ಸ್ವಲೀನತೆಯಿರುವ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಲಕ್ಷಣಗಳು


Team Udayavani, Mar 23, 2023, 11:00 AM IST

mental-health-of-children

ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳ ಬಗ್ಗೆ ಚರ್ಚೆ ಆಗುತ್ತಿದೆ. ಅದರಲ್ಲಿಯೂ ಕೋವಿಡ್‌ ಮಹಾಮಾರಿ ಪ್ರಪಂಚವನ್ನೇ ನಲುಗಿಸಿದ ಮೇಲೆ ಮತ್ತಷ್ಟು ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ, ಒಲವು ಹೆಚ್ಚಿದೆ ಎಂದರೆ ತಪ್ಪಲ್ಲ ಹೇಗೆ ಕೋವಿಡ್‌ – 19 ಮಹಾಮಾರಿ ಸಮಸ್ಯೆ ನಿಗೂಢವಾಗಿದೆಯೋ ಅಷ್ಟೇ ನಿಗೂಢ ಈ ಆಟಿಸಂ ಅಥವಾ ಸ್ವಲೀನತೆ ಎಂದರೆ ತಪ್ಪಲ್ಲ. ಯಾಕೆಂದರೆ ಈ ಸಮಸ್ಯೆಯು ಕೂಡ ಅಷ್ಟೇ ಜಟಿಲವಾದದ್ದು.

ಪ್ರತೀ ವರ್ಷ ಎಪ್ರಿಲ್‌ 2ರಂದು ನಾವು ವಿಶ್ವ ಆಟಿಸಂ ದಿನವಾಗಿ ಆಚರಿಸುತ್ತಾ ಬಂದಿದ್ದೇವೆ. ಈ ಸಮಸ್ಯೆಯಿಂದ ಬಳಲುವವರನ್ನು ಗುರುತಿಸಬೇಕಾದರೆ ಕೆಲವೊಂದು ಗುಣಲಕ್ಷಣಗಳನ್ನು ಗಮನಿಸಬಹುದು. ಈ ಸ್ವಲೀನತೆ ಇರುವವರಲ್ಲಿ ಸಾಮಾನ್ಯವಾಗಿ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಆಗದೇ ಇರುವುದು, ಹಾಗೆ ಸಂವಹನ ವಿಚಾರವಾಗಿ ಸಮಸ್ಯೆಗಳು ಅಂದರೆ, ಅವರಿಗೆ ಭಾಷೆ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ಆಗದೇ ಇರುವುದು, ನರಗಳ ಬೆಳವಣಿಗೆ ಅಥವಾ ನ್ಯೂನತೆ ಕಂಡುಬರುವುದು. ಇವುಗಳೊಟ್ಟಿಗೆ ಕೆಲವೊಮ್ಮೆ ವರ್ತನೆಯ ಸಮಸ್ಯೆಗಳು ಕೂಡ ಇರಬಹುದು. ಕೆಲವೊಮ್ಮೆ ಪದೇ, ಪದೇ ಹೇಳಿದ ಪದವನ್ನು ಪುನರಾವರ್ತಿತ ಮಾಡುವುದು. ಹಾಗೆಯೇ ಕೆಲವೊಂದು ವಿಚಾರಗಳಲ್ಲಿ ವಿಶೇಷ ಆಸಕ್ತಿಗಳು ಎಂದರೆ ಸಾಮಾನ್ಯವಾಗಿ ತಿರುಗುತ್ತಿರುವ ಗಾಡಿಗಳ ಚಕ್ರಗಳನ್ನೇ ದಿಟ್ಟಿಸಿ ನೋಡುವುದು ಅಥವಾ ಯಾವುದೇ ವಸ್ತುವನ್ನು ಅದರ ಪದರಗಳನ್ನು ಸ್ಪರ್ಷಿಸಿ ನೋಡುವುದು, ಆದಷ್ಟೇ ಅಲ್ಲದೇ ಅತಿಯಾದ ಶಬ್ಧಗಳಿಗೆ ಚೀರುವುದು ಅಥವಾ ಪರಿಸರದಲ್ಲಿ ಹೊಂದಿಕೊಳ್ಳಲು ತೊಂದರೆಯಾಗಬಹುದು.

ಸ್ವಲೀನತೆಯಿಂದ ಕೂಡಿರುವ ಮಕ್ಕಳು/ವ್ಯಕ್ತಿಗಳು ಸಾಮಾನ್ಯವಾಗಿ ಅವರ ಹೆಸರನ್ನು ಕರೆದಾಗ ಸ್ಪಂದಿಸಲು ಸಮಸ್ಯೆಗಳಾಗುತ್ತವೆ. ಮತ್ತೆ ಕೆಲವೊಮ್ಮೆ ತಮ್ಮ ಕುಟುಂಬದವರನ್ನೇ ಅಂದರೆ ಅವರ ಪೋಷಕರನ್ನೇ ಗುರುತಿಸಲು ಆಗದೇ ಇರಬಹುದು. ಬೇರೆಯವರೊಂದಿಗೆ ದಿಟ್ಟಿಸಿ ಅಂದರೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಅಥವಾ ಸಂವಹನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಆಗದೇ ಇರುವುದು. ವಯಸ್ಸಿಗೆ ಅನುಗುಣವಾಗಿ ಸಾಮಾಜಿಕ ಬೆಳವಣಿಗೆ ಆಗದೇ ಇರಬಹುದು. ತಮ್ಮ ಅನಿಸಿಕೆ, ಭಾವನೆಗಳನ್ನು ವ್ಯಕ್ತಪಡಿಸಲು ಸಮಸ್ಯೆ ಹಾಗೂ ಒಬ್ಬಂಟಿಯಾಗಿ ಕಾಲಕಳೆಯಲು ಇಚ್ಛಿಸುವುದು.

ಈ ರೀತಿಯ ಸಮಸ್ಯೆಗಳು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಲ್ಲೂ ನೋಡಬಹುದು. ಆದರೆ ಸಾಮಾನ್ಯವಾಗಿ ಗಮನಿಸಿದರೆ ನಮ್ಮ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ಶೇಕಡ ಗಂಡು ಮಕ್ಕಳಲ್ಲೇ ಈ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತದೆ. ಈ ಸ್ವಲೀನತೆ ಬರಲು ಹಲವಾರು ಕಾರಣಗಳಿವೆ. ಇದು ಕೆಲವೊಮ್ಮೆ ವಂಶಪಾರಂಪರ್ಯವಾಗಿ ಬಂದರೆ, ಕೆಲವೊಂದು ಮಾರಕ ಪರಿಸರದಿಂದಲೂ ಕಾರಣವಾಗಬಹುದು.

ಸ್ವಲೀನತೆಯನ್ನು ಗುರುತಿಸಲು ಏಕೈಕ ಪರೀಕ್ಷೆ ಎಂದಿಲ್ಲ. ಇದನ್ನು ಗುರುತಿಸಲು ಪೂರ್ತಿ ಪ್ರಮಾಣದ ವೈದ್ಯಕೀಯ ತಂಡದ ಅವಶ್ಯಕತೆ ಇದೆ. ಈ ತಂಡವು ನುರಿತ ತಜ್ಞರಾದ ನರಮಾನಸಿಕ ತಜ್ಞರು, ಮಾನಸಿಕ ತಜ್ಞರು , ಭಾಷಾ ತಜ್ಞರು, ಮಕ್ಕಳ ತಜ್ಞರು ಹೀಗೆ ಎಲ್ಲರೂ ಅವರದೇ ರೀತಿಯ ಪರೀಕ್ಷೆಗಳ ಮೂಲಕ ಇದನ್ನು ಖಚಿತಪಡಿಸಬಹುದಾಗಿದೆ. ಈ ರೀತಿಯ ಸಮಸ್ಯೆಯನ್ನು ಗುರುತಿಸಬೇಕಾದರೆ ಕೆಲವೊಂದು ಎಚ್ಚರವನ್ನು ವಹಿಸಬೇಕಾಗುತ್ತದೆ. ಯಾಕೆಂದರೆ ಗುರುತಿಸಿದ ಎಲ್ಲಾ ಮಕ್ಕಳಲ್ಲಿ ಅವರ ತಿಳುವಳಿಕೆ ಜ್ಞಾನ ಉದಾಹರಣೆಗೆ ಬುದ್ಧಿಶಕ್ತಿ ಒಂದೇ ಆಗಿರುವ ಅವಶ್ಯಕತೆ ಇಲ್ಲ. ಅವನು ಅಥವಾ ಅವಳು ಬುದ್ಧಿಮಾಂದ್ಯ ಮಗು/ವ್ಯಕ್ತಿಯಾಗಿರ ಬೇಕೆಂದೇನಿಲ್ಲ ಯಾಕೆಂದರೆ ಈ ರೀತಿಯ ಕೆಲವು ಮಕ್ಕಳನ್ನು ನಾವು Asperger Syndrome ಎಂದು ಕೂಡ ಗುರುತಿಸುತ್ತೇವೆ. ಈ ಮಕ್ಕಳು, ಬುದ್ಧಿಮಾಂದ್ಯತೆ ಹೊಂದಿರುವ ಅವಶ್ಯಕತೆ ಇಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸ್ವಲೀನತೆ ಒಂದು ರೀತಿಯಾಗಿ ಕಂಡು ಬರುವುದಿಲ್ಲ. ಹಾಗೆಯೇ ಇದರ ತೀವ್ರತೆ ಅಥವಾ ಪ್ರಮಾಣವು ಕೂಡ ಏರುಪೇರಾಗುತ್ತದೆ.

ಇಂತಹ ಮಕ್ಕಳನ್ನು ಬೆಳೆಸುವಲ್ಲಿ ತಂದೆ, ತಾಯಿಯ ಜವಾಬ್ದಾರಿ ಬಹಳ. ಇದನ್ನು ಬಹಳವಾಗಿ 3 ವರ್ಷದ ಪ್ರಾಯದಲ್ಲಿ ಖಚಿತವಾಗಿ ಗುರುತಿಸಲಾಗುತ್ತದೆ. ಈ ರೀತಿ ಸೂಕ್ತ ಸಮಯದಲ್ಲಿ ಸ್ವಲೀನತೆ ದೃಢಪಡಿಸಿದಲ್ಲಿ ಮಕ್ಕಳಿಗೆ ಸರಿಯಾದ/ಸೂಕ್ತ ರೀತಿಯ ಚಿಕಿತ್ಸೆಗಳನ್ನು ನೀಡಬಹುದಾಗಿದೆ. ಈ ರೀತಿಯ ಮಕ್ಕಳಿಗೆ ಹಲವು ವಿಚಾರವಾಗಿ ಚಿಕಿತ್ಸೆಯ ಆವಶ್ಯಕತೆಯಿರುತ್ತದೆ. ಮಾತಿಗೆ ಸಂಬಂಧವಾಗಿ ಮಾತಿನ ಚಿಕಿತ್ಸೆ (Speech Therapy) ವರ್ತನೆ ಸಮಸ್ಯೆಯಿದ್ದಲ್ಲಿ ತಂದೆ, ತಾಯಿಗೆ ಆಪ್ತ ಸಮಾಲೋಚನೆ, ಕುಟುಂಬದವರೊಂದಿಗೆ (Family Therapy) ಔದ್ಯೋಗಿಕ ಚಿಕಿತ್ಸೆ (Occupasional Therapy) ಹಾಗೆಯೇ ಕೆಲವೊಮ್ಮೆ ಮಾತೇ ಮದ್ದು ಅವಶ್ಯಕತೆ ಇರಬಹುದು.

ಹೀಗೆ ತಂದೆ, ತಾಯಿ ಸೂಕ್ತ ಸಮಯದಲ್ಲಿ ಇಂತಹ ಮಗುವನ್ನು ಗುರುತಿಸಿ, ಚಿಕಿತ್ಸೆ ಕೊಡುತ್ತಾರೋ ಆಗ ಈ ಮಕ್ಕಳಲ್ಲಿರುವ ವಿಶೇಷವಾದ ಶಕ್ತಿಯನ್ನು ಕಂಡು ಹಿಡಿದು ತರಬೇತಿ ನೀಡಬಹುದಾಗಿದೆ. ಹೇಗೆ ಒಂದು ಮಗು ಆರೋಗ್ಯವಾಗಿದ್ದಾಗ ಶಾಲೆಯ ಅವಶ್ಯಕತೆ ಇರುತ್ತದೆಯೋ ಹಾಗೇ ಇಂತಹ ಮಕ್ಕಳಿಗೂ ಶಾಲೆಯ ಅವಶ್ಯಕತೆ ಹಾಗೂ ಪೋಷಕರ ಗಮನ ಅಗತ್ಯವಿದೆ. ಹೇಗೆ ದೈಹಿಕ ಕಾಯಿಲೆಗಳಿಗೆ ಒತ್ತು ಕೊಡುತ್ತೇವೆಯೋ ಹಾಗೆಯೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ.

ಈ ರೀತಿಯ ಸಮಸ್ಯೆಗಳಿಂದ ಯಾರಾದರೂ ಬಳಲುತ್ತಿದ್ದರೆ ಅವರನ್ನು ಸೈಕಿಯಾಟ್ರಿ ಅಥವಾ ಕ್ಲಿನಿಕಲ್‌ ಸೈಕಾಲಜಿ ವಿಭಾಗದಲ್ಲಿ ತೋರಿಸಿ ಸೂಕ್ತ ಚಿಕಿತ್ಸೆ ನೀಡುವುದು ಒಳಿತು.

ಡಾ| ಶ್ವೇತಾ ಟಿ.ಎಸ್‌. ಸಹ ಪ್ರಾಧ್ಯಾಪಕರು ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆ.ಎಂ.ಸಿ., ಮಣಿಪಾಲ

ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.