

Team Udayavani, Apr 18, 2024, 2:01 PM IST
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್, ಬಿಜೆಪಿಯ ಕೇಂದ್ರ ನಾಯಕರ ಮೇಲೆ ಒತ್ತಡ ಹೇರಿ ಚಿಕ್ಕಬಳ್ಳಾಪುರಕ್ಕೆ ಅವರನ್ನ ಚುನಾವಣಾ ಪ್ರಚಾರಕ್ಕೆ ಕರೆಸುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್ ಎಂದು ಪವರ್ ಸ್ಟಾರ್ ಪವನ್ ಕಲ್ಯಾಣ ಬಿಜೆಪಿ ಪ್ರಚಾರಕ್ಕೆ ಆಗಮಿಸುತ್ತಿರುವ ಕುರಿತು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬುಧವಾರ ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರಕ್ಕೆ ಪವನ್ ಕಲ್ಯಾಣ್ ಬಂದರೂ ಸುಧಾಕರ್ ಪರ ವೋಟ್ ಹಾಕಿ ಅಂತ ಕೇಳುವುದಿಲ್ಲ. ನನ್ನ ಬಗ್ಗೆಯಾಗಲಿ ಅಥವಾ ರಕ್ಷಾ ರಾಮಯ್ಯ ಬಗ್ಗೆ ಅವರು ಮಾತನಾಡುವುದಿಲ್ಲ ಎಂದರು.
ನಾನು ಕೂಡ ಪವನ್ ಕಲ್ಯಾಣ್ ದೊಡ್ಡ ಅಭಿಮಾನಿ. ಆದರೆ ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್, ಬಿಜೆಪಿ ಪಕ್ಷದಲ್ಲಿ
ಅವರು ಇರಬಹುದು. ಆದರೆ ಅವರೊಂದಿಗೆ ವೈಯಕ್ತಿಕ ಸ್ನೇಹ ಇದೆ. ರಾಜಕೀಯವಾಗಿ ಅವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಿ ಅವರನ್ನು ಇಲ್ಲಿಗೆ ಕರೆಸಲಾಗುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಈ ಹಿಂದೆ ಚುನಾವಣೆ ಪೂರ್ವದಲ್ಲಿ ಮಾರುಕಟ್ಟೆಯಲ್ಲಿ ನಾನು ಮೂಟೆ ಹೊತ್ತಿದ್ದಕ್ಕೆ ಚುನಾವಣೆಯಲ್ಲಿ ಗೆದ್ದ ಮೇಲೆ ಚಿರಂಜೀವಿರವರು ನನ್ನನ್ನು ಮನೆಗೆ ಕರೆಸಿ ಊಟ ಕೊಡಿಸಿ ಟಿಪ್ಸ್ ಕೊಟ್ಟು ಕಳಿಸಿದ್ದಾರೆಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
Ad
ಒಳ ಮೀಸಲಾತಿ ಸಮೀಕ್ಷೆಗೆ ಸಿಗದ ಶೇ.5.1ರಷ್ಟು ಜನ!
Gudibanda: ಮುಂಜಾಗೃತ ಕ್ರಮಗಳಿಲ್ಲದೆ ಚರಂಡಿಗಿಳಿದ ಪೌರಕಾರ್ಮಿಕರು
Gudibande: ರೈತರಿಂದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ
ರಾಜ್ಯ ಸಚಿವ ಸಂಪುಟ ಸಭೆಗೆ ಕ್ಷಣಗಣನೆ: ನಂದಿ ಸಚಿವ ಸಂಪುಟ ಸಭೆ ಮೇಲೆ ಭಾರೀ ನಿರೀಕ್ಷೆ !
Gudibande: ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ..!
You seem to have an Ad Blocker on.
To continue reading, please turn it off or whitelist Udayavani.