ಪಂಜಾಬ್ ಸ್ಫೋಟ ಮಾಡಿದ್ದು ನಾವೇ! “ಸಿಕ್ಖ್ ಫಾರ್ ಜಸ್ಟೀಸ್’ ಸಂಘಟನೆಯ ಮುಖ್ಯಸ್ಥನ ಹೇಳಿಕೆ
Team Udayavani, May 12, 2022, 12:58 AM IST
ಚಂಡೀಗಢ: ಪಂಜಾಬ್ ಪೊಲೀಸ್ ಇಲಾಖೆಯ ಗುಪ್ತಚರ ಕಚೇರಿಯ ಮೇಲೆ ಸೋಮವಾರ ರಾತ್ರಿ ನಡೆದ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯ ಹೊಣೆಯನ್ನು ಖಲಿಸ್ಥಾನಿ ಪರ ಗುಂಪಾಗಿರುವ “ಸಿಕ್ಖ್ ಫಾರ್ ಜಸ್ಟೀಸ್’ (ಎಸ್ಎಫ್ ಜೆ) ಹೊತ್ತುಕೊಂಡಿದೆ.
ಹಿಮಾಚಲ ಪ್ರದೇಶ ಸಿಎಂ ಜೈರಾಂ ಠಾಕೂರ್ರವರಿಗೆ ಕಳುಹಿಸಲಾಗಿರುವ ಧ್ವನಿ ಸಂದೇಶದಲ್ಲಿ ಎಸ್ಎಫ್ಜೆ ಈ ವಿಷಯ ಹೇಳಿ ಕೊಂಡಿದೆ. ಧ್ವನಿ ಸಂದೇಶದಲ್ಲಿ ಎಸ್ಎಫ್ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಅವರ ಧ್ವನಿಯಿದೆ. ಅದರಲ್ಲಿ ಹಿಮಾಚಲ ಪ್ರದೇಶದಲ್ಲಿ ಸಿಕ್ಖ್ರಿಗೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡಲಾಗಿದೆ.
“ಇದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗೆ ಒಂದು ಪಾಠ. ಪಂಜಾಬ್ನ ಮೊಹಾಲಿ ಪೊಲೀಸ್ ಮುಖ್ಯ ಕಚೇರಿಯಲ್ಲಿ ಆಗಿದ್ದನ್ನು ನೋಡಿ ಕಲಿಯಿರಿ. ಇದೇ ರೀತಿ ಶಿಮ್ಲಾದ ಪೊಲೀಸ್ ಮುಖ್ಯ ಕಚೇರಿಯಲ್ಲೂ ದಾಳಿಯಾಗಬಹುದು. ಹಿಮಾಚಲದಲ್ಲಿ ಖಲಿಸ್ಥಾನ ಜನಾಭಿಪ್ರಾಯ ಸಂಗ್ರಹವನ್ನು ಜೂನ್ 6ರಂದು ಘೋಷಿಸಲಿದ್ದೇವೆ. ಆಗ ನೀವು ಸಿಕ್ಖ್ರನ್ನು ಕೆರಳಿಸಿ, ಹಿಂಸೆಗೆ ಕಾರಣರಾಗ ಬೇಡಿ’ ಎಂದು ಪನ್ನು ಎಚ್ಚರಿಸಿದ್ದಾರೆ.
ರವಿವಾರವಷ್ಟೇ, ಇದೇ ಸಂಘಟನೆ ಹಿಮಾಚಲ ಪ್ರದೇಶದ ವಿಧಾನಸಭೆಯ ಗೇಟಿನ ಮೇಲೆ ಎಸ್ಎಫ್ ಜೆ ಖಲಿಸ್ಥಾನದ ಧ್ವಜ ಹಾರಿಸಿ, ಖಲಿಸ್ಥಾನ್ ಪರ ಘೋಷಣೆ ಬರೆದು, ಸಿಎಂಗೆ ಎಚ್ಚರಿಕೆಯ ವೀಡಿಯೋ ಸಂದೇಶ ಬಿಡುಗಡೆ ಮಾಡಿತ್ತು. ಆ ಪ್ರಕರಣದಲ್ಲಿ ಪನ್ನು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ