ಅನಾಥ‌ ಮಕ್ಕಳು, ಆಫ್ ಆದ ಫೋನ್‌ಗಳು!

ಶ್ಮಶಾನವಾದ ಟರ್ಕಿ, ಸಿರಿಯಾ; ಕಣ್ಣೀರ ಕೋಡಿ; ಮುಂದುವರಿದ ಕಂಪನ; ರಕ್ಷಣೆ ಕಾರ್ಯಕ್ಕೆ ಅಡ್ಡಿ

Team Udayavani, Feb 8, 2023, 6:55 AM IST

ಅನಾಥ‌ ಮಕ್ಕಳು, ಆಫ್ ಆದ ಫೋನ್‌ಗಳು!

ಇಸ್ತಾಂಬುಲ್‌: “ನನ್ನ ಅಮ್ಮ ಎಲ್ಲಿ…?’ ಟರ್ಕಿ ಗಡಿಯಲ್ಲಿರುವ ಕಟ್ಟಡವೊಂದರಲ್ಲಿ ಪತ್ತೆಯಾದ 7 ವರ್ಷದ ಬಾಲಕಿಯೊಬ್ಬಳು ಕೇಳುತ್ತಿರುವ ಪ್ರಶ್ನೆಯಿದು!

ತಲೆಗೆ ಬ್ಯಾಂಡೇಜ್‌ ಹಾಕಲಾಗಿದೆ, ಮುಖ, ಕೂದಲು, ಪೈಜಾಮವೆಲ್ಲ ಧೂಳು ಮೆತ್ತಿಕೊಂಡಿದೆ, ಆಸ್ಪತ್ರೆಯ ಮೂಲೆಯಲ್ಲಿ ಕುಳಿತು ಬ್ರೆಡ್‌ ತುಂಡೊಂದನ್ನು ತಿನ್ನುತ್ತಾ ಈ ಬಾಲಕಿ “ಅಮ್ಮ ಎಲ್ಲಿ’ ಎಂದು ಪ್ರಶ್ನಿಸುತ್ತಿದ್ದರೆ, ಅಲ್ಲಿರುವ ಯಾರ ಬಳಿಯೂ ಉತ್ತರವಿಲ್ಲ!

ಹೌದು ರಾತ್ರಿ ಬೆಳಗಾಗುವಷ್ಟರಲ್ಲಿ ಪ್ರಬಲ ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ 5 ಸಾವಿ ರಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡ ನಂತರ, ಅಲ್ಲೇನೂ ಉಳಿದಿಲ್ಲ. ಕಣ್ಣು ಹಾಯಿಸಿ ದಲ್ಲೆಲ್ಲ ಹೆಣದ ರಾಶಿಗಳು, ಧರಾಶಾಹಿಯಾದ ಕಟ್ಟಡಗಳು, ಅವಶೇಷಗಳಡಿಯಿಂದ ಕೇಳಿಬರುತ್ತಿ ರುವ ಆರ್ತನಾದ, ತಮ್ಮವರು ಬದುಕಿ ಬರುವರೇ ಎಂದು ಕಾಯುತ್ತಿರುವ ಕಣ್ಣುಗಳು…ಹೀಗೆ ಮನಸ್ಸು ಕಿವುಚುವಂಥ ದೃಶ್ಯಗಳೇ ಕಾಣ ಸಿಗುತ್ತಿವೆ.

ಅದರಲ್ಲೂ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಂತೂ ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಇನ್ನೇನು ಅಮ್ಮ ಬಂದು ಹಾಲುಣಿಸುತ್ತಾಳೆ, ಅಪ್ಪ ಬಂದು ಎತ್ತಿಕೊಳ್ಳುತ್ತಾನೆ ಎಂಬ ಕಾತರ ಅವುಗಳ ಕಣ್ಣಲ್ಲಿ ಕಾಣುತ್ತಿವೆ.

ಇಡೀ ಕುಟುಂಬವನ್ನೇ ಕಳೆದುಕೊಂಡ ಸಿರಿ ಯಾದ ಮಗುವೊಂದನ್ನು ಮಂಗಳವಾರ ರಕ್ಷಿಸ ಲಾಗಿದೆ. 18 ತಿಂಗಳ ಇಸ್ಮಾಯಿಲ್‌ರನ್ನು ರಕ್ಷಣಾ ಸಿಬಂದಿ ಹೊರತೆಗೆದಿದ್ದಾರೆ. ತೀವ್ರ ಚಳಿಯಿರುವ ಕಾರಣ ಯಾರೋ ಹೊದಿಸಿದ ಕಂಬಳಿಯನ್ನು ಹೊದ್ದುಕೊಂಡು, ಪರಿಚಯವೇ ಇಲ್ಲದ ಜನರನ್ನು ನೋಡುತ್ತಾ ಕುಳಿತಿರುವ ದೃಶ್ಯ ಎಂಥಾ ಕಲ್ಲುಹೃದಯವನ್ನೂ ಕರಗಿಸುವಂತಿದೆ.

ಇನ್ನೊಂದೆಡೆ ಕುಸಿದು ಬಿದ್ದಿರುವ ಕಟ್ಟಡ ವೊಂದರ ಅಂಚಿನಲ್ಲಿ ಸಿಲುಕಿ ನೇತಾಡುತ್ತಿದ್ದ ಬಾಲಕನೊಬ್ಬನನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಭೂಕಂಪ ಸಂಭವಿಸಿ 12 ಗಂಟೆಗಳ ಅನಂತರವೂ ಅವಶೇಷಗಳಡಿ ಜೀವಂತವಾಗಿದ್ದ ಟರ್ಕಿಶ್‌ ಬಾಲಕಿಯೊಬ್ಬಳನ್ನು ಮಂಗಳವಾರ ಹೊರತೆಗೆ ಯಲಾಗಿದೆ. ಇದೇ ವೇಳೆ ಸೋಮವಾರ ಅವಶೇಷಗಳಡಿಯಿಂದಲೇ ಕೆಲವರು ತಮ್ಮವರಿಗೆ ಫೋನ್‌ ಕರೆ ಮಾಡಿ ರಕ್ಷಿಸುವಂತೆ ಕೇಳಿ ಕೊಳ್ಳುತ್ತಿದ್ದರು. ಮಂಗಳವಾರ ಅವರ ಫೋನ್‌ಗಳು ಸ್ವಿಚ್‌ ಆಫ್ ಆಗಿವೆ. ಅವರು ಕೊನೆ ಯುಸಿರೆಳೆದಿದ್ದಾರಾ ಅಥವಾ ಫೋನ್‌ ಬ್ಯಾಟರಿ ಖಾಲಿ ಆಗಿರಬಹುದೇ ಎಂಬ ಆತಂಕದಿಂದ ರಕ್ಷಣಾ ಪಡೆಗಳ ಮುಂದೆ ಹಲವರು ಗೋಳಾ ಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ನಾಗರಿಕ ಯುದ್ಧದಿಂದ ನರಕ ಸದೃಶವಾಗಿದ್ದ ಸಿರಿಯಾದಿಂದ ಹೊರಟು ಟರ್ಕಿಯಲ್ಲಿ ಬದುಕು ಸಾಗಿಸುತ್ತಿದ್ದ ವಲಸಿಗರಿಗೆ ಈ ಭೂಕಂಪ ದೊಡ್ಡಮಟ್ಟದ ಆಘಾತವನ್ನೇ ನೀಡಿದೆ. ಹಲವರು ನಿರ್ವಸಿತರಾಗಿದ್ದು, ಮನೆ-ಮಠಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆ: ಸೋಮವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದ ಬಳಿಕವೂ ಹಲವು ಬಾರಿ ಭೂಮಿ ಕಂಪಿಸುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯ ಕ್ಷಿಪ್ರವಾಗಿ ನಡೆಯಲಿ ಎಂಬ ಕಾರಣಕ್ಕೆ ಟರ್ಕಿ ಸರಕಾರವು 3 ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಭಾರತ, ಅಮೆರಿಕ, ಯುರೋಪ್‌ ಸೇರಿದಂತೆ ಹಲವು ದೇಶಗಳು ಭೂಕಂಪ ಪೀಡಿತ ರಾಷ್ಟ್ರಗಳ ನೆರವಿಗೆ ಧಾವಿಸಿವೆ.

ಹಸುಗೂಸನ್ನು ಎದೆಗೊತ್ತಿಕೊಂಡು ಕಣ್ಣೀರು
ವ್ಯಕ್ತಿಯೊಬ್ಬರು ಅವಶೇಷಗಳಡಿ ಶವವಾಗಿ ಸಿಕ್ಕಿದ ತನ್ನ ಹಸುಗೂಸನ್ನು ಎದೆಗೊತ್ತಿಕೊಂಡು ಕಣ್ಣೀರು ಸುರಿಸುತ್ತಾ ಓಡುತ್ತಿರುವ ವೀಡಿಯೋವೊಂದು ಎಲ್ಲರ ಕಣ್ಣಂಚಲ್ಲೂ ನೀರು ಜಿನುಗಿಸಿದೆ. ಸಿರಿಯಾದ ಅಲೆಪ್ಪೋದಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಘಾನಾ ಫ‌ುಟ್ಬಾಲಿಗನ ಪತ್ತೆ!
ಟರ್ಕಿಯ ಭೂಕಂಪದ ವೇಳೆ ಕಣ್ಮರೆಯಾಗಿದ್ದ ಘಾನಾದ ರಾಷ್ಟ್ರೀಯ ಫ‌ುಟ್ಬಾಲ್‌ ಆಟಗಾರ ಕ್ರಿಶಿrಯನ್‌ ಅಟ್ಸು(31) ಅವರು ಕೊನೆಗೂ ಪತ್ತೆಯಾಗಿದ್ದಾರೆ. ಮಂಗಳ ವಾರ ಅವಶೇಷಗಳಡಿಯಿಂದ ಅವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

ಅವಶೇಷಗಳ‌ ಅಡಿಯಿಂದ ಶಿಶುವಿನ ರಕ್ಷಣೆ
ಸಿರಿಯಾದ ಕುಸಿದಿರುವ ಕಟ್ಟಡಗಳ ಅವಶೇಷದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ಭೂಕಂಪದ ಸಮಯದಲ್ಲೇ ತಾಯಿಗೆ ಹೆರಿಗೆ ನೋವು ಬಂದಿ ದ್ದು, ಮಗುವಿಗೆ ಜನ್ಮ ನೀಡುತ್ತಿರುವಾಗಲೇ ಭೂಕಂಪ ಸಂಭವಿಸಿ ತಾಯಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್‌ ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಅವಶೇಷಗಳಡಿಯಿಂದ ಮಗುವನ್ನು ಮೇಲಕ್ಕೆತ್ತಲಾಗಿದೆ. ಮಗುವಿನ ತಂದೆ ಹಾಗೂ ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.