ಮಂಗಳೂರು: ಪಾರ್ಟ್ಟೈಮ್ ಜಾಬ್ 1.75 ಲಕ್ಷ ರೂ. ವಂಚನೆ
Team Udayavani, Mar 24, 2023, 10:15 PM IST
ಮಂಗಳೂರು: ವಾಟ್ಸಾಪ್ ಗೆ ಬಂದ ಸಂದೇಶದಂತೆ ಗ್ರೂಪ್ ಒಂದಕ್ಕೆ ಸೇರಿದ ಪರಿಣಾಮ ವ್ಯಕ್ತಿಯೊಬ್ಬರು 1.75 ಲಕ್ಷ ರೂ. ವಂಚನೆಗೊಳಗಾದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದೂರುದಾರರು ನೀಡಿರುವ ಹೇಳಿಕೆಯಂತೆ, ಇ ಕೆರಿಯರ್ ಬಿಲ್ಡರ್ ಎಂಬ ಟೆಲಿಗ್ರಾಮ್ ಚಾನಲ್ಗೆ ಸೇರುವಂತೆ ಸಂದೇಶ ಬಂದ ಕಾರಣ ಗ್ರೂಪ್ ಗೆ ಸೇರಿದ್ದರು. ಅಲ್ಲಿ ಪಾರ್ಟ್ಟೈಮ್ ಉದ್ಯೋಗದ ಬಗ್ಗೆ ವಿವರಗಳನ್ನು ತಿಳಿಸಿ, ಗ್ರೂಪ್ನಲ್ಲಿ ಅವರು ಕಳುಹಿಸುವ ಯೂಟ್ಯೂಬ್ ಚಾನೆಲ್ ಲಿಂಕ್ಗಳನ್ನು ಲೈಕ್ ಮತ್ತು ಸಬ್ಸ್ಕ್ರೈಬ್ ಮಾಡಲು ತಿಳಿಸಲಾಗಿತ್ತು.
ಅದರಂತೆ ದೂರುದಾರರು ಲೈಕ್ ಮತ್ತು ಸಬ್ಸ್ಕ್ರೈಬ್ ಮಾಡಿದ್ದಾರೆ. ಮೊದಲ ಹಂತದಲ್ಲಿ 7900 ರೂ. ಇವರಿಗೆ ಜಮೆಯಾಗಿದೆ. ನಂತರ ಆರೋಪಿಗಳು ಯೂ ಟ್ಯೂಬ್ ಚಾನೆಲ್ಗಳನ್ನು ಹೊರತಾಗಿ ಪ್ರೀಪೇಯ್ಡ ಟಾಸ್ಕ್ಗಳನ್ನು ಪರಿಚಯಿಸಿ ಹಣ ಹಾಕುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ಮಾ.22ರಂದು ಟೆಲಿಗ್ರಾಮ್ ಚಾನಲ್ ಮೂಲಕ ಸ್ವೀಕೃತವಾದ ಖಾತೆ ಸಂಖ್ಯೆಗೆ ತನ್ನ ಪತ್ನಿಯ ಖಾತೆಯಿಂದ 1.50 ಲಕ್ಷ ರೂ. ಹಾಗೂ ತನ್ನ ಬ್ಯಾಂಕ್ ಖಾತೆಯಿಂದ 25 ಸಾವಿರ ರೂ. ಕಳುಹಿಸಿದ್ದಾರೆ. ನಂತರ ದೂರುದಾರರು ಹೂಡಿಕೆ ಮಾಡಿದ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು ತಾನು ಮೋಸ ಹೋಗಿರುವ ಅರಿವಾಗಿ ದೂರು ನೀಡಿದ್ದಾರೆ.
ಟೆಲಿಗ್ರಾಮ್ ಚಾನೆಲ್ನಲ್ಲಿ ಮೋಸ ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ