ಸರಕಾರದ ಮಾನದಂಡದಂತೆ ಬಸ್ ಓಡಿಸಲು ಸಿದ್ಧ
ಡಿಸಿ ಒಪ್ಪಿಗೆ ನಿರೀಕ್ಷೆಯಲ್ಲಿ ಕರಾವಳಿ ಬಸ್ಸು ಮಾಲಕರ ಸಂಘ
Team Udayavani, May 12, 2020, 6:38 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಉಡುಪಿ ಜಿಲ್ಲೆಯೊಳಗೆ ಬಸ್ಸು ಸಂಚಾರ ಆರಂಭಿಸಲು ಕರಾವಳಿ ಬಸ್ಸು ಮಾಲಕರ ಸಂಘದವರು ಸಿದ್ಧರಿದ್ದು, ಜಿಲ್ಲಾಧಿಕಾರಿಯವರ ಅನುಮತಿಗಾಗಿ ಕಾಯುತ್ತಿದ್ದಾರೆ. ಆದರೆ ಕೆನರಾ ಬಸ್ಸು ಮಾಲಕರ ಸಂಘ ಸಹಿತ ಇತರ ಬಸ್ಸಿನವರು ಈಗಾಗಲೇ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಮಾನದಂಡದಂತೆ
ಸಂಚರಿಸಲು ಸಿದ್ಧ
ಕರಾವಳಿ ಬಸ್ಸು ಮಾಲಕರ ಸಂಘವು ಸರಕಾರ ನಿಗದಿಪಡಿಸಿದ ಮಾನದಂಡದಂತೆ ಬಸ್ಸು ಓಡಿಸಲು ಸಂಘದ ಅಡಿಯಲ್ಲಿ ಬರುವ ಸುಮಾರು 80ರಷ್ಟು ಬಸ್ಸುಗಳು ಸಿದ್ಧವಿವೆ. ಈ ಬಗ್ಗೆ ಮೇ 3ರಂದು ಜಿಲ್ಲಾಧಿಕಾರಿಗಳು ಹಾಗೂ ಆರ್ಟಿಒ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು, ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಬಸ್ಸು ಸಂಚಾರವನ್ನು ಆರಂಭಿಸಿದರೆ ಚಾಲಕರು, ನಿರ್ವಾಹಕರು ಸಹಿತ ಗ್ಯಾರೇಜುಗಳಲ್ಲಿ ದುಡಿಯು ತ್ತಿರುವ ಕಾರ್ಮಿಕರಿಗೆ ಉದ್ಯೋಗಾ ವಕಾಶ ಲಭಿಸಲಿದೆ. ಯಾವುದೇ ನಷ್ಟ ಉಂಟಾಗಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಸೇವೆ ಒದ ಗಿಸುವುದೇ ಬಸ್ಸು ಮಾಲಕರ ಕರ್ತವ್ಯವಾಗಿದ್ದು, ಜಿಲ್ಲಾಡಳಿತದ ಎಲ್ಲ ಮಾನದಂಡಗಳನ್ನು ಪಾಲಿಸ ಲಾಗುವುದು ಎನ್ನುತ್ತಾರೆ ಕರಾವಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್.
ಇಂದಿನಿಂದ ರಜತಾದ್ರಿಗೆ ಕೆಎಸ್ಸಾರ್ಟಿಸಿ ಬಸ್
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಹಾಗೂ ಸಾರ್ವಜನಿಕ ರಿಗಾಗಿ ಇಂದಿನಿಂದ ನರ್ಮ್ ಬಸ್ಸು ತಂಗುದಾಣದಿಂದ ಬೆಳಗ್ಗೆ ಹಾಗೂ ಸಂಜೆ ಕಚೇರಿಗೆ ಹೋಗಿ ಬರುವ ವೇಳೆಗೆ ಕೆಲವು ಟ್ರಿಪ್ ಮಾಡಲಿದೆ. ಬಸ್ ಓಡಿಸಲು ಪ್ರಯಾಣಿಕರ ಸಂಖ್ಯೆಯೂ ಮುಖ್ಯ. ಸಮೂಹ ಸಾರಿಗೆಯನ್ನು ಆರಂಭಿಸಲು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮ್ಯಾನೇಜರ್ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಹಲವು ಖಾಸಗಿ ಬಸ್ ಮಾಲಕರು ಸಂಚಾರ ಆರಂಭಿಸಲು ಬೇಡಿಕೆಗಳನ್ನು ಮಂಡಿಸಿದ್ದಾರೆ. ಕರಾವಳಿ ಬಸ್ಸು ಮಾಲಕರ ಮನವಿ ಮೇರೆಗೆ ಆರ್ಟಿಒ ಅಧಿಕಾರಿಗಳೊಂ ದಿಗೆ ಚರ್ಚಿಸಿ ತೀರ್ಮಾನಿಸ ಲಾಗುವುದು.
-ಜಿ.ಜಗದೀಶ್
ಜಿಲ್ಲಾಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ