ʻಮಿಶ್ರಾʼ ಸಾವಯವ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ

ಗಾಣ ಮಾಡಿ ಬೆಲ್ಲ ತಯಾರಿಕೆ |ಎಕರೆಗೆ 2 ಲಕ್ಷ ರೂ. ಆದಾಯ | ಎಂಜಿನಿಯರ್‌ ಜೀತೇಂದ್ರ ಮಿಶ್ರಾ ಸಾಧನೆ

Team Udayavani, Feb 8, 2023, 12:21 PM IST

JAGGERY

ಕಲಬುರಗಿ: ಕೃಷಿಯಲ್ಲಿ ತಾಳ್ಮೆ-ದುಡಿಮೆ ಹೊಂದಿದ್ದಲ್ಲಿ ಖಂಡಿತವಾಗಿ ಯಶಸ್ಸು ಹೊಂದಬಹುದು. ಭೂಮಿ ತಾಯಿಗಾಗಿ ದುಡಿದರೆ ಖಂಡಿತ ಕೈ ಹಿಡಿಯುತ್ತಾಳೆ ಎಂಬುದಕ್ಕೆ ಬಿಇ ಎಂಜಿನಿಯರಿಂಗ್‌ ಪದವಿ ಹೊಂದಿ ಕೃಷಿ ಕಾಯಕ ಮೈಗೂಡಿಸಿಕೊಂಡು ಯಶಸ್ವಿ ರೈತನಾಗಿ ಹೊರ ಹೊಮ್ಮಿರುವ ಜೀತೇಂದ್ರ ಮಿಶ್ರಾ ಅವರೇ ಸಾಕ್ಷಿ. ಕಲಬುರಗಿ-ಬೀದರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮಹಾಗಾಂವ-ಕಮಲಾಪುರ ನಡುವೆ ಇರುವ 20 ಎಕರೆ ಜಮೀನನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಅದರಲ್ಲೂ ಕಬ್ಬಿನ ಗಾಣ (ಆಲೆಮನೆ) ರೂಪಿಸಿ ಸಾವಯವ ಬೆಲ್ಲ ತಯಾರಿಸಿ ಲಕ್ಷಾಂತರ ರೂ. ಆದಾಯ ಕಂಡುಕೊಳ್ಳುತ್ತಿದ್ದಾರೆ.

ನಗರದ ಶಹಾಬಜಾರ ನಿವಾಸಿ ಜೀತೇಂದ್ರ ಮಿಶ್ರಾ ಅಭಿವೃದ್ಧಿ ಕೃಷಿ ಕಾಯಕದಿಂದ ಜಿಲ್ಲಾದ್ಯಂತ ಮನೆ ಮಾತಾಗಿರುವುದು ಸಣ್ಣ ಸಾಧನೆಯಲ್ಲ. ಇದರ ಹಿಂದೆ ನಿರಂತರ ದುಡಿಮೆ-ತಾಳ್ಮೆಯ ಶ್ರಮವಿದೆ. ಸಾವಯವ ಕೃಷಿ ಅಳವಡಿಸಿಕೊಂಡ ಪ್ರಾರಂಭದ ಎರಡೂ ಮೂರು ವರ್ಷ ನಷ್ಟ ಅನುಭವಿಸಿದರೂ ಶ್ರದ್ಧೆಯಿಂದ ಕೃಷಿ ಕಾಯಕ ಕೈಗೊಂಡ ಪರಿಣಾಮ ಇಂದು ಯಶಸ್ವಿ ಹಾಗೂ ಪ್ರಗತಿಪರ ರೈತನಾಗಿ ಹೊರ ಹೊಮ್ಮಿದ್ದಾರೆ.

ಇದೇ ಕಾರಣಕ್ಕೆ ಅವರನ್ನು ರಾಜ್ಯ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಾವಯವ ಕೃಷಿ, ಮಾದರಿ ಕೃಷಿ ಹೊಂಡಗಳ ನಿರ್ಮಾಣ, ವಿವಿಧ ಹಣ್ಣು ಹಂಪಲು ಕೃಷಿ, ಹೈನುಗಾರಿಕೆ, ಅದರಲ್ಲೂ ಗಾಣದಿಂದ ತಯಾರಿಸುವ ಬೆಲ್ಲ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಕೃಷಿ ಕಾಯಕ ಅವಲೋಕಿಸುತ್ತಿದ್ದಾರೆ.

ತುಪ್ಪದಂತೆ ಮಾರಾಟವಾಗುತ್ತಿದೆ ಬೆಲ್ಲ:

ಕಬ್ಬು ಕಾರ್ಖಾನೆಗೆ ಸರಬರಾಜು ಮಾಡಬಹುದಿತ್ತು. ಆದರೆ ಬಿಲ್‌ಗಾಗಿ ಅಲೆಯುವ ಬದಲು ಜತೆಗೆ ಕಬ್ಬು ಕಟಾವು ಮಾಡಲು ಕಾರ್ಮಿಕರ ಸಮಸ್ಯೆ ಇರುವುದನ್ನು ಮನಗಂಡು ಗಾಣ ಮಾಡಿ ಬೆಲ್ಲ ತಯಾರಿಸಿದರೆ ಜನತೆಗೆ ಶುದ್ಧ ಬೆಲ್ಲ ನೀಡಬಹುದು ಎಂಬುದನ್ನು ಮನಗಂಡು ಕಬ್ಬಿಗೆ ಯಾವುದೇ ರಾಸಾಯನಿಕ ಗೊಬ್ಬರ ಹಾಕದೇ ಸಾವಯವ ಕೃಷಿ ಮೂಲಕ 1001 ತಳಿಯ ಕಬ್ಬಿನ ತಳಿ ಬೆಳೆದು ಅದರಿಂದ ಗಾಣ ಮಾಡಿ ಬೆಲ್ಲ ತಯಾರಿಸುತ್ತಿದ್ದಾರೆ.

ತಯಾರಿಸಿದ ಬೆಲ್ಲವನ್ನು ಗ್ರಾಹಕರು ಹೊಲಕ್ಕೆ ಹೋಗಿ ಖರೀದಿಸುತ್ತಿದ್ದಾರೆ. ನಗರದ ಅವರ ಮನೆಯಲ್ಲೂ ಮಾರಾಟ ಮಾಡುತ್ತಿರುವ ಜತೆಗೆ ದೂರದ ಊರಿನವರಿಗೆ ಕೋರಿಯರ್‌ ಮೂಲಕ ಕಳುಹಿಸಲಾಗುತ್ತಿದೆ. ಮಿಶ್ರಾ ಅವರ ಬೆಲ್ಲ ಗಾಣ ನಡೆಯುವ ಒಂದು ತಿಂಗಳು ಹಾಗೂ ತದನಂತರ ತಿಂಗಳಲ್ಲೇ ಸಂಪೂರ್ಣ ಮಾರಾಟವಾಗುತ್ತದೆ. ಹೊಲಕ್ಕೆ ಹಾಗೂ ಮನೆಗೆ ಬಂದು ಸಾರ್ವಜನಿಕರು, ಸೂಪರ್‌ ಶಾಪ್‌ನವರು ಖರೀದಿಸುತ್ತಿರುವುದರಿಂದ ಮಿಶ್ರಾ ಅವರಿಗೆ ಮಾರುಕಟ್ಟೆ ಸಮಸ್ಯೆಯೇ ಇಲ್ಲ.

ಕಬ್ಬಿನ (ಆಲೆಮನೆ) ಗಾಣದಿಂದ ಬೆಲ್ಲ ತಯಾರಿಕೆ ಈಗ ಅಪರೂಪ. ಕಾರ್ಮಿಕರ ಸಮಸ್ಯೆಯಿಂದ ಗಾಣದಿಂದ ಬೆಲ್ಲ ತಯಾರಿಕೆ ಕೈ ಬಿಟ್ಟು ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದಾರೆ. ಅದಲ್ಲದೇ 10 ಕೆಜಿಯುಳ್ಳ ಬೆಲ್ಲದ ಮುದ್ದೆ ತಯಾರಿಸಲಾಗುತ್ತಿದೆ. ಆದರೆ ಮಿಶ್ರಾ 15ರಿಂದ 50 ಗ್ರಾಂನಿಂದ ಹಿಡಿದು ಕೆಜಿ, ಐದು ಹಾಗೂ 10 ಕೆಜಿಯುಳ್ಳ ಬೆಲ್ಲದ ಮುದ್ದೆ ರೂಪಿಸುತ್ತಿದ್ದಾರೆ. ಮಕ್ಕಳಿಗೆ ಚಾಕೋಲೇಟ್‌ ಕೊಡುವ ಬದಲು 15 ಗ್ರಾಂ ಬೆಲ್ಲದ ತುಣಕು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದು ಹೊಸತನಕ್ಕೆ ಮುಂದಾಗಿದ್ದಾರೆ. ಈ ತರಹದ ಬೆಲ್ಲದ ಚಾಕೋಲೇಟ್‌ ಮಾದರಿಯಲ್ಲಿ ಕಬ್ಬಿನ ತುಣುಕು ಯಾರೂ ತಯಾರಿಸಿಲ್ಲ. ಪ್ರತ್ಯೇಕ ಸಾಧನ ರೂಪಿಸಿ ಚಾಕೋಕೇಟ್‌ ತಯಾರಿಸಲಾಗಿದೆ.

ಒಟ್ಟಾರೆ ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದಿದ್ದ ಸಾವಯವ ಕಬ್ಬನ್ನು ಗಾಣ ಮಾಡಿ ಎಕರೆಗೆ ಎರಡು ಲಕ್ಷ ರೂ.ದಂತೆ ಒಟ್ಟಾರೆ 7ರಿಂದ 8 ಲಕ್ಷ ರೂ. ಆದಾಯ ಕಂಡುಕೊಳ್ಳಲಾಗಿದೆ. ಒಂದು ವೇಳೆ ಕಬ್ಬು ಕಾರ್ಖಾನೆಗೆ ಸರಬರಾಜು ಮಾಡಿದ್ದರೆ ನಾಲ್ಕು ಲಕ್ಷ ರೂ. ಬರುತ್ತಿತ್ತು. ಆದರೆ ಆಲೆಮನೆಯಿಂದ ಬೆಲ್ಲ ತಯಾರಿಸಿದರೆ ನೂರಾರು ಕಾರ್ಮಿಕರಿಗೆ ಕೆಲಸ ಕೊಡುವ ಜತೆಗೆ ಜನರಿಗೆ ಉತ್ತಮ ಬೆಲ್ಲ ಕೊಡಲು ಸಾಧ್ಯ ಎಂಬುದನ್ನು ಮನಗಂಡು ಜೀತೇಂದ್ರ ಮಿಶ್ರಾ ಕಳೆದ ಹಲವಾರು ವರ್ಷಗಳಿಂದ ಕಬ್ಬಿನ ಗಾಣದಿಂದ ಬೆಲ್ಲ ತಯಾರಿಕೆ ಮುಂದುವರಿಸಿದ್ದಾರೆ.

ಸಮಗ್ರ ಕೃಷಿ ಏನೇನು?
ಮಿಶ್ರಾ ಅವರಿಗೆ 20 ಎಕರೆ ಭೂಮಿಯಿದೆ. ಈ ಭೂಮಿಯಲ್ಲಿ ಕಬ್ಬು, ಉಳಾಗಡ್ಡಿ, ಮಾವು, ನಿಂಬೆಕಾಯಿ, ಪೇರು ಇತರೆ ಹಣ್ಣು-ಹಂಪಲು ಜತೆಗೆ ಒಣಬೇಸಾಯದಲ್ಲಿ ತೊಗರಿ, ಜೋಳ, ಕಡಲೆ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದಾರೆ. ಒಂದು ಬೇಳೆ ನಷ್ಟವಾದರೆ ಹಾಗೂ ಒಂದಕ್ಕೆ ಬೆಲೆ ಸಿಗದಿದ್ದರೆ ಬೇರೆ ಬೆಳೆಯಲ್ಲಿ ಸರಿದೂಗಿಸಬಹುದು ಎಂಬ ನಿಟ್ಟಿನಲ್ಲಿ ಸಮಗ್ರ ಕೃಷಿ ಕೈಗೊಂಡಿದ್ದಾರೆ. ಪ್ರತಿ ದಿನ ನಗರದಿಂದ ಬೆಳಗ್ಗೆ ಹೊಲಕ್ಕೆ ಎಲ್ಲ ಕೆಲಸ ಮುಂದೆ ನಿಂತು ಮಾಡಿಸುವ ಹಾಗೂ ಮಾರುಕಟ್ಟೆಗೆ ಹೊಸ ತಾಂತ್ರಿಕತೆ ಮೈಗೂಡಿಸಿಕೊಂಡಿರುವ ಮಿಶ್ರಾ ಅವರ ಸಮಗ್ರ

ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತ ಕೃಷಿ ಮಾದರಿಯಾಗಿದೆ. ಆಗಾಗ್ಗೆ ಹೋಗಿ ಬಂದು ಕೃಷಿ ಕಾಯಕ ಅವಲೋಕಿಸಿ ಅಳವಡಿಸಿಕೊಳ್ಳಲಾಗುತ್ತಿದ್ದು, ನಿಷ್ಠೆಯಿಂದ ಕೃಷಿ ಕಾಯಕ ಕೈಗೊಂಡರೆ ಕೈಬಿಡದು. ಇದನ್ನು ಎಲ್ಲರೂ ಮನಗಾಣಬೇಕು.

-ಜೀತೇಂದ್ರ ಮಿಶ್ರಾ, ಪ್ರಗತಿಪರ ರೈತ

ರೈತರು ಕಾರ್ಖಾನೆಗೆ ಕಬ್ಬು ಸಾಗಿಸಲು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಕಬ್ಬು ಬೆಳೆಯಲು ಸಮಸ್ಯೆ ಇಲ್ಲ. ಆದರೆ ಸಾಗಾಟ ಮಾಡುವುದು ಹಾಗೂ ಬಿಲ್‌ ಪಡೆಯಲು ಹರಸಾಹಸ ಪಡುವಂತಾಗಿದೆ. ಇದಕ್ಕೆ ಗಾಣ ಮಾಡಿ ಬೆಲ್ಲ ತಯಾರಿಸುವುದೇ ಸೂಕ್ತ ಪರಿಹಾರ. ಈ ನಿಟ್ಟಿನಲ್ಲಿ ಜೀತೇಂದ್ರ ಮಿಶ್ರಾ ಕಳೆದ ಹಲವಾರು ವರ್ಷಗಳಿಂದ ಗಾಣ ಮಾಡುತ್ತಿರುವುದು ಮಾದರಿಯಾಗಿದೆ.

-ಚಂದ್ರಕಾಂತ ಜೀವಣಗಿ,ಸಹಾಯಕ ಕೃಷಿ ನಿರ್ದೇಶಕ, ಕಲಬುರಗಿ

ಜೀತೇಂದ್ರ ಮಿಶ್ರಾ ತಮ್ಮ ಮಾದರಿಯ ಅದರಲ್ಲೂ ಸಾವಯವ ಕೃಷಿ ಉತ್ಪನ್ನಗಳಿಗೆ ತಮ್ಮದೇಯಾದ ಮಿಶ್ರಾ ಬ್ರ್ಯಾಂಡ್‌ ರೂಪಿಸಿಕೊಂಡಿದ್ದಾರೆ. ಒಟ್ಟಾರೆ ಸಮಗ್ರ ಕೃಷಿ ಹಾಗೂ ಸಾವಯವ ಬೆಲ್ಲಕ್ಕಾಗಿ ಮೊ. 9342351736 ಹಾಗೂ 7619102658 ಸಂಪರ್ಕಿಸಬಹುದು.

„ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan, Srujan Lokesh visit Mantralaya

ಮಂತ್ರಾಲಯಕ್ಕೆ ದರ್ಶನ್, ಸೃಜನ್ ಲೋಕೇಶ್ ಭೇಟಿ

tdy-11

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು: ಬಿ.ವೈ.ವಿಜಯೇಂದ್ರ

amit shah

ಮಾ.24ಕ್ಕೆ ರಾಯಚೂರಿಗೆ ಅಮಿತ್ ಶಾ ಭೇಟಿ; 4100 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಚಾಲನೆ

koli 2

ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಹಿಳೆಯರು

1-sadsad-asd

ಡಬಲ್ ಇಂಜಿನ್ ಸರಕಾರಕ್ಕೆ ಗುಂಡಿಗೆ ಜಾಸ್ತಿ;ಹಾಗಾಗಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ:ಶ್ರೀರಾಮುಲು

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

mangalore acc

ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿ : ಬಾಲಕ ಮೃತ್ಯು

1-ewr-ew-rwer

ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.