ಎದುರಾದಾಗಲೂ ಹಿಂದೇಟು ಹಾಕು ತ್ತೇವೆ. ಆ ರೀತಿಯ ಅಡೆತಡೆಗಳನ್ನು ಸಂದ ಭೋìಚಿತವಾಗಿ ನಿವಾರಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ನಿಜಕ್ಕೂ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ಸಿನ ಜತೆಗೆ ಬದುಕಿನ ಅಡೆತಡೆಗಳನ್ನು ಮೀರಿ ಸಾಗಿದ ಆತ್ಮತೃಪ್ತಿ ಸದಾಕಾಲ ನೆಲೆಯೂರುತ್ತದೆ. ಅಷ್ಟು ಮಾತ್ರವಲ್ಲದೆ ಈ ಯಶಸ್ಸು ನಮ್ಮ ಮುಂದಿನ ಜೀವನಕ್ಕೆ, ನಮ್ಮ ಭವಿಷ್ಯದ ಪೀಳಿಗೆಗೂ ದಾರಿದೀಪವಾಗುತ್ತದೆ.

ಜೀವನದಲ್ಲಿ ಅಡೆತಡೆಗಳು ಇಲ್ಲವೆಂದಾದಲ್ಲಿ ಅದು ಮರುಭೂಮಿಯಂತೆ ಕೇವಲ ಬರಡು. ನಾವು ನಮ್ಮ ಜೀವನವನ್ನು ಬರಡಾಗಿಸದೆ ಹಸನಾಗಿಸಬೇಕು. ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾದಾಗ ಅಡೆತಡೆ, ಸವಾಲುಗಳೆಲ್ಲವೂ ಸಾಮಾನ್ಯ. ಇವನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯ ಬೇಕು. ಹಾಗೊಂದು ವೇಳೆ ಇಂಥ ಸಂದರ್ಭದಲ್ಲಿ ನೀವು ಸಂಕಷ್ಟದಲ್ಲಿ ಸಿಲುಕಿದಿರಿ ಎಂದಾದರೆ ಯಾರಾದರೂ ನಿಮಗೆ ಸಹಾಯಹಸ್ತವನ್ನು ಚಾಚಿಯಾರು. ಆ ಸಹಾಯವನ್ನು ಪಡೆದು ಕೊಳ್ಳಲು ಯಾವುದೇ ಹಿಂಜರಿಕೆ, ಕೀಳರಿಮೆ ಬೇಡ. ಪ್ರಕೃತಿ ಕೂಡ ಅಷ್ಟೆ. ಅಡೆತಡೆಗಳನ್ನು ನಿವಾರಿಸಿಕೊಂಡು ಸಾಗುವ ಪಾಠವನ್ನು ಸದಾ ನಮಗೆ ಕಲಿಸುತ್ತಿರುತ್ತದೆ. ಮರದ ಕೊಂಬೆಯನ್ನು ಸ್ವಾರ್ಥಕ್ಕಾಗಿ ಮನುಜ ಅನೇಕ ಬಾರಿ ಕಡಿದರೂ ಆ ಮರ ಅಂಜದೆ ಮತ್ತೆ ಮತ್ತೆ ಚಿಗುರೊಡೆದು ತನ್ನ ಸ್ವಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುತ್ತದೆಯಲ್ಲವೆ? ಒಂದು ಬೀಜ ಮಣ್ಣಿಗೆ ಬಿದ್ದರೆ ಆರೈಕೆ ಮಾಡದಿದ್ದರೂ ತಾನಾಗಿ ಸ್ವಸಾಮರ್ಥ್ಯದಿಂದ, ಆತ್ಮನಿರ್ಭರತೆಯಿಂದ ಮೇಲೆದ್ದು ಬರುತ್ತದೆ. ಬಾಳ ಹಾದಿಯಲ್ಲಿ ಅನಿವಾರ್ಯವಾಗಿ ತೊಂದರೆ ಎದುರಾದರೆ ಎದೆಗುಂದದೆ ಪುಟಿ ದೇಳಬೇಕು. ಹೊಸ ಭರವಸೆಯೊಂದಿಗೆ ಮೇಲೇರಬೇಕು.
ವಿದ್ಯಾರ್ಥಿ ಜೀವನದಲ್ಲಂತೂ “ಆಗದು ಎಂದು ಕೈ ಕಟ್ಟಿ ಕುಳಿತರೆ’ ಯಾವ ಸಾಧ ನೆಯೂ ಸಾಧ್ಯವಾಗದು. ಯಾವುದೇ ಕಲಿಕೆಯಲ್ಲಿ ತೊಡಗುವಾಗ ಮೊದಲು ಕ್ಲಿಷ್ಟವೆನಿಸಬಹುದು. ಪರೀಕ್ಷೆಗಳನ್ನು ಎದುರಿಸುವಾಗ ಕಷ್ಟವೆನಿಸಬಹುದು. ಸೋಲು ಕಾಡ ಬಹುದು. ಆದರೆ “ನನ್ನಿಂದಾಗದು’ ಎಂದು ಹಿಂದೇಟು ಹಾಕಬಾರದು. ಸತತ ಪ್ರಯತ್ನ, ಪೂರ್ವಯೋಜಿತ ಮತ್ತು ಯೋಚಿತ ಕಲಿಕೆಯಿಂದ ಯಶದ ಗರಿಯನ್ನು ಮುಡಿಗೇರಿಸಿಕೊಳ್ಳಲು ಸಾಧ್ಯ. ಪರೀಕ್ಷೆಯ ಅಂಕಗಳಲ್ಲಿ ಹಿನ್ನೆಡೆ ಅನುಭವಿಸಿದರೂ ಪರೀಕ್ಷಾ ಅಂಕಗಳಾಚೆಗೆ ಜೀವನದಲ್ಲಿ ಯಶಸ್ವಿಯಾದವರ ಕಥೆಗಳನ್ನು ತಿಳಿದು ಆ ನಿಟ್ಟಿನಲ್ಲಿ ಜೀವನದ ಯಾವುದಾದರೂ ರಂಗದಲ್ಲಿ ಯಶಸ್ವಿಯಾಗುವತ್ತ ಛಲದಂಕ ಮಲ್ಲನಂತೆ ಮುಂದಡಿ ಇಟ್ಟು ಗುರಿ ತಲುಪಬೇಕು. ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯುವತ್ತ ಚಿತ್ತ ಬೆಳೆಸಬೇಕಾಗಿದೆ. “ತಮಸೋಮಾ ಜ್ಯೋತಿರ್ಗಮಯ’ ಎಂಬಂತೆ ಬದುಕಿನ ಕತ್ತಲೆಯ ದಿನಗಳನ್ನು ಬೆಳಕಿನ ದಿನಗಳತ್ತ ಕೊಂಡೊಯ್ಯುವಂತಾಗಬೇಕಿದೆ.

ಹೊಸತನವೆ ಬಾಳು;
ಹಳಸಿಕೆಯಲ್ಲ ಸಾವು ಬಿಡು
ರಸವು ನವನವತೆಯಿಂದನು
ದಿನವು ಹೊಮ್ಮಿ|
ಹಸನೊಂದು ನುಡಿಯಲ್ಲಿ
ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್‌ ಚೆಲುವು – ಮಂಕುತಿಮ್ಮ ಎಂಬ ಡಿ.ವಿ.ಜಿ.ಯವರ ಕಗ್ಗದ ಸೊಲ್ಲುಗಳಂತೆ ನಮ್ಮ ಬದುಕಿನಲ್ಲಿ ನಿರಂತರ ಹೊಸತನವನ್ನು ಕಾಣುತ್ತಿರಬೇಕು. ಹಳತನ್ನು ಸಾವೆಂದು ತಿಳಿದು ದೂರ ತಳ್ಳಬೇಕು. ಅನುದಿನವೂ ಹೊಸತನದಿಂದ ರಸ ಹೊಮ್ಮುತ್ತಿರಬೇಕು. ನಾವಾಡುವ ನುಡಿಯಲ್ಲಿ ಹೊಸತನವಿರಬೇಕು. ನಡೆಯಲ್ಲಿ, ನೋಟದಲ್ಲಿ ಶ್ರೇಷ್ಠತೆ ಹೊಮ್ಮುತ್ತಿರಬೇಕು.ಆಗಲೇ ನಮ್ಮ ಬಾಳು ಸುಂದರವಾಗುತ್ತದೆ ಎಂಬ ಕಗ್ಗದ ತಾತ್ಪರ್ಯ ನಮಗೆ ಸ್ಫೂರ್ತಿಯಾಗಲಿ, ಬದುಕು ಅಡೆತಡೆಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು ಎಂಬ ಸಂಕಲ್ಪ ನಮ್ಮದಾಗಲಿ.
- ಭಾರತಿ ಎ., ಕೊಪ್ಪ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.