ಮಧುಗಿರಿ: ಈಜಲು ಹೋಗಿ ದೊಣೆಯಲ್ಲಿ ಮುಳುಗಿ ಯುವಕ ಸಾವು
Team Udayavani, Oct 8, 2022, 6:53 PM IST
ಮಧುಗಿರಿ: ಈಜು ಬಾರದಿದ್ದರೂ ಈಜಲು ಹೋಗಿದ್ದ ಯುವಕ ನೀರುಪಾಲಾಗಿ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಕಸಬಾ ಮೀನಗೊಂದಿ ರಂಗನಾಥ ಸ್ವಾಮಿ ಬೆಟ್ಟದ ದೊಣೆ ದೊಣೆ (ಬೆಟ್ಟದ ಮೇಲಿರುವ ಸ್ವಾಭಾವಿಕ ಹೊಂಡ)ಯಲ್ಲಿ ಮುಳುಗಿ ಮೃತಪಟ್ಟಿದ್ದು, ಈತ ಬೆಂಗಳೂರು ಮೂಲದ ಬಲರಾಮ್ ರಾಜು (25) ಎಂದು ಗುರುತಿಸಲಾಗಿದೆ. ಈತ ಕುಟುಂಬ ಸಮೇತ ತನ್ನ ಅಕ್ಕನ ಮದುವೆಯ ಆಮಂತ್ರಣ ಪತ್ರಿಕೆಯೊಂದಿಗೆ ಶ್ರೀ ರಂಗನಾಥ ಸ್ವಾಮಿಯ ದರ್ಶನಕ್ಕೆ ಬಂದಿದ್ದರು.
ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ಈತ ಮೆಟ್ಟಿಲುಗಳ ಮೇಲೆ ಕಾಲಿಡುವಾಗ ಜಾರಿ ದೊಣೆಯಲ್ಲಿ ಬಿದ್ದಿದ್ದಾನೆ. ಕಾಪಾಡಲು ಈಜು ಬಾರದ ಸಹೋದರ ಕೂಡ ಇಳಿದಿದ್ದು ರಕ್ಷಿಸಲು ಸಾಧ್ಯವಾಗಲಿಲ್ಲ. ನಂತರ ದೊಣೆಯ ಮಧ್ಯಭಾಗಕ್ಕೆ ಹೋಗಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಘಟನೆಯನ್ನು ಕಣ್ಣಮುಂದೆಯೇ ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳ ನೆರವಿಂದ ಮೃತದೇಹವನ್ನು ಹೊರತಗೆಯಲಾಯಿತು. ಪ್ರಕರಣ ಮಧುಗಿರಿ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ