Manipur: ಮಾಮೂಲಿ ಟ್ರಕ್ಗಳಿಗೆ ಸೇನೆ ಮಾದರಿ ಬಣ್ಣ ಬಳಿದ ಬಂಡುಕೋರರು!
ಸಂಘರ್ಷ ಪೀಡಿತ ಮಣಿಪುರದಲ್ಲಿ ಅಚ್ಚರಿಯ ಬೆಳವಣಿಗೆ - ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅಸ್ಸಾಂ ರೈಫಲ್ಸ್ ಪತ್ರ
Team Udayavani, Sep 24, 2023, 10:14 PM IST
ಇಂಫಾಲ್: ಸಂಘರ್ಷ ಪೀಡಿತ ಮಣಿಪುರದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಅರೆಸೇನಾಪಡೆಯ ವಾಹನಗಳ ಮಾದರಿಯಲ್ಲೇ ಬಣ್ಣ ಬಳಿದಿರುವಂಥ ಹಲವಾರು ವಾಹನಗಳು ಪತ್ತೆಯಾಗಿವೆ. ಕಾಕ್ಚಿಂಗ್ ಜಿಲ್ಲೆಯಲ್ಲಿ ಇಂತಹ ಅನೇಕ ಟ್ರಕ್ಗಳು ಕಂಡುಬಂದಿದ್ದು, ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮಣಿಪುರ ಪೊಲೀಸರಿಗೆ ಅಸ್ಸಾಂ ರೈಫಲ್ಸ್ ಪತ್ರ ಬರೆದಿದೆ.
ಕಣಿವೆ ಮೂಲದ ಬಂಡುಕೋರರು ಗುಂಪುಗಳ ಸಹಾಯದಿಂದ ಕೆಲವು ದುಷ್ಕರ್ಮಿಗಳು ಮಾರುಕಟ್ಟೆಯಿಂದ ಹಲವು ಟ್ರಕ್ಗಳನ್ನು ಖರೀದಿಸಿ, ಅವುಗಳಿಗೆ ಸೇನೆಯ ಮಾದರಿಯ ಬಣ್ಣಗಳನ್ನು ಹಚ್ಚಿದ್ದಾರೆ. ಜತೆಗೆ ಅಸ್ಸಾಂ ರೈಫಲ್ಸ್ನ ಲಾಂಛನವನ್ನೂ ಅಳವಡಿಸಿದ್ದಾರೆ. ನಾಗರಿಕ ವಾಹನಗಳನ್ನು ಸೇನಾ ವಾಹನಗಳಾಗಿ ಕಾಣುವಂತೆ ಬದಲಾಯಿಸಿದ್ದಾರೆ. ಇವುಗಳನ್ನು ಬಳಸಿಕೊಂಡು ದೇಶವಿರೋಧಿ ಕೃತ್ಯಗಳನ್ನು ನಡೆಸುವ ಅಪಾಯವಿದೆ ಎಂದು ಚುರಾಚಾಂದ್ಪುರ ಎಸ್ಪಿಗೆ ಬರೆದ ಪತ್ರದಲ್ಲಿ ಅಸ್ಸಾಂ ರೈಫಲ್ಸ್ ಕಳವಳ ವ್ಯಕ್ತಪಡಿಸಿದೆ. ಜತೆಗೆ, ಕೂಡಲೇ ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಂಭಾವ್ಯ ವಿಧ್ವಂಸಕ ಕೃತ್ಯವನ್ನು ತಪ್ಪಿಸುವಂತೆಯೂ ಮನವಿ ಮಾಡಿದೆ.
ಸತತ 4 ತಿಂಗಳಿಂದಲೂ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ 175ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ