ಕೊಳಕು ಮಂಡಲ ವಿಷಕಾರಿ ಹಾವು ಹಿಡಿಯುವ ಮೊದಲ ಕಾರ್ಯಾಚರಣೆಯಲ್ಲಿ ವಿನಯ್ ಕಂದಕೂರು ಯಶಸ್ವಿ


Team Udayavani, Feb 3, 2023, 11:01 AM IST

3–kushtagi

ಕುಷ್ಟಗಿ: ಇಲ್ಲಿನ ವನ್ಯಜೀವಿ ಛಾಯಾಗ್ರಾಹಕ ವಿನಯ್ ಕಂದಕೂರ ಅವರು ಇದೇ ಮೊದಲ ಬಾರಿಗೆ ಕೊಳಕು ಮಂಡಲ (Russell’s viper) ವಿಷ ಜಾತಿಯ ಹಾವನ್ನು ಸುರಕ್ಷಿತ ಕಾರ್ಯಾಚರಣೆಯಲ್ಲಿ ಹಿಡಿದು ನಿರ್ಜನ ಪ್ರದೇಶಕ್ಕೆ ಬಿಟ್ಟು ಉರಗ ಪ್ರೇಮ ಮೆರೆದಿದ್ದಾರೆ. ಇವರ ಮೊದಲ ಹಾವು ಹಿಡಿಯುವ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇಲ್ಲಿನ ಬೃಂದಾವನ ಹೋಟಲ್ ಪಕ್ಕದ ಯಾಶೀನ್ ಕಾರು ಗ್ಯಾರೇಜ್ ಗೆ ತಮ್ಮ ಕಾರು ಸರ್ವಿಸ್ ಗೆ ಒಮ್ಮೆ ಬಂದಿದ್ದರು. ಕಾರಿನ ಮಿರರ್ ಗ್ಲಾಸ್ ನಲ್ಲಿ ಕೊಳಕು ಮಂಡಲ ಹಾವು ಬಿಲ ಸೇರುವುದನ್ನು ಕಂಡಿದ್ದರು. ಗ್ಯಾರೇಜ್ ಮಾಲೀಕನಿಗೆ ಇನ್ನೊಮ್ಮೆ ಹಾವು ಕಂಡಲ್ಲಿ ನನಗೆ ತಿಳಿಸು ಯಾವುದೇ ಕಾರಣಕ್ಕೂ ಕೊಲ್ಲಬೇಡ, ಅದಕ್ಕೆ ತೊಂದರೆ ಕೊಡಬೇಡ ಎಂದು ಸಲಹೆ ನೀಡಿದ್ದರು. ಇದಕ್ಕೆ ಮರು ಮಾತಿಲ್ಲದೆ ಒಪ್ಪಿದ್ದ ಕಾರು ಮಾಲೀಕನಿಗೆ ಗುರುವಾರ ಈ ಹಾವು ಇದ್ದಕ್ಕಿದ್ದಂತೆ ದರ್ಶನವಾಗಿದೆ.

ತಡ ಮಾಡದೇ ವಿನಯ್ ಕಂದಕೂರ್ ಗೆ ಮಾಹಿತಿ ನೀಡಿದ್ದರು.

ಕೆಲಸದ ಒತ್ತಡವಿದ್ದರೂ ಕೂಡಾ ಕೊಳಕು ಮಂಡಲ ಹಾವಿನ ಸಂರಕ್ಷಣೆಗೆ ಸುರಕ್ಷಿತ ಸಾಧನಗಳೊಂದಿಗೆ ಬುಸಗುಡುವ ಹಾವನ್ನು ತೊಂದರೆ ನೀಡದೇ ಸಲೀಸಾಗಿ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ನಂತರ ಪೆಟ್ಟಿಗೆಯನ್ನು ಚೀಲದಲ್ಲಿ ತುಂಬಿಸಿ ಹೊಸಪೇಟೆ ರಸ್ತೆಯ ನಿರ್ಜನ ರಸ್ತೆಯ ಬಳಿ ಬಿಟ್ಟು ಬಂದಿದ್ದಾರೆ. ತೀರ ವಿಷಕಾರಿ ಹಾವನ್ನು ಯಾವುದೇ ಅಂಜಿಕೆ ಇಲ್ಲದೇ ಅಳಕು ಇಲ್ಲದೇ ಮೊದಲ ಪ್ರಯತ್ನದಲ್ಲಿ ವಿನಯ್ ಕಂದಕೂರು ಯಶಸ್ವಿಯಾಗಿದ್ದಾರೆ.

ಉರಗ ರಕ್ಷಕ ಯೂಟ್ಯೂಬರ್‌ ಪ್ರೇರಣೆ

ವಿನಯ್ ಕಂದಕೂರು ಅವರಿಗೆ ಸುಜಿತ್ ಶೆಟ್ಟರ್ ತೋಟದಲ್ಲಿ ಹಸಿರು ಹಾವು ಹಿಡಿಯಲು ಯತ್ನಿಸಿದಾಗ ಮಿಸ್ ಆಗಿತ್ತು. ಕೊಳಕು ಮಂಡಲ ಹಾವು ಹಿಡಿಯುವ ಕಾರ್ಯಾಚರಣೆ ಯಶಸ್ವಿಗೆ ಅವರು ಸಂಭ್ರಮಿಸಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿರುವುದಕ್ಕೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

ಯಾಸೀನ್ ಗ್ಯಾರೇಜ್ ನಲ್ಲಿ ಹಾವು ಠಿಕಾಣಿ ಹಾಕಿರುವುದು ಗಮನಿಸಿದರೆ ಹಾವು ಮರಿ ಹಾಕಿರುವ ಸಂಭವ ಇದೆ. ಮರಿ ಹಾವುಗಳು ಕಂಡರೂ ನನಗೆ ತಿಳಿಸಲು ಹೇಳಿರುವುದಾಗಿ ವಿನಯ್ ಕಂದಕೂರು ತಿಳಿಸಿದ್ದಾರೆ. ವಿನಯ್ ಕಂದಕೂರ ಅವರಿಗೆ ಅವರಿಗೆ ಸ್ನೇಕ್ ಶ್ಯಾಮ್, ಹೊಸಪೇಟೆಯ ಸ್ನೇಹಿತ ಅಸ್ಲಾಂ ಸೇರಿದಂತೆ ಸುರಕ್ಷಿತ ಹಾವು ಹಿಡಿಯುವ ಯೂಟ್ಯೂಬರ್‌ ಗಳಿಂದ ಸುರಕ್ಷಿತ ಹಾವು ಹಿಡಿಯುವುದು ನೋಡಿದ್ದೆ. ಇವತ್ತು ಪ್ರಾಯೋಗೀಕವಾಗಿ ಯಶಸ್ವಿಯಾಗಿದ್ದೇನೆ ಎಂದು ಉದಯವಾಣಿ ವೆಬ್ ನ್ಯೂಸ್ ಪ್ರತಿನಿಧಿಗೆ ಮಾಹಿತಿ ನೀಡಿದರು.‌

ಟಾಪ್ ನ್ಯೂಸ್

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು ಎಚ್ಚರವಹಿಸಲು ಅರಣ್ಯ ಅಧಿಕಾರಿಗಳ ಸೂಚನೆ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ: ಓರ್ವನ ಸೆರೆ, ಇನ್ನೋರ್ವ ಪರಾರಿ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2–gangavathi

ಮೂರು ತಾಸಿಗೂ ಹೆಚ್ಚು ಬೈಕ್ ನೊಳಗೆ ಹೊಕ್ಕ ಹಾವು; ಬೈಕ್ ಮಾಲೀಕರ ಪರದಾಟ

1-sada-das-d

ಮದರಸಾಗಳನ್ನು ಮುಚ್ಚಬೇಕೆನ್ನುವ ಅಸ್ಸಾಂ ಸಿಎಂ ಹೇಳಿಕೆ ಖಂಡಿಸಿದ ಗಾಲಿ ರೆಡ್ಡಿ

5–gangavathi

ಕೇಸರಟ್ಟಿ ಹಣವಾಳ ರಸ್ತೆ ದುರಸ್ಥಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ತಲೆಕೆಳಗಾಗಿದ ಸಿದ್ದು ಲೆಕ್ಕಾಚಾರ: ಸಂಗಣ್ಣ ಕರಡಿ

ತಲೆಕೆಳಗಾಗಿದ ಸಿದ್ದು ಲೆಕ್ಕಾಚಾರ: ಸಂಗಣ್ಣ ಕರಡಿ

ಸಿದ್ದುಗೆ ಕೋಲಾರ ಕ್ಷೇತ್ರ ಕೊನೇ ಆಯ್ಕೆ: ಸಚಿವ ಹಾಲಪ್ಪ ಆಚಾರ್‌

ಸಿದ್ದುಗೆ ಕೋಲಾರ ಕ್ಷೇತ್ರ ಕೊನೇ ಆಯ್ಕೆ: ಸಚಿವ ಹಾಲಪ್ಪ ಆಚಾರ್‌

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.