ಮಂಗಳೂರು: ಜಿಲ್ಲೆಯಲ್ಲಿ ಕ್ಲಿಕ್‌ ಆಗದ ನೋಟಾ; ನೋಟಾ ನಿರಾಸಕ್ತಿ ಯಾಕೆ?

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯಗಳೇನೂ ನೋಟಾಕ್ಕೆ ಇರಲಿಲ್ಲ

Team Udayavani, Mar 28, 2023, 10:22 AM IST

ಮಂಗಳೂರು: ಜಿಲ್ಲೆಯಲ್ಲಿ ಕ್ಲಿಕ್‌ ಆಗದ ನೋಟಾ; ನೋಟಾ ನಿರಾಸಕ್ತಿ ಯಾಕೆ?

ಮಂಗಳೂರು: ಕಣದಲ್ಲಿರುವ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ, ಅವರ ಮೇಲೆ ಭರವಸೆ ಇಲ್ಲ ಎಂಬ ಅಭಿಪ್ರಾಯ ಹೊಂದಿರುವ ಮತದಾರರಿಗೆ ಚುನಾವಣ ಆಯೋಗ ನೀಡಿರುವ ಅವಕಾಶ ನೋಟಾ (ನನ್‌ ಆಫ್‌ ದಿ ಎಬವ್‌.) 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನೋಟಾ ಚಾಲ್ತಿಗೆ ಬಂದಿತು. ಇದುವರೆಗೆ 3 ಚುನಾವಣೆಗಳಲ್ಲಿ ಬಳಕೆಯಾಗಿದೆ. ಆದರೆ ಎಲ್ಲೂ ಗಣನೀಯವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಿಲ್ಲ.

ದಕ್ಷಿಣ ಕನ್ನಡದಲ್ಲೂ 2014ರಲ್ಲಿ ನೋಟಾ ಪರಿಚಯಿಸಲ್ಪಟ್ಟಿತು. ಆಗ ಸಹ್ಯಾದ್ರಿ ಸಂಚಯ ಎಂಬ ಪರಿಸರಾಸಕ್ತರ ಗುಂಪು ನೋಟಾಕ್ಕೆ ಒತ್ತು ನೀಡಿತು. ಮುಖ್ಯವಾಗಿ ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ಹಾನಿಯಾಗುತ್ತದೆ. ಪರಿಣಾಮವಾಗಿ ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ಬಳಲುತ್ತಾಳೆ, ಎಲ್ಲ ಪಕ್ಷಗಳೂ ಎತ್ತಿನಹೊಳೆ ವಿಷಯದಲ್ಲಿ ಜಿಲ್ಲೆಯ ಜನರನ್ನು ವಂಚಿಸಿವೆ. ಹಾಗಾಗಿ ಎಲ್ಲ ಅಭ್ಯರ್ಥಿಗಳನ್ನೂ ಧಿಕ್ಕರಿಸಿ, ನೋಟಾ ಮತ ಚಲಾಯಿಸಿ ಎಂದು ಪ್ರಚಾರ ಮಾಡಿತು.

ಆದರೆ ಪಕ್ಷ ರಾಜಕೀಯ ಪ್ರಮುಖವಾಗಿರುವ ಜಿಲ್ಲೆಯಲ್ಲಿ ನೋಟಾಕ್ಕೆ ಅಷ್ಟಾಗಿ ಯಶಸ್ಸು ಸಿಗಲಿಲ್ಲ. ಒಟ್ಟು 7,109 ಮತಗಳು ನೋಟಾಕ್ಕೆ ಬಿದ್ದವು. ಅಂದರೆ ಚಲಾವಣೆಯಾದ ಒಟ್ಟು ಮತಗಳ ಶೇ 0.59ರಷ್ಟು.

2018ರಲ್ಲಿ ವಿಧಾನಸಭಾ ಚುನಾವಣೆ. ಆಗಲೂ ಎತ್ತಿನಹೊಳೆ ವಿಷಯ ಮುನ್ನೆಲೆಗೆ ಬಂದಿತು. ಜತೆಗೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಗದಿರುವ ಕಾಮಗಾರಿ, ಹಾಲಿ ಶಾಸಕರ ವಿರುದ್ಧ ಅಸಮಾಧಾನ ಎಲ್ಲವೂ ಸೇರಿತು. ಹಾಗಿದ್ದರೂ ದೊಡ್ಡ ಸಂಖ್ಯೆಯಲ್ಲಿ ನೋಟಾಕ್ಕೆ ಮತದಾರರು ಮುಂದಾಗಲಿಲ್ಲ. ಒಟ್ಟು 8,823 ಮತಗಳು ನೋಟಾದಡಿ ಬಿದ್ದವು. ಸುಳ್ಯದಲ್ಲಿ ಗರಿಷ್ಠ ಎಂದರೆ 1,310 ಮತಗಳು(ಶೇ. 0.78), ಕನಿಷ್ಠ ಬಂಟ್ವಾಳದಲ್ಲಿ 946(ಶೇ.0.52) ಮತಗಳು ಬಿದ್ದವು.

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯಗಳೇನೂ ನೋಟಾಕ್ಕೆ ಇರಲಿಲ್ಲ. ನೋಟಾ ಪರವಾಗಿ ಪ್ರಚಾರ ಮಾಡುವುದು, ನೋಟಾ ಮತ ಚಲಾಯಿಸುವಂತೆ ಸಂಘ ಸಂಸ್ಥೆಗಳು ಆಗ್ರಹಿಸುವುದು ಸರಿಯಲ್ಲ, ಅದು ನಿಯಮಬಾಹಿರ ಎಂದು ಜಿಲ್ಲಾಧಿಕಾರಿಗಳು ಕೆಲವೆಡೆ ನೇರವಾಗಿ ತಿಳಿಸಿದ್ದರು. ಎಲ್ಲದರ ಪರಿಣಾಮ ಆ ವರ್ಷ ನೋಟಾ ಮತ 7,380 ಆಗಿತ್ತು. ಹಿಂದಿನ ಸಂಸತ್‌ ಚುನಾವಣೆಗೆ ಹೋಲಿಸಿದರೆ ಒಟ್ಟು ಮತಗಳಲ್ಲಿ ನೋಟಾ ಮತಗಳ ಶೇಕಡಾವಾರು ಇಳಿಕೆಯಾಗಿ 0.55ಕ್ಕೆ ತಲುಪಿತು. ಹಾಗಾಗಿ ನೋಟಾ ಜಿಲ್ಲೆಯಲ್ಲಿ ಅಷ್ಟಾಗಿ ಪ್ರಭಾವ ಬೀರಿಲ್ಲ ಎಂದೇ ವಿಶ್ಲೇಷಿಸಲಾಗುತ್ತದೆ.

ಈ ವರ್ಷವೂ ಕಡಿಮೆ?
ಮುಖ್ಯವಾಗಿ ಸುಳ್ಯದ ಕೆಲವೆಡೆ ಮತದಾನ ಬಹಿಷ್ಕಾರದ ಕೂಗು ಇರುವುದು, ಈಗ ನೋಟಾ ಪರವಾಗಿ ಪರಿವರ್ತಿತಗೊಂಡಿರಬಹುದು. ಆರಂತೋಡಿನಂತಹ ಭಾಗಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗದಿದ್ದರೆ ನೋಟಾ ಮತ ಹಾಕುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಅದು ಬಿಟ್ಟರೆ ನೋಟಾಕ್ಕೆ ಒಲವು ತೋರುವಂಥ ವಿಷಯಗಳು ಇನ್ನೂ ಚರ್ಚೆಗೆ ಬಂದಿಲ್ಲ.

ನೋಟಾ ನಿರಾಸಕ್ತಿ ಯಾಕೆ?
ವಿಷಯ ಸರಳ, ನಮ್ಮ ಕಡೆ ಹೆಚ್ಚಿನವರಿಗೆ ಚುನಾ ವಣ ಪ್ರಕ್ರಿಯೆ, ಮತದಾನದಲ್ಲಿ ಆಸಕ್ತಿ ಇದೆ. ಅಂಥವರೆ ಲ್ಲರೂ ಮತಗಟ್ಟೆಗೆ ತೆರಳಿ ಮತ ಹಾಕುತ್ತಾರೆ. ಯಾರಿಗೆ ನಿರಾಸಕ್ತಿ ಇದೆಯೋ ಅವರು ದೂರ ಉಳಿಯುತ್ತಾರೆ. ನೋಟಾದಿಂದ ಯಾವುದೇ ಪರಿಣಾಮ ಇಲ್ಲದಿರುವಾಗ ಮತಗಟ್ಟೆಗೆ ಬಂದು ನೋಟಾ ಹಾಕುವಷ್ಟು ಆಸಕ್ತಿ ತೋರುವುದಿಲ್ಲ.
ಡಾ|ಪಿ.ಅನಂತಕೃಷ್ಣ ಭಟ್‌, ಚುನಾವಣ ವಿಶ್ಲೇಷಕರು

ಸಂಸತ್‌ ಚುನಾವಣೆ
2014- ನೋಟಾ ಮತ 7,109(ಶೇ. 0.59)

2019 -ನೋಟಾ ಮತ 7,380(ಶೇ.0.55)

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.