Maratha: ಮೀಸಲು ಬಿಕ್ಕಟ್ಟು; ಸಿಎಂ ಶಿಂಧೆಗೆ ಇಕ್ಕಟ್ಟು

ಮರಾಠ ಮೀಸಲು ಸಮಸ್ಯೆ ಪರಿಹಾರಕ್ಕೆ ಕಸರತ್ತು

Team Udayavani, Sep 6, 2023, 12:27 AM IST

SHINDE

ಮುಂಬಯಿ: ಮರಾಠ ಮೀಸಲು ಕುರಿತಂತೆ ಮಹಾ ರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವು ಸಿಎಂ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಭಟನಕಾರರ ಮೇಲಿನ ಲಾಠಿ ಚಾರ್ಜ್‌ಗೆ ಡಿಸಿಎಂ, ಗೃಹಸಚಿವ ದೇವೇಂದ್ರ ಫ‌ಡ್ನವೀಸ್‌ರನ್ನು ವಿಪಕ್ಷಗಳು ಗುರಿಯಾ ಗಿಸಿದರೆ, ಇತ್ತ ಶಿಂಧೆ ತಮ್ಮ ಸರಕಾರದ ಮೇಲಿನ ಆರೋಪಗಳನ್ನು ಬದಿಗಿರಿಸಿ, ಪ್ರತಿಭಟನಕಾರರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಮಸ್ಯೆ ಶಮನಗೊಳಿಸಲು ಹೆಣ ಗಾ ಡುತ್ತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಮೈತ್ರಿಕೂಟಕ್ಕೆ ಸೇರಿದ ಅಜಿತ್‌ ಪವಾರ್‌ ಅವರ ವಿರದ್ಧವೂ ಪ್ರತಿಭಟನೆ ಹೆಸರಿನಲ್ಲೇ ವಿಪಕ್ಷಗಳು ರಾಜಕೀಯ ದಾಳ ಉರುಳಿಸಲು ಮುಂದಾಗಿವೆ.

ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ಗೆ ವಿಪಕ್ಷಗಳು ಸರಕಾರವೇ ನೇರ ಹೊಣೆ ಎಂದು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಫ‌ಡ್ನವೀಸ್‌ ಪೊಲೀಸರ ಪರವಾಗಿ ತಾವೇ ಕ್ಷಮೆಯಾಚಿಸಿದರು. ಆದರೂ ವಿವಾದ ಬಗೆಹರಿಯಲು ಬಿಡದ ಎನ್‌ಸಿಪಿ ಹಾಗೂ ಉದ್ಧವ್‌ ಬಣದ ನಾಯಕರು ಫ‌ಡ್ನವೀಸ್‌ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್‌ ನಡೆಸಲು ಸಚಿವಾಲಯದಿಂದ ಅದೇಶ ಬಂದಿರಲೇಬೇಕು ಅಥವಾ ಉನ್ನತಾಧಿಕಾರಿಗಳ ಆದೇಶವಿಲ್ಲದೇ ಕ್ರಮ ತೆಗದುಕೊಂಡಿದ್ದಾರೆಂದರೆ ಅಲ್ಲಿಗೆ ಗೃಹ ಸಚಿವರಿಗೆ ಆಡಳಿತದ ಮೇಲೆ ಹಿಡಿತವಿಲ್ಲವೆಂದೇ ಅರ್ಥ ಈ ಹಿನ್ನೆಲೆಯಲ್ಲಿ ತಪ್ಪನ್ನು ಒಪ್ಪಿಕೊಂಡು ಫ‌ಡ್ನವೀಸ್‌ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇತ್ತ ಅಜಿತ್‌ ಪವಾರ್‌ ಅವರ ಸ್ವಗ್ರಾಮ ಬಾರಾಮತಿಯಲ್ಲಿ ಪ್ರತಿಭಟನೆಕಾರರ ಜಮಾಯಿಸಿ, ಸರಕಾರದಿಂದ ಅಜಿತ್‌ ಹೊರಬರ ಬೇಕೆಂದು ಆಗ್ರಹಿಸಿದ್ದಾರೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಕೂಡ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ಮಾಡಿಸಿದ್ದು ತಪ್ಪು ಎಂದು ಸರಕಾರದತ್ತ ಕಲ್ಲು ಎಸೆದಿದ್ದಾರೆ. ಇದೆಲ್ಲದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಆದಾಗ್ಯೂ, ಬಿಕ್ಕಟ್ಟು ಶಮನ ಗೊಳಿಸಲು ಸಿಎಂ ಶಿಂಧೆ ಮತ್ತೆ ಪ್ರತಿಭಟನಕಾರರ ಬೇಡಿಕೆಯತ್ತ ವಾಲಿದ್ದು, ಮರಾಠ ಮೀಸಲಾತಿ ಸಮಸ್ಯೆ ಶೀಘ್ರ ಪರಿಹರಿಸ ಲಾಗುವುದು, ಈ ಸಂಬಂಧಿಸಿ ಸಮಿತಿಗೆ ಮುಂದಿನ 1 ತಿಂಗಳ ಒಳಗೆ ಶಿಫಾರಸು ನೀಡಲು ಆದೇಶಿಸಲಾಗಿದೆ. ಸರಕಾರ ಕೂಡ ಮರಾಠರ ಮೀಸಲಾತಿ ಬೇಡಿಕೆಯ ಪರವಿದೆ ಎಂದು ಹೇಳಿಕೆ ನೀಡುವ ಮೂಲಕ ಸರಕಾರ ಉಳಿಸಿಕೊಳ್ಳಲು ಮುಂದಡಿ ಇಟ್ಟಿದ್ದಾರೆ.

 

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.