Karnataka: ಮಲೇಷ್ಯಾಕ್ಕೂ ಮಾದರಿ ನಮ್ಮ ಪಡಿತರ ವಿತರಣೆ
Team Udayavani, Sep 20, 2023, 11:07 PM IST
ಬೆಂಗಳೂರು: ರಾಜ್ಯದಲ್ಲಿರುವ ಪಡಿತರ ವಿತರಣ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಕರ್ನಾಟಕಕ್ಕೆ ಆಗಮಿಸಿರುವ ಮಲೇಷ್ಯಾ ಸರಕಾರದ ನಿಯೋಗವು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ಕುಮಾರಕೃಪಾ ಅತಿಥಿಗೃಹದಲ್ಲಿ ಸಚಿವರನ್ನು ಭೇಟಿ ಮಾಡಿದ ಮಲೇಷ್ಯಾ ಉಪ ಸಚಿವ ವೈ.ಬಿ. ಸನತೇರ್ ಪುವನ್ ಹಜಾಯ್ ಪುಜಿಯಾ ಬಿನಿಟಿ ಸಲೇಹ್ ನೇತೃತ್ವದ ನಿಯೋಗವು ಕರ್ನಾಟದಲ್ಲಿನ ಪಡಿತರ ವಿತರಣೆ ಪದ್ಧತಿಯನ್ನು ಮಲೇಷ್ಯಾದಲ್ಲೂ ಅಳವಡಿಸಿಕೊಳ್ಳಲು ಉತ್ಸುಕತೆ ತೋರಿದೆ.
ಆಹಾರ ಪದಾರ್ಥಗಳನ್ನು ಎಲ್ಲಿಂದ ಹೇಗೆ ಖರೀದಿಸುತ್ತೀರಿ? ಅವುಗಳನ್ನು ದಾಸ್ತಾನು ಎಲ್ಲಿ ಮಾಡುತ್ತೀರಿ? ಯಾವ ಮಾದರಿಯ ಪಡಿತರ ಚೀಟಿ ಕೊಡಲಾಗಿದೆ? ಎಂಬಿತ್ಯಾದಿ ಅಂಶಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ಎರಡು ದಿನಗಳ ಕಾಲ ರಾಜ್ಯ ಪ್ರವಾಸ ನಡೆಸಲಿರುವ ಮಲೇಷ್ಯಾ ನಿಯೋಗ, ಆಹಾರ ಧಾನ್ಯಗಳನ್ನು ದಾಸ್ತಾನು ಮಾಡುವ ಗೋದಾಮುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ.
ಮಲೇಷ್ಯಾಕ್ಕೂ ಮಾದರಿ ನಮ್ಮ ಪಡಿತರ ವಿತರಣೆಈ ವೇಳೆ ಆಹಾರ ಇಲಾಖೆ ಕಾರ್ಯದರ್ಶಿ ಜಿ.ಸಿ. ಪ್ರಕಾಶ್, ಆಯುಕ್ತೆ ಕನಗವಲ್ಲಿ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ