ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಹೆದರಿ, ಹೆಲಿಕಾಪ್ಟರ್ ಏರಿದ ಗೂಬೆ!
ಗೂಬೆಯ ಪ್ರಾಣ ರಕ್ಷಿಸಿದ ಪೈಲಟ್ಗೆ ಹಲವು ನೆಟ್ಟಿಗರು ಶಹಬ್ಟಾಶ್ ಹೇಳಿದ್ದಾರೆ
Team Udayavani, Oct 19, 2020, 12:05 PM IST
ನ್ಯೂಯಾರ್ಕ್: ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಬೆಚ್ಚಿದ ಗೂಬೆ, ಆಕಾಶದಿಂದ ನೀರು ಸುರಿಸಿ ಬೆಂಕಿ ನಂದಿಸುತ್ತಿದ್ದ ಹೆಲಿಕಾಪ್ಟ್ ರ್ ನೊಳಗೆ ಬಂದು ಕುಳಿತು ನಿಟ್ಟುಸಿರುಬಿಟ್ಟ ಕರುಣಾ ಜನಕ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ದಟ್ಟ ಬೆಂಕಿಯಿಂದ ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಗೂಬೆ ಹೆಲಿಕಾಪ್ಟರ್ನ ಪೈಲಟ್ ಜತೆ ಬಂದು ಕುಳಿತು ಪ್ರಾಣಾಪಾಯದಿಂದ ಪಾರಾಗಿದೆ. ಪೈಲಟ್ ದಾಲ್ ಆಲ್ಪೆನರ್ ಕ್ಲಿಕ್ಕಿಸಿರುವ ಗೂಬೆಯ ಫೋಟೊವನ್ನು ಕ್ಲಿಕ್ಕಿಸಿರುವ ಏವಿಯೇಶನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಭಾರೀ ವೈರಲ್ಆಗಿದೆ.
ಗೂಬೆಯ ಪ್ರಾಣ ರಕ್ಷಿಸಿದ ಪೈಲಟ್ಗೆ ಹಲವು ನೆಟ್ಟಿಗರು ಶಹಬ್ಟಾಶ್ ಹೇಳಿದ್ದಾರೆ. ಕಾಡ್ಗಿಚ್ಚಿಗೆ ಗುರಿಯಾದ ಸಿಯೆರ್ರಾ ರಾಷ್ಟ್ರೀಯ ಉದ್ಯಾನದಿಂದ ಗೂಬೆ ಬೇರೆಡೆ ವಲಸೆ ಹೋಗಲು ಯತ್ನಿಸುತ್ತಿತ್ತು.
ಅಮೆರಿಕ “ರಫ್ತು ನಿಯಂತ್ರಣ’ಕ್ಕೆಚೀನ ನೂತನ ಕಾಯ್ದೆ ಜಾರಿ
ರಾಷ್ಟ್ರೀಯ ಸುರಕ್ಷತೆ ನೆಪವೊಡ್ಡಿ ಅಮೆರಿಕಕ್ಕೆ ಆರ್ಥಿಕ ಆಘಾತ ನೀಡಲು “ಸೂಕ್ಷ್ಮ ರಫ್ತು ನಿರ್ಬಂಧ ಕಾಯ್ದೆ’ ಜಾರಿಗೆ ಚೀನ ನಿರ್ಧರಿಸಿದೆ.ಡಿ.1ರಿಂದ ಜಾರಿಗೆ ಬರುವ ಈ ಕಾಯ್ದೆ ಅನ್ವಯ, ರಫ್ತು ನಿಯಂತ್ರಣ ನಿಯಮಾವಳಿಗಳನ್ನು ದುರುಪಯೋಗಪಡಿಸಿಕೊಳ್ಳುವ ಯಾವುದೇ ದೇಶಗಳ ಉತ್ಪನ್ನಗಳ ವಿರುದ್ಧ ಬೀಜಿಂಗ್ ಸರಕಾರ ನಿರ್ಬಂಧ ಹೇರಬಹುದಾಗಿದೆ.
ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವ ನಾಗರಿಕ ಬಳಕೆ ವಸ್ತುಗಳು, ಮಿಲಿಟರಿ ಮತ್ತು ನ್ಯೂಕ್ಲಿಯರ್ ಉತ್ಪನ್ನಗಳು, ವಿವಿಧ ಸರಕುಗಳು, ತಂತ್ರಜ್ಞಾನ ಸೇವೆಗಳ
ರಫ¤ನ್ನು ಈ ಕಾಯ್ದೆ ನಿರ್ಬಂಧಿಸಲಿದೆ.
ಅಮೆರಿಕ ಟಾರ್ಗೆಟ್: ಇತ್ತೀಚೆಗಷ್ಟೇ ಟೆಲಿಕಮ್ಯುನಿಕೇಶನ್ ದೈತ್ಯ ಹುವೈ ಸೇರಿದಂತೆ ವಿವಿಧ ಚೀನೀ ಟೆಕ್ ಕಂಪೆನಿಗಳು, ಅಲ್ಲದೆ ಟಿಕ್ಟಾಕ್ ಒಳಗೊಂಡಂತೆ ಹಲವು ಚೀನೀ ಆ್ಯಪ್ ಗಳನ್ನು ಅಮೆರಿಕ ನಿರ್ಬಂಧಿಸಿತ್ತು. ನೂತನ ಕಾಯ್ದೆ ಮೂಲಕ ಚೀನ, ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ