ಇಫಿ ಚಿತ್ರೋತ್ಸವ: ದಿನೇಶ್ ಶೆಣೈಯವರ ‘ಮಧ್ಯಂತರ’ ನ. 27 ರಂದು ಪ್ರದರ್ಶನ


Team Udayavani, Nov 20, 2022, 2:38 PM IST

ಇಫಿ ಚಿತ್ರೋತ್ಸವ: ದಿನೇಶ್ ಶೆಣೈಯವರ ಮಧ್ಯಂತರ ನ. 27 ರಂದು ಪ್ರದರ್ಶನ

ಪಣಜಿ: ಮಧ್ಯಂತರ! ಒಂದು ಸಿನಿಮಾದ ಪೂರ್ವಾರ್ಧ ಮುಗಿದು ಉತ್ತರಾರ್ಧ ಆರಂಭವಾಗುವ ಮಧ್ಯೆ ಸಿಗುವ ಅಥವಾ ಥಿಯೇಟರ್ ನವರು ಬಿಡುವ ವಿರಾಮದ ಸಮಯ.

ಮಂಗಳೂರಿನ ದಿನೇಶ್ ಶೆಣೈಯವರು ಇದೇ ಹೆಸರಿನ ಒಂದು ಕಥೇತರ ಸಿನಿಮಾ (ನಾನ್ ಫೀಚರ್) ವನ್ನು ರೂಪಿಸಿದ್ದಾರೆ.

ವಿಶೇಷವೆಂದರೆ ಈ ಬಾರಿಯ ಗೋವಾ ಇಫಿ ಚಿತ್ರೋತ್ಸವದ ಭಾರತೀಯ ಸಿನಿಮಾ (ಇಂಡಿಯನ್ ಪನೋರಮಾ ) ವಿಭಾಗದ ಕಥೇತರ ವಿಭಾಗದಲ್ಲಿ ಅಯ್ಕೆಯಾಗಿ ನವೆಂಬರ್ 27 ರಂದು ಪ್ರದರ್ಶನವಾಗುತ್ತಿದೆ.

ಸಿನಿಮಾ ಮಾಧ್ಯಮದ ಮೇಲಿನ ಮೋಹದ ಕುರಿತು ಸಾಕಷ್ಟು ಚಿತ್ರಗಳು ದೇಶ ವಿದೇಶಗಳಲ್ಲಿ ಬಂದಿವೆ. ಸಿನಿಮಾ ಪ್ಯಾರಡಿಸೋದಿಂದ ಹಿಡಿದು ಇತ್ತೀಚಿನ ಗುಜರಾತಿ ಭಾಷೆಯ ಚಲ್ಲೋ ಶೋ ದವರಗೂ ಹಲವು ಸಿನಿಮಾಗಳು ಬಿತ್ತರಿಸಿರುವುದು ಸಿನಿಮಾ ಮಾಧ್ಯಮದ ಪ್ರಭಾವ ಮತ್ತು ಮೇಲಿನ ಪ್ರೀತಿಯನ್ನೇ. ಈ ಅನನ್ಯತೆಯೂ ಸಹ ಚಲನಚಿತ್ರ ಮಾಧ್ಯಮದಲ್ಲಿನ ಚಲನಶೀಲತೆ (ಪ್ರಯೋಗಶೀಲತೆ) ಯನ್ನು ಉಳಿಸಿವೆ ಎನ್ನಬಹುದು.

ಇಂಥದ್ದೇ ಒಂದು ಸಣ್ಣ ಎಳೆಯನ್ನು ಆಧರಿಸಿ ಹೊಸ ಜಗತ್ತನ್ನು ಅದರಲ್ಲೂ ಐದು ದಶಕಗಳ ಹಿಂದಿನ ಜಗತ್ತು ಹಾಗೂ ಸಂವೇದನೆಯನ್ನು ಹಿಡಿದಿಡಲು ಪ್ರಯತ್ನಿಸಿರುವ ಸಿನಿಮಾ ಮಧ್ಯಂತರ. ಇಬ್ಬರು ಹುಡುಗರು ಸಿನಿಮಾ ಮಾಧ್ಯಮದ ಬಗೆಗಿನ ಮೋಹಕ್ಕೆ ಬಿದ್ದು ಒಬ್ಬ ಸಾಮಾನ್ಯ ಪ್ರೇಕ್ಷಕರ ಸ್ಥಾನದಿಂದ ಸಿನಿಮಾಕರ್ತರಾಗುವ ಮಟ್ಟಿಗೆ ಬೆಳೆಯಲು ಯತ್ನಿಸುವುದೇ ಬಹಳ ದೊಡ್ಡದು. ಈ ಮಹಾತ್ವಕಾಂಕ್ಷೆ ಹಾಗೂ ಸಕಾರಾತ್ಮಕವಾದ ಛಲವನ್ನು ಕಡೆದುಕೊಡಲು ಪ್ರಯತ್ನಿಸಿದ್ದಾರೆ ದಿನೇಶ್ ತಮ್ಮ ಕಲಾಕೃತಿಯಲ್ಲಿ.

ಈ ಬಾರಿ ಭಾರತೀಯ ಪನೋರಮಾ ವಿಭಾಗದಡಿ ಮೂರು ಚಿತ್ರಗಳು ಅಯ್ಕೆಯಾಗಿವೆ. ಪೃಥ್ವಿ ಕೊಣನೂರು ಅವರ ಹದಿನೇಳೆಂಟು ಚಿತ್ರ ವಿಭಾಗದ ಉದ್ಘಾಟನಾ ಚಿತ್ರ. ಉಳಿದಂತೆ ನಾನು ಕುಸುಮ ಹಾಗೂ ಮಧ್ಯಂತರ ಪ್ರದರ್ಶನಗೊಳ್ಳುತ್ತಿರುವ ಇತರೆ ಕನ್ನಡ ಚಿತ್ರಗಳು.

ದಿನೇಶ್ ಶೆಣೈಯವರು ತಮ್ಮ ಸಿನಿಮಾದ ಬಗ್ಗೆ ಕರಪತ್ರದಲ್ಲಿ ವಿವರಿಸಿರುವಂತೆ, “ಇದು ಸಂಪೂರ್ಣ 16 ಎಂ.ಎಂ. ಕೆಮರಾದಲ್ಲಿ ರೂಪಿಸಿರುವ ಚಿತ್ರ. ಆದರ ಸಂಸ್ಕರಣೆಯಿಂದ ಹಿಡಿದು ಎಲ್ಲವನ್ನೂ ಹಳೆಯ ಮಾದರಿಯನ್ನೇ ಆನುಸರಿಸಬೇಕಾಯಿತು. ಇದೊಂದು ವಿಶಿಷ್ಟ ಹಂಬಲದ ಪಯಣ. ಒಟ್ಟು ಐದು ದಶಕಗಳ ಹಿಂದಿನ ಒಂದು ನಡಿಗೆ’.

ಬಹಳ ಮುಖ್ಯವಾಗಿ 70-80 ರ ದಶಕಗಳು ಹಲವು ಕಾರಣಗಳಿಗೆ ಪ್ರಮುಖವಾದವು. ಭಾರತೀಯ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಜನರ ಸಂವೇದನೆಯನ್ನು ರೂಪಿಸಿದ ದಶಕಗಳು. ಇಂದಿನ ಅಧುನಿಕ ಸಂದರ್ಭ ಆಥವಾ ತಾಂತ್ರಿಕ ಅವಿಷ್ಕಾರಗಳ ಜಗತ್ತಿನಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಸಾಧ್ಯವಾಗಿಸುವ ಹಾಗೂ ದಕ್ಕಿಸಿಕೊಳ್ಳುವ ಹೊತ್ತಿನಲ್ಲಿ ಹಳೆಯ ಕಾಲದ ಪಯಣದ ಆನುಭವ ಮತ್ತು ಸುಖ ವಿಭಿನ್ನವಾಗಿ ತೋರಬಹುದು. ಬಹುಶಃ ಅ ಜಾಡನ್ನು ಹಿಡಿಯುವ ಪ್ರಯತ್ನ ಈ ಮಧ್ಯಂತರದಲ್ಲಿದೆ ಎಂಬುದು ದಿನೇಶ್ ಶೆಣೈಯವರು ತಮ್ಮ ಸಿನಿಮಾದ ಬಗ್ಗೆ ನೀಡಲಾದ ಮಾಹಿತಿ ಪುಸ್ತಿಕೆ ವಿವರಿಸುತ್ತದೆ.

ದಿನೇಶ್ ಶೆಣೈಯವರಿಗೆ ಸಿನೆಛಾಯಾಗ್ರಹಣದಲ್ಲಿ ಸುನಿಲ್ ಬೋರ್ಕರ್ ಮತ್ತು ಸಂಕಲನದಲ್ಲಿ ಸುರೇಶ್ ಅರಸ್, ಕಲಾ ನಿರ್ದೇಶನದಲ್ಲಿ ವಿನೋದ್ ರಾಜ್ ಪುತ್ತೂರು ಸಹಕರಿಸಿದ್ದಾರೆ. ನಟ ವರ್ಗದಲ್ಲಿ ಅಜಯ್ ನೀನಾಸಂ, ರಮೇಶ್ ಪಂಡಿತ್, ಗಣೇಶ್ ಶೆಣೈ, ರಾಜಕುಮಾರ್ ಶ್ರೀನಿವಾಸನ್, ಶಿವು ನೀನಾಸಂ ಹಾಗೂ ಚಂದ್ರ ಮೋಹನ್ ಮತ್ತಿತರರಿದ್ದಾರೆ.

ಟಾಪ್ ನ್ಯೂಸ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.