ತಿಪ್ಪೆ ಗುಂಡಿ ಕಸದಲ್ಲೂ ಬಿಜೆಪಿ ದುಡ್ದು ಹೊಡೆಯುತ್ತಿದೆ: ಮಧು ಬಂಗಾರಪ್ಪ
Team Udayavani, Dec 5, 2021, 8:13 PM IST
ಶಿರಸಿ: ಗ್ರಾಮ ಪಂಚಾಯ್ತಿಗಳ ಮೂಲಕ ತಿಪ್ಪೆಗುಂಡಿಗೆ ಹಾಕುವ ಕಸದಲ್ಲೂ ಹಣ ಹೊಡೆಯುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಆರೋಪಿಸಿದರು.
ರವಿವಾರ ಅವರು ಚನ್ನಾಪುರ ಕೆರೆ ಸಮೀಪದಲ್ಲಿ ಭೀಮಣ್ಣ ನಾಯ್ಕ ಅವರ ಪರವಾಗಿ ಮಾತನಾಡಿ, ಗ್ರಾಮ ಪಂಚಾಯತ್ ಹಣದಲ್ಲಿ ಬಿಜೆಪಿ ಪರ್ಸಂಟೇಜ್ ಹೊಡೆಯುತ್ತಿದೆ. ಅದಕ್ಕಾಗಿ ಕಸದಲ್ಲೂ ಹಣ ಮಾಡಲು ಹೊರಟಿದೆ ಎಂದರು.
ಈಗಿನ ಸರಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂಬ ವಾತಾವರಣ ಇದೆ ಎಂದರು.
ಬಿಜೆಪಿ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದ ಅವರು, ಬಂಗಾರಪ್ಪ ಅವರು ಇಂದು ಇಲ್ಲದೇ ಇರಬಹುದು. ಆದರೆ, ಅವರ ಕೊಡುಗೆಗಳು ರೈತರಿಗೆ, ಬಡವರಿಗೆ ನೆರವಾಗಿದೆ. ಸಿದ್ದರಾಮಯ್ಯ ಅವರು ಹಸಿದ ಹೊಟ್ಟೆಗೆ ಅನ್ನ ಕೊಟ್ಟವರು ಎಂದರು.
ಧರ್ಮ ಜಾತಿಯ ಹೆಸರಿನಲ್ಲಿ ಬಿಜೆಪಿ ಒಡೆದು ಆಳುತ್ತಿದೆ. ಹಿಂದೆ ಬ್ರಿಟೀಷ್ ಮಾಡಿದ್ದು ಈಗ ಬಿಜೆಪಿ ಮಾಡುತ್ತಿದೆ ಎಂದರು.
ಮೂರನೇ ಸಲ ಭೀಮಣ್ಣ ಸ್ಪರ್ಧೆಗೆ ನಿಂತಿದ್ದಾರೆ. ಅವರಿಗೆ ಈ ಬಾರಿ ಶಿಕ್ಷೆ ಕೊಡಬೇಡಿ. ಬಂಗಾರಪ್ಪ ಅವರಿಗೆ ಭೀಮಣ್ಣ ಅವರು ವಿಧಾನ ಸಭೆಗೆ ಹೋಗಬೇಕು ಎಂಬುದು ಕನಸಿತ್ತು. ಅದನ್ನು ನನಸಾಗಿಸುವ ಕಾರ್ಯ ಆಗಬೇಕು ಎಂದರು.
ಈ ವೇಳೆ ಸತೀಶ ನಾಯ್ಕ, ಎಸ್.ಕೆ.ಭಾಗವತ್, ಜಗದೀಶ ಗೌಡ, ಪ್ರದೀಪ ಶೆಟ್ಟಿ, ಅಬ್ಬಾಸ ತೋನಸೆ, ಸಿ.ಏಪ್.ನಾಯ್ಕ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami: ಅಯೋಧ್ಯೆಯಲ್ಲಿ ಬಾಲರಾಮನ ಹಣೆಯನ್ನು ಸ್ಪರ್ಶಿಸಿದ ಸೂರ್ಯರಶ್ಮಿ!
Udupi: ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದು ಖಚಿತ – ಡಾ. ಆರತಿ ಕೃಷ್ಣ
Delhi Liquor Scam:ತಿಹಾರ್ ಜೈಲಿನೊಳಗೆ ಬಿಆರ್ ಎಸ್ ನಾಯಕಿ ಕವಿತಾಳನ್ನು ಬಂಧಿಸಿದ ಸಿಬಿಐ
Liquor Policy Case: ಅರವಿಂದ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಕೆಲಸದಿಂದ ವಜಾ
Arvind Kejriwal: ಜಾಮೀನಿಗಾಗಿ ಮತ್ತೆ ಸುಪ್ರೀಂಕೋರ್ಟ್ ಕದತಟ್ಟಿದ ಕೇಜ್ರಿವಾಲ್
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ