Bihar: “ರಾಮಚರಿತಮಾನಸ ವಿಷಕಾರಿ”: ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಿತ ಹೇಳಿಕೆ
Team Udayavani, Sep 16, 2023, 12:02 AM IST
ಪಾಟ್ನಾ: “ರಾಮಚರಿತಮಾನಸದಂತಹ ಪ್ರಾಚೀನ ಕೃತಿಗಳು ಪೊಟ್ಯಾಶಿಯಂ ಸೈನೈಡ್ನಷ್ಟೇ ವಿಷಕಾರಿ ಅಂಶವನ್ನು ಹೊಂದಿದೆ’ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯನ್ನು ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
“ಇದು ಕೇವಲ ನನ್ನ ದೃಷ್ಟಿಕೋನ ಮಾತ್ರವಷ್ಟೇ ಅಲ್ಲ. ಖ್ಯಾತ ಹಿಂದಿ ಸಾಹಿತಿ ನಾಗಾರ್ಜುನ ಮತ್ತು ಸಮಾಜವಾದಿ ಚಿಂತಕ ರಾಮ ಮನೋಹರ್ ಲೋಹಿಯಾ ಕೂಡ ರಾಮಚರಿತಮಾನಸ ಪ್ರತಿಗಾಮಿ ಚಿಂತನೆಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದು ಆರ್ಜೆಡಿ ನಾಯಕ ಹೇಳಿದ್ದಾರೆ. “ಈ ಹೇಳಿಕೆ ಮೂಲಕ ಚಂದ್ರಶೇಖರ್ ಅವರು, ಸಂತ ರವಿದಾಸ್ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಪ್ರಗತಿಪರ ವ್ಯಕ್ತಿಗಳನ್ನು ಹೊಂದಿರುವಂತಹ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ. ಈ ವಿಷಯದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಏಕೆ ಮೌನವಾಗಿದ್ದಾರೆ’ ಎಂದು ಬಿಜೆಪಿ ಪ್ರಶ್ನಿಸಿದೆ.