ನ್ಯುರೊಬ್ಲಾಸ್ಟೊಮಾ ಉತ್ತಮ ಗುಣ ಕಾಣುವುದಕ್ಕೆ ಉತ್ತಮ ಚಿಕಿತ್ಸೆ ಅಗತ್ಯ


Team Udayavani, Mar 26, 2023, 3:43 PM IST

5-health

ನ್ಯುರೊಬ್ಲಾಸ್ಟೊಮಾ ಮಕ್ಕಳಲ್ಲಿ ಅತೀ ಸಾಮಾನ್ಯವಾಗಿ ಕಂಡುಬರುವ ಗಡ್ಡೆ, ಇದು ಮಿದುಳನ್ನು ಬಿಟ್ಟು ದೇಹದ ಇತರ ಭಾಗದಲ್ಲಿ ಉಂಟಾಗುತ್ತದೆ. ಮಕ್ಕಳಲ್ಲಿ ಉಂಟಾಗುವ ಕ್ಯಾನ್ಸರ್‌ ಪ್ರಕರಣಗಳ ಪೈಕಿ ಶೇ. 8ರಷ್ಟು ನ್ಯುರೊಬ್ಲಾಸ್ಟೊಮಾ ಆಗಿರುತ್ತವೆ.

ತಾಯಿಯ ಗರ್ಭದಲ್ಲಿ ಬೆಳವಣಿಗೆಯಾಗುವ ಸಂದರ್ಭದಲ್ಲಿ ಹಿಂದುಳಿದ ಜೀವಕೋಶಗಳಿಂದ ನ್ಯುರೊಬ್ಲಾಸ್ಟೊಮಾ ಉಂಟಾಗುತ್ತದೆ. ಇದು ತಲೆದೋರುವುದರಲ್ಲಿ ಪರಿಸರದ ಯಾವುದೇ ಪಾತ್ರ ಇಲ್ಲ. ಇದು ದೇಹದ ಯಾವುದೇ ಭಾಗದಲ್ಲಿ ತಲೆದೋರಬಹುದು. ಅತೀ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅಂಗ ಎಂದರೆ ಎರಡು ಅಡ್ರಿನಾಲಿನ್‌ ಗ್ರಂಥಿಗಳಲ್ಲಿ ಒಂದು ಅಥವಾ ಕಶೇರುಕ ಕೊಳವೆಯ ಗುಂಟ ಸಾಗುವ ನರ ಅಂಗಾಂಶ, ಕುತ್ತಿಗೆ, ಎದೆ, ಹೊಟ್ಟೆ ಮತ್ತು ಅಸ್ಥಿ ಕುಹರ (ಪೆಲ್ವಿಸ್‌). ನ್ಯುರೊಬ್ಲಾಸ್ಟೊಮಾಗೆ ತುತ್ತಾದ ಬಹುತೇಕ ಮಕ್ಕಳಲ್ಲಿ ಇದು ಅಸ್ಥಿಮಜ್ಜೆ, ದುಗ್ಧರಸ ಗ್ರಂಥಿಗಳು, ಯಕೃತ್‌ ಮತ್ತು ಚರ್ಮದಂತಹ ಇತರ ಅಂಗಗಳಿಗೆ ಅದು ಹರಡಿರುತ್ತದೆ. ನ್ಯುರೊಬ್ಲಾಸ್ಟೊಮಾ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಹೊಟ್ಟೆಯಲ್ಲಿ ಉಗಮವಾಗಿರುತ್ತವೆ.

ಪ್ರಾಥಮಿಕ ಗಡ್ಡೆ ಕಾಣಿಸಿಕೊಂಡ ಸ್ಥಳ, ಮೆಟಾಸ್ಟಾಟಿಕ್‌ ಕಾಯಿಲೆ ಮತ್ತು ಗಡ್ಡೆಯಿಂದಾಗಿ ಚಯಾಪಚಯ ಕ್ರಿಯೆಯಲ್ಲಿ ಆಗುವ ವ್ಯತ್ಯಯಗಳಿಂದಾಗಿ ಈ ಕ್ಯಾನ್ಸರ್‌ ಬಾಲ್ಯಕಾಲದ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಅನುಕರಿಸುತ್ತದೆ. ಪದೇಪದೆ ಹೊಟ್ಟೆನೋವು, ಬೆಳವಣಿಗೆ ಹೊಂದುವಲ್ಲಿ ವಿಫ‌ಲವಾಗುವುದು, ಹೊಟ್ಟೆ ಉಬ್ಬಿಕೊಳ್ಳುವುದು, ಒಪೊÕಕ್ಲೊನಸ್‌ ಮತ್ತು ಮಯೊಕ್ಲೊನಸ್‌ನಂತಹ ನರಶಾಸ್ತ್ರೀಯ ತೊಂದರೆಗಳು, ಎಲುಬುಗಳಲ್ಲಿ ನೋವು, ರಕ್ತಹೀನತೆ, ಕಣ್ಣುಗಳು ಊದಿಕೊಳ್ಳುವುದು ಅಥವಾ ಅವುಗಳ ಗಾತ್ರ ಹಿಗ್ಗುವುದು, ಚರ್ಮದಲ್ಲಿ ದದ್ದುಗಳು ಉಂಟಾಗುವುದು, ರಕ್ತದೊತ್ತಡ ಹೆಚ್ಚಳ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ಕ್ಯಾನ್ಸರ್‌ನ ಒಟ್ಟಾರೆ ನಿರ್ವಹಣೆಯು ಮಗುವಿನ ವಯಸ್ಸು, ಅದು ದೇಹದ ಇತರ ಭಾಗಗಳಿಗೆ ಹರಡಿದೆಯೇ, ನ್ಯುರೊಬ್ಲಾಸ್ಟೊಮಾ ಜೀವಕೋಶಗಳು ಎನ್‌-ಎಂವೈಸಿ ಎಂಬ ನಿರ್ದಿಷ್ಟ ವಂಶವಾಹಿಯ ವರ್ಧನೆಯನ್ನು ಪ್ರದರ್ಶಿಸುತ್ತಿವೆಯೇ ಎಂಬುದನ್ನು ಅವಲಂಬಿಸಿವೆ. ಕಡಿಮೆ ಅಪಾಯದ ನ್ಯುರೊಬ್ಲಾಸ್ಟೊಮಾ (ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವಂಥದ್ದು) ಹೊಂದಿರುವ ಮಕ್ಕಳು ಚಿಕಿತ್ಸೆಗೆ ಹೆಚ್ಚು ಚೆನ್ನಾಗಿ ಪ್ರತಿಸ್ಪಂದಿಸುತ್ತಾರೆ ಮತ್ತು ಒಟ್ಟಾರೆಯಾಗಿ ಬದುಕುಳಿಯುವ ಪ್ರಮಾಣ ಶೇ. 95ಕ್ಕಿಂತ ಹೆಚ್ಚಿರುತ್ತದೆ. ಆದರೆ ಹೆಚ್ಚು ಅಪಾಯದ ನ್ಯುರೊಬ್ಲಾಸ್ಟೊಮಾಕ್ಕೆ ತುತ್ತಾಗಿರುವ ಮಕ್ಕಳು ಉತ್ತಮ ಫ‌ಲಿತಾಂಶ ಕಾಣುವುದಿಲ್ಲ. ಈ ಮಕ್ಕಳಿಗೆ ತೀವ್ರ ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಡಿಫ‌ರೆನ್ಶಿಯೇಶನ್‌ ಥೆರಪಿ ಒದಗಿಸಲಾಗುತ್ತದೆ. ನ್ಯುರೊಬ್ಲಾಸ್ಟೊಮಾಕ್ಕೆ ಇಮ್ಯುನೊಥೆರಪಿ ಒಂದು ಉತ್ತಮ ಚಿಕಿತ್ಸಾ ವಿಧಾನವಾಗಿದ್ದರೂ ಭಾರತದಲ್ಲಿ ಇದು ಮುಕ್ತವಾಗಿ ಲಭ್ಯವಾಗುತ್ತಿಲ್ಲ; ಆದರೆ ಯುರೋಪ್‌ ಮತ್ತು ಅಮೆರಿಕದಲ್ಲಿ ಕಳೆದ 8-10 ವರ್ಷಗಳಿಂದೀಚೆಗೆ ಇದು ಲಭ್ಯವಿದೆ. ಈ ಕ್ಯಾನ್ಸರ್‌ ಏಕೆ ಉಂಟಾಗುತ್ತದೆ ಮತ್ತು ಅದಕ್ಕೆ ಚಿಕಿತ್ಸೆಯ ಬಗ್ಗೆ ತೀವ್ರ ತರಹದ ಸಂಶೋಧನೆಗಳು ನಡೆಯುತ್ತಿದ್ದರೂ ಕಳೆದ ಒಂದು ದಶಕದಲ್ಲಿ ಹೆಚ್ಚು ಪ್ರಗತಿ ಸಾಧನೆ ಆಗಿಲ್ಲ.

ಮಂಗಳೂರಿನಲ್ಲಿ ಪ್ರತೀ ವರ್ಷ 10-12 ನ್ಯುರೊಬ್ಲಾಸ್ಟೊಮಾ ಪ್ರಕರಣಗಳನ್ನು ನಾವು ಕಾಣುತ್ತಿದ್ದೇವೆ. ಈ ಕ್ಯಾನ್ಸರ್‌ಗೆ ತುತ್ತಾಗುವ ಮಕ್ಕಳಲ್ಲಿ ಹೆಚ್ಚಿನವರು 5 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು (ಶೇ. 90). ಇವರಲ್ಲಿ ಶೇ. 80ಕ್ಕಿಂತ ಹೆಚ್ಚು ಮಂದಿ ಮಕ್ಕಳು ಮುಂದುವರಿದ ಹಂತಗಳಲ್ಲಿ ಆಸ್ಪತ್ರೆಗೆ ಬಂದಿರುತ್ತಾರೆ. ಅಂದರೆ ಕ್ಯಾನ್ಸರ್‌ ಅವರ ದೇಹದ ಇತರ ಭಾಗಗಳಿಗೆ ಹರಡಿರುತ್ತದೆ. ಹೆಚ್ಚು ಅಪಾಯದ ನ್ಯುರೊಬ್ಲಾಸ್ಟೊಮಾಕ್ಕೆ ತುತ್ತಾಗಿರುವ ಈ ಮಕ್ಕಳು ಆರಂಭದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ; ಆದರೆ ಮೂರನೇ ಎರಡರಷ್ಟಕ್ಕೂ ಹೆಚ್ಚು ಮಕ್ಕಳಲ್ಲಿ ಚಿಕಿತ್ಸೆ ಪೂರ್ಣವಾದ 2 ವರ್ಷಗಳ ಒಳಗೆ ಕ್ಯಾನ್ಸರ್‌ ಮರುಕಳಿಸುತ್ತದೆ. ಅಲಭ್ಯತೆಯಿಂದಾಗಿ ನಮ್ಮ ರೋಗಿಗಳಲ್ಲಿ ಯಾರಿಗೂ ಇಮ್ಯುನೊಥೆರಪಿಯನ್ನು ನೀಡಲು ಸಾಧ್ಯವಾಗಿಲ್ಲ.

ಹೆಚ್ಚು ಅಪಾಯದ ನ್ಯುರೊಬ್ಲಾಸ್ಟೊಮಾಕ್ಕೆ ತುತ್ತಾಗಿರುವ ಮಕ್ಕಳಿಗೆ ಹೆಚ್ಚು ಉತ್ತಮ ಚಿಕಿತ್ಸೆಯನ್ನು ಒದಗಿಸಿ ಉತ್ತಮ ಗುಣ ಕಾಣುವ ನಿಟ್ಟಿನಲ್ಲಿ ನಾವು ಬೇರೆಯದೇ ಚಿಕಿತ್ಸಾ ಕಾರ್ಯತಂತ್ರವನ್ನು ಹೊಂದಬೇಕಾಗಿದೆ ಮತ್ತು ಇದನ್ನು ಕಂಡುಕೊಳ್ಳಲು ಹೆಚ್ಚು ಚಿಕಿತ್ಸಾ ಪ್ರಯೋಗಗಳು ನಡೆಯಬೇಕಾಗಿವೆ.

ಡಾ| ಹರ್ಷಪ್ರಸಾದ ಎಲ್‌.,

ಕನ್ಸಲ್ಟಂಟ್‌ ಪೀಡಿಯಾಟ್ರಿಕ್‌ ಹೆಮಟಾಲಜಿಸ್ಟ್‌ ಮತ್ತು ಓಂಕಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ಸರ್ಕಲ್‌, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

 

ಟಾಪ್ ನ್ಯೂಸ್

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

rishi in telugu web series

ವೆಬ್ ಸಿರೀಸ್ ನತ್ತ ರಿಷಿ: ತೆಲುಗಿನ ‘ಶೈತಾನ್’ನಲ್ಲಿ ನಟನೆ

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು!

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ತಂಬಾಕು ವರ್ಜನ ದಿನ: ಮೇ 31; ತಂಬಾಕು ತ್ಯಜಿಸಿ; ತಂಬಾಕು ಬೇಡವೆನ್ನಿ

ಮೇ 31 ವಿಶ್ವ ತಂಬಾಕು ವರ್ಜನ ದಿನ ; ತಂಬಾಕು ತ್ಯಜಿಸಿ; ತಂಬಾಕು ಬೇಡವೆನ್ನಿ

ಬೇಸಗೆಯಲ್ಲಿ ವ್ಯಾಯಾಮ; ಶಾಖ-ಸಂಬಂಧಿತ ಕಾಯಿಲೆಗಳ ಹುಟ್ಟಿಗೆ ಕಾರಣವಾಗಬಹುದು

ಬೇಸಗೆಯಲ್ಲಿ ವ್ಯಾಯಾಮ; ಶಾಖ-ಸಂಬಂಧಿತ ಕಾಯಿಲೆಗಳ ಹುಟ್ಟಿಗೆ ಕಾರಣವಾಗಬಹುದು

ಗರ್ಭಕಂಠದ ಕ್ಯಾನ್ಸರ್‌: ಕಾರಣಗಳು,ರೋಗಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ಗರ್ಭಕಂಠದ ಕ್ಯಾನ್ಸರ್‌: ಕಾರಣಗಳು,ರೋಗಲಕ್ಷಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ಸಮತೋಲನದ ತೊಂದರೆ, ತಲೆ ಸುತ್ತುವಿಕೆ ಅನುಭವಿಸುತ್ತಿದ್ದೀರಾ?

ಸಮತೋಲನದ ತೊಂದರೆ, ತಲೆ ಸುತ್ತುವಿಕೆ ಅನುಭವಿಸುತ್ತಿದ್ದೀರಾ?

ಗರ್ಭಧಾರಣೆಯ ಸಂದರ್ಭದಲ್ಲಿ ಸ್ತ್ರೀ ಜನನಾಂಗದ ಕ್ಯಾಂಡಿಡಿಯಾಸಿಸ್‌

ಗರ್ಭಧಾರಣೆಯ ಸಂದರ್ಭದಲ್ಲಿ ಸ್ತ್ರೀ ಜನನಾಂಗದ ಕ್ಯಾಂಡಿಡಿಯಾಸಿಸ್‌

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

tdy-17

ಯಶವಂತಪುರ- ಹಾಸನಕ್ಕೆ ರೈಲು ಸೇವೆ ವಿಸ್ತರಿಸಿ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

1-sadsad

Georgia ಟ್ರಕ್ ರಾಂಪ್ ಗೆ ಗುದ್ದಿ 120 ಅಡಿ ಗಾಳಿಯಲ್ಲಿ ಹಾರಿದ ಕಾರು;ವಿಡಿಯೋ

ಮಕ್ಕಳಿದ್ದರೂ ಶಿಕ್ಷಕರಿಲ್ಲ, ಮುಚ್ಚುವ ಸ್ಥಿತಿಯಲ್ಲಿ 15 ಶಾಲೆಗಳು

ಮಕ್ಕಳಿದ್ದರೂ ಶಿಕ್ಷಕರಿಲ್ಲ, ಮುಚ್ಚುವ ಸ್ಥಿತಿಯಲ್ಲಿ 15 ಶಾಲೆಗಳು

rishi in telugu web series

ವೆಬ್ ಸಿರೀಸ್ ನತ್ತ ರಿಷಿ: ತೆಲುಗಿನ ‘ಶೈತಾನ್’ನಲ್ಲಿ ನಟನೆ