Mangaluru ಸತ್ಯ, ನ್ಯಾಯ, ಧರ್ಮಕ್ಕಾಗಿ ನಾಳೆ ಸಾಮೂಹಿಕ ಪ್ರಾರ್ಥನೆ
Team Udayavani, Aug 17, 2023, 6:05 AM IST
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಂತಹ ಶ್ರದ್ಧಾ ಕೇಂದ್ರಕ್ಕೆ ಕಳಂಕ ತರುವುದರೊಂದಿಗೆ ಧರ್ಮಾಧಿಕಾರಿಗಳ ವಿರುದ್ಧ ಆಪಾದನೆಗಳ ಪರಿಹಾರಾರ್ಥ ಹಾಗೂ ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನ ಮತ್ತು ದೈವಸ್ಥಾನ ಗಳ ರಕ್ಷಣೆ ಮತ್ತು ಸೌಜನ್ಯಾ ಪ್ರಕರಣದ ನ್ಯಾಯಕ್ಕಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲ ಪ್ರಸಿದ್ಧ ದೇವಾಲಯಗಳ ಭಕ್ತವೃಂದ ಒಟ್ಟುಗೂಡಿ ಶ್ರಾವಣ ಮಾಸದ ಮೊದಲ ಶುಕ್ರವಾರ ಆ. 18ರಂದು ಸತ್ಯ – ನ್ಯಾಯ – ಧರ್ಮಕ್ಕಾಗಿ ಸಾಮೂಹಿಕ ಪ್ರಾರ್ಥನೆ ನಡೆಸಲು ಉದ್ದೇಶಿಸಲಾಗಿದೆ.
ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಯ ಎಲ್ಲ ಊರಿನ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕು ಎಂದು ಹಿಂದೂ ಶ್ರದ್ಧಾ ಕೇಂದ್ರಗಳ ರಕ್ಷಣ ಸಮಿತಿಯು ಪ್ರಕಟನೆಯಲ್ಲಿ ವಿನಂತಿಸಿದೆ.