MIT: ಮಾ.27ರಿಂದ 31ರವರೆಗೆ ಸೋಲಾರ್ ಎಲೆಕ್ಟ್ರಿಕ್ ವೆಹಿಕಲ್ ಚಾಂಪಿಯನ್ಶಿಪ್
Team Udayavani, Mar 27, 2024, 4:24 PM IST
ಉಡುಪಿ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಎಂಐಟಿ) ಕೊಯಮತ್ತೂರು ಸೊಸೈಟಿ ಆಫ್ ರೇಸಿಂಗ್ ಮೈಂಡ್ಸ್ (ಸಿಎಸ್ಆರ್ಎಂ) ಸಹಭಾಗಿತ್ವದೊಂದಿಗೆ ಸೌರ ವಿದ್ಯುತ್ ವಾಹನ ಚಾಂಪಿಯನ್ಶಿಪ್ – 2024 (ಎಸ್ ಇವಿಸಿ-2024) ಮಾ.27ರಿಂದ 31 ರವರೆಗೆ ನಡೆಯಲಿದೆ. ಮಾ.28ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಎಂಐಟಿ ನಿರ್ದೇಶಕ ಕೆ| ಡಾ| ಅನಿಲ್ ರಾಣ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಎಂಐಟಿಯ ವೈಮಾನಿಕ ಮತ್ತು ಮೋಟಾರು ತಂತ್ರಜ್ಞಾನ ಮತ್ತು ಯಂತ್ರ-ವಿದ್ಯುತ್ ವಿಭಾಗಗಳು ಈ ಚಾಂಪಿಯನ್ಶಿಪ್
ಅನ್ನು ಜಂಟಿಯಾಗಿ ಆಯೋಜಿಸುತ್ತಿವೆ. ಈ ಕಾರ್ಯಕ್ರಮವು ಸುಸ್ಥಿರ ಸಂಚಾರ ಕಾರ್ಯಯೋಜನೆಗೆ ಸಂಬಂಧಿಸಿ
ಪ್ರಮುಖ ಹೆಜ್ಜೆಗುರುತಾಗಿದೆ ಎಂದರು.
ಎಸ್ಇವಿಸಿ-2024 ಕಾರ್ಯಕ್ರಮವು ದೇಶಾದ್ಯಂತದ ಉತ್ಸಾಹಿ ಎಂಜಿನಿಯರ್ಗಳಿಗೆ, ನಾವೀನ್ಯದ ಸಂಶೋಧಕರಿಗೆ, ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ವಾಹನ ವಿನ್ಯಾಸ ವಿಭಾಗದಲ್ಲಿ ಕೌಶಲ ಪ್ರದರ್ಶನಕ್ಕೆ ಮತ್ತು ಸೌರಶಕ್ತಿ ಆಧಾರಿತ ವಿದ್ಯುತ್ ವಾಹನಗಳ ತಯಾರಿಗೆ ಅವಕಾಶ ನೀಡಲಿದೆ. ಮಣಿಪಾಲ ವಿ.ವಿ.ಆವರಣದಲ್ಲಿ ಸಂಶೋಧನ ನಿರತ ಎಂಜಿನಿಯರ್ಗಳ ಸೃಷ್ಟಿಶೀಲತೆ, ಪರಿಶ್ರಮಕ್ಕೆ ಈ ಮೂಲಕ ವೇದಿಕೆ ಲಭ್ಯವಾಗಲಿದೆ.
ಭಾರತದ ವಿವಿಧ ಕಡೆಗಳ ಸುಮಾರು 31 ತಂಡಗಳು ಭಾಗವಹಿಸಲು ಹೆಸರು ನೋಂದಣಿ ಮಾಡಿಸಿಕೊಂಡಿವೆ. ಅವುಗಳಲ್ಲಿ 14 ತಂಡಗಳು ಅಂತಿಮ ಬಹುನಿರೀಕ್ಷಿತ ಸುತ್ತಿನಲ್ಲಿ ಭಾಗಿಯಾಗುತ್ತಿವೆ. ರಾಷ್ಟ್ರಾದ್ಯಂತದ 450 ಉತ್ಸಾಹಿಗಳು ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಎಸ್ಇವಿಸಿ-2024 ಪರಿಸರ ಸಹ್ಯವಾದ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ ಸ್ಪರ್ಧೆ ಮಾತ್ರವಲ್ಲದೆ ಇದು ವಿದ್ಯಾರ್ಥಿಗಳು,
ಕೈಗಾರಿಕ ತಜ್ಞರು, ಶಿಕ್ಷಣತಜ್ಞರ ನಡುವೆ ಅನುಭವಗಳ ಜ್ಞಾನ ವಿನಿಮಯವನ್ನು ಉತ್ತೇಜಿಸಲಿದೆ. ನವೀಕರಿಸಬಹುದಾದ
ಇಂಧನ ಮತ್ತು ಸುಸ್ಥಿರ ಸಾರಿಗೆ ಕಾರ್ಯಯೋಜನೆಗಳನ್ನು ಉತ್ತೇಜಿಸಿರುವುದರ ಮೂಲಕ ಎಂಐಟಿಯು ಮುಂದಿನ ತಲೆಮಾರಿನ ತಂತ್ರಜ್ಞಾನಿಗಳು ಮತ್ತು ನವೀನ ಸಂಶೋಧಕರಲ್ಲಿ ಧನಾತ್ಮಕ ಪ್ರಭಾವ ಬೀರುವ ಆಶಯ ಹೊಂದಲಿದೆ ಎಂದರು. ಹಸುರು ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ಭವಿಷ್ಯದತ್ತ ಪ್ರಗತಿಯನ್ನು ವೇಗವರ್ಧಿಸುವ ಗುರಿಯನ್ನು ನಾವು ಹೊಂದಿದ್ದೇವೆ.
ಚೆಫ್ಸ್ ಟಚ್, ಅಂಪೇರ್, ಪ್ರಗ್ನಾ ಮೈಕ್ರೋಡಿಸೈನ್ಸ್ ಸಂಸ್ಥೆಗಳ ಬೆಂಬಲದೊಂದಿಗೆ ಎಸ್ಇವಿಸಿ-2024ಯ ಆಯೋಜನೆ
ಸಾಧ್ಯವಾಗಲಿದೆ. ಹಸುರು, ಸ್ವತ್ಛ ಭವಿಷ್ಯಕ್ಕಾಗಿ ಆಯೋಜಿಸುತ್ತಿರುವ ಸೌರ ವಿದ್ಯುತ್ ವಾಹನ ಚಾಂಪಿಯನ್ಶಿಪ್-2024ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.
ವಿಭಿನ್ನ ರೈಡ್, ರ್ಯಾಲಿ
ನೀರಿನ ಹೊಂಡಗಳು, ಮಳೆಯ ನಡುವೆ, ಸೂರ್ಯನ ಬೆಳಕು ಇಲ್ಲದಾಗ, ಕಾರನ್ನು ಬೇರೆ ಬೇರೆ ಕಡೆಗೆ ತಿರುಗಿಸುವುದು, ಒಮ್ಮೆ ಚಾರ್ಜ್ ಮಾಡಿದ ಬಳಿಕ ಮುಗಿಯುವವರೆಗೆ ಸಂಚರಿಸುವುದು ಹೀಗೆ ಹಲವಾರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಂಐಟಿ ಕ್ರಿಕೆಟ್ ಮೈದಾನ, ಎಂಎಸ್ಎಪಿ ಪಾರ್ಕಿಂಗ್ ಪ್ರದೇಶ, ಐಆರ್ಸಿ ಮೈದಾನ, ಎಂಐಟಿ ಸ್ಟೂಡೆಂಟ್ಸ್ ಪ್ಲಾಝಾದಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣಿಪಾಲದಿಂದ ಕರಾವಳಿ ಬೈಪಾಸ್ವರೆಗೆ ಎಲೆಕ್ಟ್ರಿಕ್ ವಾಹನಗಳ ರ್ಯಾಲಿಯು ಮಾ.31ರಂದು ಬೆಳಗ್ಗೆ 8ರಿಂದ 9ರವರೆಗೆ ನಡೆಯಲಿದೆ ಎಂದರು.
ಎಂಐಟಿ ಜಂಟಿ ನಿರ್ದೇಶಕ ಸೋಮಶೇಖರ ಭಟ್, ಮೆಕಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಡಿ.ವಿ.ಕಾಮತ್, ಆರೋನಾಟಿಕಲ್
ಹಾಗೂ ಅಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ದಯಾನಂದ ಪೈ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಧ್ಯಾಪಕ ಡಾ| ಬಾಲಕೃಷ್ಣ ಮಧ್ದೋಡಿ, ಮಾಹೆಯ ಪಿಆರ್ ಆ್ಯಂಡ್ ಮೀಡಿಯಾ ವಿಭಾಗದ ಮಿಥುನ್ ರಾಜ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ