Manjeshwara: ಮನೆಯಿಂದ ಅಡಿಕೆ ಕಳವು: ಇಬ್ಬರ ಸೆರೆ
Team Udayavani, Sep 8, 2023, 12:24 AM IST
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಾಂಪೌಂಡ್ನ ರೆಹ್ಮಾನ್ ಸಹೀಂ ಅವರ ಮನೆಯಿಂದ ಆರು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ 1.75 ಲಕ್ಷ ರೂ. ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ನಡೆದಿದೆ.
ಈ ಬಗ್ಗೆ ದೂರು ನೀಡಿದ್ದು ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿ ಕಡಂಬಾರು ಇಡಿಯಾ ನಿವಾಸಿ ಮುಸ್ತಾಕ್ ಹುಸೈನ್(22) ಮತ್ತು ಕಾಜೂರು ನಿವಾಸಿ ಅಬ್ದುಲ್ ರಶೀದ್ (21)ನನ್ನು ಬಂಧಿಸಿದ್ದಾರೆ.