ರಣಜಿ ಫೈನಲ್‌; 230 ರನ್‌ ಮುನ್ನಡೆ ಗಳಿಸಿದ ಸೌರಾಷ್ಟ್ರ


Team Udayavani, Feb 19, 2023, 5:30 AM IST

ರಣಜಿ ಫೈನಲ್‌; 230 ರನ್‌ ಮುನ್ನಡೆ ಗಳಿಸಿದ ಸೌರಾಷ್ಟ್ರ

ಕೋಲ್ಕತಾ: ಬಂಗಾಲ ವಿರುದ್ಧದ ರಣಜಿ ಫೈನಲ್‌ನಲ್ಲಿ ಸೌರಾಷ್ಟ್ರ 230 ರನ್ನುಗಳ ದೊಡ್ಡ ಮೊತ್ತದ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.

ದ್ವಿತೀಯ ಇನ್ನಿಂಗ್ಸ್‌ ಆರಂಭಿ ಸಿರುವ ಬಂಗಾಲ 4 ವಿಕೆಟಿಗೆ 169 ರನ್‌ ಗಳಿಸಿ ತೃತೀಯ ದಿನದಾಟ ಮುಗಿಸಿದ್ದು, ಇನ್ನೂ 61 ರನ್‌ ಹಿನ್ನಡೆಯಲ್ಲಿದೆ.

ಬಂಗಾಲದ ದ್ವಿತೀಯ ಸರದಿಯ ಆರಂಭವೂ ಆಘಾತ ಕಾರಿಯಾಗಿತ್ತು. 47 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಉರುಳಿ ಹೋಯಿತು. ಆದರೆ ಅನುಸ್ತೂಪ್‌ ಮಜುಮಾರ್‌, ನಾಯಕ ಮನೋಜ್‌ ತಿವಾರಿ ಸೇರಿಕೊಂಡು ತಂಡವನ್ನು ಆಧರಿಸಿ ನಿಂತರು. ಈ ಜೋಡಿಯಿಂದ 4ನೇ ವಿಕೆಟಿಗೆ 99 ರನ್‌ ಹರಿದು ಬಂತು.

ಅನುಸ್ತೂಪ್‌ 61 ರನ್‌ ಬಾರಿಸಿದರು (101 ಎಸೆತ, 8 ಬೌಂಡರಿ). ಮನೋಜ್‌ ತಿವಾರಿ 57 ರನ್‌ (129 ಎಸೆತ, 9 ಬೌಂಡರಿ) ಮತ್ತು ಶಾಬಾಜ್‌ ಅಹ್ಮದ್‌ 13 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು ಬಂಗಾಲದ ಕೊನೆಯ ಬ್ಯಾಟಿಂಗ್‌ ಸ್ಪೆಷಲಿಸ್ಟ್‌ ಜೋಡಿಯಾಗಿದೆ.

ಸೌರಾಷ್ಟ್ರದ ನಾಯಕ ಜೈದೇವ್‌ ಉನಾದ್ಕತ್‌ ಮತ್ತು ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಉರುಳಿಸಿ ಬಂಗಾಲಕ್ಕೆ ಆಘಾತವಿಕ್ಕಿದರು.

ಸೌರಾಷ್ಟ್ರ ಕುಸಿತ
ಇದಕ್ಕೂ ಮುನ್ನ 5ಕ್ಕೆ 317 ರನ್‌ ಗಳಿಸಿ ದ್ವಿತೀಯ ದಿನದಾಟ ಮುಗಿಸಿದ್ದ ಸೌರಾಷ್ಟ್ರ, ಬಹಳ ಬೇಗನೇ ವಿಕೆಟ್‌ ಕಳೆದುಕೊಳ್ಳತೊಡಗಿತು. 81 ರನ್‌ ಮಾಡಿದ್ದ ಅರ್ಪಿತ್‌ ವಸವಾಡ ಅದೇ ಮೊತ್ತಕ್ಕೆ ವಾಪಸಾದರು. ಚಿರಾಗ್‌ ಜಾನಿ ಕೇವಲ 3 ರನ್‌ ಸೇರಿಸಿ ನಿರ್ಗಮಿಸಿದರು (60). ಪ್ರೇರಕ್‌ ಮಂಕಡ್‌ 33, ಕೊನೆಯ ಆಟಗಾರ ಧರ್ಮೇಂದ್ರಸಿನ್ಹ ಜಡೇಜ 29 ರನ್‌ ಮಾಡಿದ್ದರಿಂದ ಮೊತ್ತ 400ರ ಗಡಿ ದಾಟಿತು.

ಮುಕೇಶ್‌ ಕುಮಾರ್‌ 4, ಆಕಾಶ್‌ ದೀಪ್‌ ಮತ್ತು ಇಶಾನ್‌ ಪೊರೆಲ್‌ ತಲಾ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಬಂಗಾಲ-174 ಮತ್ತು 4 ವಿಕೆಟಿಗೆ 169 (ಮಜುಮಾªರ್‌ 61, ತಿವಾರಿ ಬ್ಯಾಟಿಂಗ್‌ 57, ಉನಾದ್ಕತ್‌ 47ಕ್ಕೆ 2, ಸಕಾರಿಯಾ 50ಕ್ಕೆ 2). ಸೌರಾಷ್ಟ್ರ-404 (ವಸವಾಡ 81, ಜಾನಿ 60, ಜಾಕ್ಸನ್‌ 59, ಹಾರ್ವಿಕ್‌ 50, ಮುಕೇಶ್‌ 111ಕ್ಕೆ 4, ಪೊರೆಲ್‌ 86ಕ್ಕೆ 3, ಆಕಾಶ್‌ ದೀಪ್‌ 111ಕ್ಕೆ 3).

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.