ಒಮಿಕ್ರಾನ್ : 34 ಮೊಬೈಲ್ ತಂಡ ರಚನೆ : ಶೀಘ್ರವೇ ಇನ್ನು ಆರು ತಂಡ ರಚನೆ
Team Udayavani, Jan 18, 2022, 3:57 PM IST
ಹುಬ್ಬಳ್ಳಿ : ಕೋವಿಡ್-19ರ ಒಮಿಕ್ರಾನ್ ನಿಯಂತ್ರಿಸಲು ಮನೆ ಮನೆಗೆ ತೆರಳಿ ಪರಿಶೀಲಿಸಲು ಹಾಗೂ ರೋಗದ ಲಕ್ಷಣಗಳು ಕಂಡು ಬಂದವರಿಗೆ ರೋಗನಿರೋಧಕ ಹಾಗೂ ವಿಟಾಮಿನ್ ಮಾತ್ರೆ ಕೊಡಲು ಆರೋಗ್ಯ ಸಿಬ್ಬಂದಿಯುಳ್ಳ 34 ಮೊಬೈಲ್ ತಂಡ ಹು-ಧಾದಲ್ಲಿ ರಚಿಸಲಾಗಿದೆ. ಶೀಘ್ರವೇ ಇನ್ನಾರು ತಂಡ ರಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಸನಗೌಡ ಕರಿಗೌಡರ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ತಡೆಗಟ್ಟಲು ಈಗಾಗಲೇ ಹುಬ್ಬಳ್ಳಿಯಲ್ಲಿ 28, ಧಾರವಾಡದಲ್ಲಿ 6 ಮೊಬೈಲ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಿಸಲು ಕೆಲ ದಿನಗಳಲ್ಲಿ ನವಲಗುಂದ, ಕಲಘಟಗಿ, ಕುಂದಗೋಳಕ್ಕೆ ತಲಾ ಒಂದು ಮೊಬೈಲ್ ತಂಡವನ್ನು ವ್ಯಾನ್ ಸಮೇತ ರಚಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ರವಿವಾರ ಹೊಸದಾಗಿ 634 ಸಕ್ರಿಯವಾಗಿವೆ. 78 ಬಿಡುಗಡೆ ಮಾಡಲಾಗಿದೆ. ಸದ್ಯ ಸಕ್ರಿಯವಾಗಿ 2,476 ಪ್ರಕರಣಗಳಿವೆ. 111 ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಕೋವಿಡ್ ಕೇರ್
ಸೆಂಟರ್ನಲ್ಲಿ 44 ಜನ ದಾಖಲಾಗಿದ್ದಾರೆ. ಹೋಮ್ ಐಸೋಲೇಷನ್ದಲ್ಲಿ 2,321 ಜನ ಇದ್ದಾರೆ. ಐಸಿಯುದಲ್ಲಿ ಐವರು ದಾಖಲಾಗಿದ್ದಾರೆ. ಒಮಿಕ್ರಾನ್ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ಕೋವಿಡ್-19 ಆರಂಭವಾದಾಗಿನಿಂದ ಇಲ್ಲಿಯವರೆಗೆ 64,537 ಪ್ರಕರಣಗಳಿದ್ದು, 60,740 ಡಿಸಾcರ್ಜ್ ಆಗಿವೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ಶಹರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಕಾರಣ ಶಹರ ಪ್ರದೇಶಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಕೋವಿಡ್-19ರ ಮೂರನೇ ಅಲೆ ಮೊದಲಿನ ಎರಡನೆ ಅಲೆಯಷ್ಟು ಪರಿಣಾಮಕಾರಿ ಆಗಿಲ್ಲ. ಪ್ರಕರಣಗಳು ಹೆಚ್ಚಾಗುತ್ತಿವೆ ವಿನಃ ಸಾವು-ನೋವುಗಳಿಲ್ಲ. ಲಕ್ಷಣಗಳು ಗಂಭೀರವಾಗಿಲ್ಲ. ಜ್ವರ, ನೆಗಡಿ, ಕೆಮ್ಮು ಸಾಮಾನ್ಯವಾಗಿದೆ. ಮೊದಲಿನ ಅಲೆಗಳಿಗಿಂತ ಇದರ ಪರಿಣಾಮ ತೀರಾ ಕಡಿಮೆ ಇದೆ. ಒಇಕ್ರಾನ್ ನಿಯಂತ್ರಿಸಲು ಜನರ ಸಹಕಾರವು ಮುಖ್ಯ. ಯಾರಿಗಾದರೂ ರೋಗದ
ಲಕ್ಷಣ ಕಂಡು ಬಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೆ ತಪಾಸಣಾ ಕೇಂದ್ರಕ್ಕೆ ತೆರಳಿ ಕಫ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಡಿಎಚ್ಒ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು