BJP ಜತೆಗಿನ ಮೈತ್ರಿಯಲ್ಲಿ ತೊಂದರೆ ಇಲ್ಲ: ಎಐಎಡಿಎಂಕೆ
Team Udayavani, Sep 22, 2023, 12:19 AM IST
ಮಧುರೈ: “ಬಿಜೆಪಿಯೊಂದಿಗೆ ಚುನಾವಣ ಮೈತ್ರಿಯಲ್ಲಿ ಎಐಎಡಿಎಂಕೆಗೆ ಯಾವುದೇ ತೊಂದರೆ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಅವರು ಪುನಃ ಪ್ರಧಾನಿ ಆಗಬೇಕೆಂದು ಪಕ್ಷ ಬಯಸುತ್ತದೆ’ ಎಂದು ಎಐಎಡಿಎಂಕೆ ಹಿರಿಯ ನಾಯಕ ಸೆಲ್ಲೂರು ಕೆ.ರಾಜು ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಹೇಳಿಕೆ ಹಿನ್ನೆಲೆಯಲ್ಲಿ ಮೈತ್ರಿ ಕಡಿದು ಕೊಳ್ಳ ಲಾಗಿದೆ ಎಂಬ ವರದಿಗಳ ನಡುವೆಯೇ ಹೊಸ ಹೇಳಿಕೆ ನೀಡಲಾಗಿದೆ. “ತಮಿಳುನಾಡು ಬಿಜೆಪಿ ಅಧ್ಯಕ್ಷರು ಎಐಎ ಡಿಎಂಕೆ ನಾಯಕ ದಿ| ಸಿ.ಎನ್.ಅಣ್ಣಾದೊರೈ ಅವ ರನ್ನು ಅವಮಾನಿಸುವುದನ್ನು ಪಕ್ಷ ಸಹಿಸುವುದಿಲ್ಲ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, “ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ| ಸಿ.ಎನ್.ಅಣ್ಣಾದೊರೈ ಅವರನ್ನು ನಾನು ಅವಮಾನಿಸಿಲ್ಲ. ಆದರೆ 1956ರಲ್ಲಿ ನಡೆದ ಘಟನೆಯನ್ನು ಸ್ಮರಿಸಿದ್ದೇನೆ. ಇದೇ ಘಟನೆಯನ್ನು 1998ರಲ್ಲಿ ಅಂದಿನ ಸಿಎಂ ಕರುಣಾನಿಧಿ ಕೂಡ ನೆನಪಿಸಿದ್ದರು. ಈ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?