ರಸ್ತೆ ಅಪಘಾತ ವೇಳೆ ಮಾನವೀಯತೆ ಮೆರೆದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ
Team Udayavani, Jan 9, 2021, 3:36 PM IST
ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತ ವೇಳೆ ಮಾಜಿ
ಸಂಸದ ಪ್ರಕಾಶ ಹುಕ್ಕೇರಿ ಅವರು ಗಾಯಾಳುಗಳಿಗೆ ಸಾಂತ್ವನ ಹೇಳಿ ಮಾನವೀಯತೆ ಮೆರೆದರು.
ಹಿರೇಬಾಗೇವಾಡಿ ಬಳಿಯ ಹೆದ್ದಾರಿಯಲ್ಲಿ ಚಿಕ್ಕ ಅಪಘಾತ ಸಂಭವಿಸಿತ್ತು. ಈ ಮಾರ್ಗದ ಮೂಲಕವೇ ಹೊರಟಿದ್ದ ಪ್ರಕಾಶ ಹುಕ್ಕೇರಿ ಅವರು ಇದನ್ನು ನೋಡಿ ಕಾರಿನಿಂದ ಕೆಳಗಿಳಿದು ಗಾಯಾಳುಗಳನ್ನು ಉಪಚರಿಸಿದರು. ನಂತರ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ನಂತರ ಗಾಯಾಳುಗಳಿಗೆ ಉಪಚಾರಕ್ಕಾಗಿ ಪ್ರಕಾಶ ಹುಕ್ಕೇರಿ ಅವರು 10 ಸಾವಿರ ರೂ. ಹಣ ನೀಡಿ ಮಾದರಿಯಾದರು. ಇದನ್ನು ನೋಡಿದ ಸಾರ್ವಜನಿಕರು ಹುಕ್ಕೇರಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸುಳ್ಳು ಭವಿಷ್ಯಗಾರ : ಡಿಸಿಎಂ ಗೋವಿಂದ ಕಾರಜೋಳ ಆರೋಪ