ಮಂಗಳೂರು: ಚಲಾವಣೆಯಾಗದ 10 ರೂ. ನಾಣ್ಯ; ಹೊಸ ನೋಟೂ ಇಲ್ಲ


Team Udayavani, May 11, 2022, 7:35 AM IST

ಚಲಾವಣೆಯಾಗದ 10 ರೂ. ನಾಣ್ಯ; ಹೊಸ ನೋಟೂ ಇಲ್ಲ

ಮಂಗಳೂರು: ರಾಜ್ಯದಲ್ಲಿ ಹತ್ತು ರೂಪಾಯಿಯ ನಾಣ್ಯಗಳು ಚಲಾವಣೆಯಾಗದೆ ಮೂಟೆಗಟ್ಟಲೆ ಉಳಿದುಕೊಂಡ ಪರಿಣಾಮ ಕರಾವಳಿಯ ಬ್ಯಾಂಕ್‌ಗಳಿಗೆ 10 ರೂ. ಹೊಸ ನೋಟುಗಳು ಬರುತ್ತಿಲ್ಲ.

ಮೂರು ವರ್ಷಗಳಿಂದ 10 ರೂ. ಹೊಸ ನೋಟುಗಳು ಬರುತ್ತಿಲ್ಲ. ಇತರೆಲ್ಲ ರಾಜ್ಯ ಗಳಲ್ಲಿ 10 ರೂ. ನಾಣ್ಯಗಳ ಮೇಲೆ ಜನರಿಗೆ ಸಂಶಯ ಇಲ್ಲ, ಅಲ್ಲೆಲ್ಲ ಚಲಾವಣೆಯಾಗುತ್ತಿದೆ. ಹಾಗಾಗಿ ಅಲ್ಲಿಗೆ 10 ರೂ.ನ ಹೊಸ ನೋಟುಗಳ ಬಂಡಲುಗಳೂ ಹೋಗುತ್ತಿವೆ. ನಮ್ಮಲ್ಲಿ ಮಾತ್ರ ಕೊರತೆಯಾಗಿದೆ ಎಂದು ಭಾರತೀಯ ಸ್ಟೇಟ್‌ಬ್ಯಾಂಕ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸಮಸ್ಯೆ ಕರಾವಳಿ ಜಿಲ್ಲೆಗಳಲ್ಲೂ ಇದೆ. ಹೊಸದಾಗಿ ನೋಟು ಕೇಳಿಕೊಂಡು ಬರುವವರಿಗೆ ನೀಡಲು ನಮ್ಮಲ್ಲಿ ನೋಟುಗಳು ಇರುವುದಿಲ್ಲ. 10 ರೂ. ನಾಣ್ಯಗಳು ದೊಡ್ಡ ಪ್ರಮಾಣದಲ್ಲಿ ಶಾಖೆಗಳಲ್ಲಿಉಳಿದುಕೊಂಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟುಗಳನ್ನು ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಬರುತ್ತಿಲ್ಲ ಹೊಸ ನೋಟು
ಬ್ಯಾಂಕ್‌ನವರ ಪ್ರಕಾರ ಮೂರು ವರ್ಷಗಳಿಂದ 10ರ ಹೊಸ ನೋಟು ಬರುತ್ತಿಲ್ಲ. ಇರುವ ನೋಟುಗಳೇ ಚಲಾವಣೆಯಾಗುತ್ತಿವೆ. ಸಮಾರಂಭಗಳಲ್ಲಿ ದಕ್ಷಿಣೆ ರೂಪದಲ್ಲಿ ನೀಡುವುದಕ್ಕೆ, ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ಜನರಿಗೆ ಹೊಸ ನೋಟುಗಳು ನೇರವಾಗಿ ಉಪಯೋಗಕ್ಕೆ ಬರುವುದು ಒಂದೆಡೆಯಾದರೆ ಸತತ ಚಲಾವಣೆಯಲ್ಲಿರುವ ನೋಟುಗಳು ಹಾಳಾಗುವುದರಿಂದ ನಿಯಮಿತವಾಗಿ ನೋಟುಗಳು ಪ್ರಸರಣದಲ್ಲಿ ಇರುವ ಅಗತ್ಯವಿರುತ್ತದೆ. ಪೇಮೆಂಟ್‌ ಆ್ಯಪ್‌ಗ್ಳಿಂದಾಗಿ ಚಿಲ್ಲರೆ ಸಮಸ್ಯೆ ಸ್ವಲ್ಪ ಕಡಿಮೆಯಾಗಿದ್ದರೂ ಹಾಲು, ತರಕಾರಿ, ಮತ್ತಿತರ ದೈನಂದಿನ ಅಗತ್ಯಗಳಿಗೆ ಅತ್ಯಧಿಕವಾಗಿ ಬಳಕೆಯಾಗುವುದು 10ರ ನೋಟು. ಹಾಗಾಗಿ ಸದ್ಯ ಹಳೆಯ, ಮಾಸಿದ, ಹರಕಲು ನೋಟುಗಳೇ ಕರಾವಳಿಯಲ್ಲಿ ಚಲಾವಣೆಯಲ್ಲಿವೆ ಎನ್ನುತ್ತಾರೆ ಅಧಿಕಾರಿಗಳು.

ಬೇಡಿಕೆ ಇಲ್ಲದಿದ್ದರೂ
ಬರುತ್ತಿದೆ 10ರ ನಾಣ್ಯ!
ಹಲವು ಶಾಖೆಗಳಲ್ಲಿ 10 ರೂ. ನಾಣ್ಯ ಮೂಟೆಗಟ್ಟಲೆ ಉಳಿದುಕೊಂಡಿವೆ. ಹಾಗಿದ್ದರೂ ಹೊಸ ನಾಣ್ಯಗಳು ಮತ್ತೆ ಬರುತ್ತಿವೆ. ಬೇಕಾದವರು ಮಾತ್ರ ಬಂದು ಪಡೆದುಕೊಂಡು ಹೋಗುತ್ತಿದ್ದಾರೆ. ಆದರೆ 10ರ ನೋಟು ಬರುವುದು ನಿಂತೇ ಹೋಗಿದೆ ಎಂದು ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನೇಕ ಬಾರಿ ಕಾಯಿನ್‌ ಮೇಳ ನಡೆಸಿ 10 ರೂ. ನಾಣ್ಯ ವಿತರಣೆಗೆ ಯತ್ನ ಮಾಡಲಾಗಿದೆ. ಆದರೂ ಜನರಿಗೆ 10ರ ನಾಣ್ಯದ ಮೇಲೆ ಅದೇಕೋ ಸಂಶಯ ನಿವಾರಣೆಯಾಗುತ್ತಿಲ್ಲ. ಈಗ 1, 2 ರೂ. ನಾಣ್ಯಗಳ ಚಲಾವಣೆ ನಿಧಾನಕ್ಕೆ ಕಡಿಮೆಯಾಗುತ್ತಿದೆ, ಅವುಗಳ ಸ್ಥಾನವನ್ನು 10 ರೂ. ನಾಣ್ಯಗಳು ಆಕ್ರಮಿಸಲಿವೆ, ಮುಂದೆ ಅದರ ಚಲಾವಣೆ ಅನಿವಾರ್ಯ ಎನ್ನುತ್ತಾರೆ ಅವರು.

2,000 ರೂ.
ನೋಟು ಕೂಡ ಇಲ್ಲ
2,000 ರೂ. ಮುಖಬೆಲೆಯ ನೋಟಿನ ಮುದ್ರಣವನ್ನೂ ಆರ್‌ಬಿಐ ನಿಲ್ಲಿಸಿರುವುದರಿಂದ ಹೊಸ ನೋಟುಗಳು ಬರುತ್ತಿಲ್ಲ. ಬಹುತೇಕ ಮೂರ್‍ನಾಲ್ಕು ವರ್ಷಗಳ ಹಿಂದಿನ ನೋಟುಗಳಾದ್ದರಿಂದ ಹಾಳಾಗಿವೆ. ಹಾಗಾಗಿ ಎಟಿಎಂಗಳಲ್ಲಿ ಈಗ ನಾವು ಕೇವಲ 500 ರೂ., 200 ರೂ. ಮತ್ತು 100 ರೂ. ನೋಟು ಮಾತ್ರವೇ ಹಾಕುತ್ತಿದ್ದೇವೆ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

ಯಾಕೆ ಈ ತಿರಸ್ಕಾರ?
ಕೆಲವು ವರ್ಷಗಳ ಹಿಂದೆ ಹೊಸ 10 ರೂ. ನಾಣ್ಯ (ಚಿನ್ನ ಹಾಗೂ ಸ್ಟೀಲ್‌ ಬಣ್ಣವೆರಡೂ ಇರುವ) ಬಿಡುಗಡೆಯಾದ ಸಂದರ್ಭ ಕೆಲವು ಕಡೆಗಳಲ್ಲಿ ಈ ನಾಣ್ಯದ ನಕಲಿಗಳು ಮಾರುಕಟ್ಟೆಗೆ ಬಂದಿತ್ತು ಎಂಬ ಗಾಳಿಸುದ್ದಿ ಹರಡಿತ್ತು. ಆ ಬಳಿಕ ಜನ 10 ರೂ. ನಾಣ್ಯ ತಿರಸ್ಕರಿಸಲು ಆರಂಭಿಸಿದ್ದರು. ಅಲ್ಲದೆ ಈ ನಾಣ್ಯ ಭಾರ ಇದ್ದು ಇರಿಸಿಕೊಳ್ಳುವುದಕ್ಕೆ ರಗಳೆ ಎಂಬ ಅಭಿಪ್ರಾಯವೂ ಇದೆ.

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.