ಹಾಲು ಒಕ್ಕೂಟಗಳಿಗೆ ಕೊರೊನಾ ಹಾಲಾಹಲ : ಹಾಲು ಸಂಗ್ರಹ ಹೆಚ್ಚಳ, ಮಾರಾಟ ಇಳಿಕೆ


Team Udayavani, May 31, 2021, 7:00 AM IST

ಹಾಲು ಒಕ್ಕೂಟಗಳಿಗೆ ಕೊರೊನಾ ಹಾಲಾಹಲ : ಹಾಲು ಸಂಗ್ರಹ ಹೆಚ್ಚಳ, ಮಾರಾಟ ಇಳಿಕೆ

ಶಿವಮೊಗ್ಗ: ರಾಜ್ಯಾದ್ಯಂತ ಹಾಲು ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಲಾಕ್‌ಡೌನ್‌ ಕಾರಣ ನಿಗದಿತ ಪ್ರಮಾಣದಲ್ಲಿ ಹಾಲು, ಮೊಸರು ಮಾರಾಟವಾಗದೆ ಒಕ್ಕೂಟಗಳು ಒತ್ತಡಕ್ಕೆ ಸಿಲುಕಿವೆ.

ಎರಡು ತಿಂಗಳ ಹಿಂದೆ 70 ಲಕ್ಷ ಲೀ. ಆಸುಪಾಸು ಇದ್ದ ದೈನಿಕ ಹಾಲು ಸಂಗ್ರಹ ಮೇಯಲ್ಲಿ 90 ಲಕ್ಷ ಲೀ. ವರೆಗೆ ಹೆಚ್ಚಿದೆ. ಕೊರೊನಾ, ಲಾಕ್‌ಡೌನ್‌ ಕಾರಣ ಸಭೆ, ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದು, ಹಾಲು ಮಾರಾಟದಲ್ಲಿ ತೀವ್ರ ಕುಸಿತ ಉಂಟಾಗಿದೆ. ಉತ್ಪಾದನೆ ಏರಿಕೆ, ಮಾರಾಟ ಕಡಿಮೆ ಹಾಲು ಒಕ್ಕೂಟ ಗಳಿಗೆ ನುಂಗಲಾರದ ತುತ್ತಾಗಿದೆ. ಬಾಕಿ ಹಾಲಿನಿಂದ ಪುಡಿ ಉತ್ಪಾದನೆ ಲಾಭದಾಯಕವಲ್ಲ. ಆದರೂ ಅದನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.

ಮೊಸರು, ಮಜ್ಜಿಗೆ, ಹಾಲು, ಸಿಹಿತಿನಿಸು ಎಂದು ಅಂದಾಜು 45 ಲಕ್ಷ ಲೀ. ಹಾಲು ಖರ್ಚಾಗು ತ್ತಿದೆ. ಉಳಿದ ಹಾಲನ್ನು ಪುಡಿಗಾಗಿ ಕಳುಹಿಸಲಾಗುತ್ತಿದೆ.

ಆದಾಯಕ್ಕಿಂತ ನಷ್ಟ ಜಾಸ್ತಿ
ಪ್ರಸ್ತುತ 1 ಕೆ.ಜಿ. ಹಾಲಿನ ಪುಡಿಗೆ 180 ರೂ. ಇದೆ. ಇದರ ಉತ್ಪಾದನೆಗೆ 10 ಲೀ. ಹಾಲು ಬೇಕು. ಒಕ್ಕೂಟಗಳು ಹೈನುಗಾರರಿಂದ ಪ್ರತೀ ಲೀ.ಗೆ ಕನಿಷ್ಠ 23ರಿಂದ 29.50 ರೂ. ನೀಡಿ ಖರೀದಿಸುತ್ತವೆ. ಈ ನಷ್ಟ ಭರಿಸಬೇಕಾದರೆ 1 ಕೆ.ಜಿ. ಪೌಡರ್‌ಗೆ 230 ರೂ.ನಿಂದ 300 ರೂ.ವರೆಗೆ ದರ ನಿಗದಿ ಮಾಡಬೇಕು. ದರ ಹೆಚ್ಚಿಸಿದರೆ ಮಾರಾಟ ಕುಸಿಯುತ್ತದೆ. ಶಾಲಾ ಮಕ್ಕಳಿಗೆ ಹಾಲಿನ ಪುಡಿ ನೀಡಲಾಗುತ್ತಿತ್ತು. ಈಗ ಅದೂ ಇಲ್ಲ.

ಕರಾವಳಿ ಗ್ರಾಹಕರಿಗೆ ಸಿಗಲಿದೆ ಹೆಚ್ಚು ಹಾಲು
ಮಂಗಳೂರು, ಮೇ 30: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು ಜೂ. 1ರಿಂದ ಗ್ರಾಹಕರಿಗೆ ಪ್ರತೀ ಅರ್ಧ ಲೀಟರ್‌ಗೆ 20 ಮಿ.ಲೀ.ಗಳಂತೆ ಹೆಚ್ಚುವರಿ ಹಾಲು ನೀಡಲಿದೆ.

ಲಾಕ್‌ಡೌನ್‌ ಪರಿಣಾಮ ಶುಭ ಸಮಾರಂಭ, ದೇವಸ್ಥಾನ, ಹೊಟೇಲ…ಗಳಿಗೆ ನಿರ್ಬಂಧ ಇರುವುದರಿಂದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಲ್ಲೂ ಹಾಲು ಉಳಿಯುತ್ತಿದೆ. ಇದರ ಪ್ರಯೋಜನವನ್ನು ಗ್ರಾಹಕರಿಗೆ ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಸ್ತುತ ಒಕ್ಕೂಟದಲ್ಲಿ ದಿನಂಪ್ರತಿ ದಾಖಲೆಯ 5.60 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದ್ದು, ಸುಮಾರು 1.50 ಲಕ್ಷ ಲೀ. ಉಳಿಯುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಗ್ರಾಹಕರಿಗೆ ಹೆಚ್ಚುವರಿ ಹಾಲು ಒದಗಿಸುವುದ ರಿಂದ ಸುಮಾರು 12 ಸಾವಿರ ಲೀ. ಹೆಚ್ಚುವರಿ ಹಾಲು ವಿಲೇವಾರಿ ಆಗಲಿದೆ ಎಂದಿದ್ದಾರೆ.

ಹಾಲು ಸಾಕಷ್ಟು ಉಳಿಯುತ್ತಿರುವುದರಿಂದ ಪುಡಿ ಉತ್ಪಾದಿಸುವ ಅನಿವಾರ್ಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವೇ 64 ಲಕ್ಷ ಶಾಲಾ ಮಕ್ಕಳಿಗಾಗಿ 144 ರೂ. ದರದಲ್ಲಿ ಅರ್ಧ ಕೆ.ಜಿ. ಪ್ಯಾಕೆಟ್‌ ಖರೀದಿಸಿ ವಿತರಿಸಿದರೆ ಸರಕಾರಕ್ಕೆ ಕೇವಲ 92 ಕೋ.ರೂ. ಮಾತ್ರ ವೆಚ್ಚವಾಗುತ್ತದೆ. ಇದನ್ನು ಸಿಎಂ ಗಮನಕ್ಕೆ ತರಲಾಗಿದೆ.
– ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ

ಟಾಪ್ ನ್ಯೂಸ್

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

hiremutt

ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ; ಪಕ್ಷ ತೊರೆದ ಜಿಲ್ಲಾ ಅಧ್ಯಕ್ಷ!

tdy-13

ಥಿಯೇಟರ್‌ ಬಳಿಕ ಓಟಿಟಿಯಲ್ಲಿ ʼಕಬ್ಜʼ ಅಬ್ಬರಕ್ಕೆ ಡೇಟ್‌ ಫಿಕ್ಸ್? :‌ ರಿಲೀಸ್‌ ಡೇಟ್‌ ವೈರಲ್

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

TDY-12

ಜೆಡಿಎಸ್‌ ಭದ್ರಕೋಟೆಗೆ ಮೂರು ಬಾಗಿಲು

ದಾಖಲೆಯಿಲ್ಲದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 50 ಲಕ್ಷ ರೂ. ವಶ: ಮೂವರ ವಿರುದ್ಧ ಪ್ರಕರಣ

ದಾಖಲೆಯಿಲ್ಲದೆ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 50 ಲಕ್ಷ ರೂ. ವಶ: ಮೂವರ ವಿರುದ್ಧ ಪ್ರಕರಣ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-9

ಬೊಂಬೆನಗರಿಯಲ್ಲಿ ಕೈ ಅಭ್ಯರ್ಥಿ ಕಗ್ಗಂಟು

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಇಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಸ್ಮಾರಕ ಲೋಕಾರ್ಪಣೆ

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

ಚುನಾವಣಾ ಅಕ್ರಮಗಳ ತಡೆಗೆ ಗಡಿ ಚೆಕ್‌ಪೋಸ್ಟ್‌ ಜಾಲ; ಈಗಾಗಲೇ 171 ತಪಾಸಣಾ ವ್ಯವಸ್ಥೆ ಸ್ಥಾಪನೆ

ಕೆಆರ್‌ಪಿಪಿ ಪ್ರಚಾರಕ್ಕೆ ರೆಡ್ಡಿ ಹೊಸ ಹೆಲಿಕಾಪ್ಟರ್‌

ಕೆಆರ್‌ಪಿಪಿ ಪ್ರಚಾರಕ್ಕೆ ರೆಡ್ಡಿ ಹೊಸ ಹೆಲಿಕಾಪ್ಟರ್‌

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

dambula

ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

tdy-15

ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ

tdy-14

ಚಿಕ್ಕಬಳ್ಳಾಪುರ, ಶಿಡ್ಲಘಟ್ಟ “ಕೈ” ಟಿಕೆಟ್‌ ಕಗ್ಗಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.