
ಸಿಕ್ಕಿಮೀಸ್ ನೇಪಾಲಿಗರು ವಲಸಿಗರಲ್ಲ: ಸುಪ್ರೀಂ ಕೋರ್ಟ್
Team Udayavani, Feb 9, 2023, 6:30 AM IST

ಹೊಸದಿಲ್ಲಿ: ಸಿಕ್ಕಿಂನಲ್ಲಿ ಇರುವ ನೇಪಾಲದವರನ್ನು (ಸಿಕ್ಕಿಮೀಸ್-ನೇಪಾಲಿಗರು) “ವಿದೇಶಿ ಮೂಲದ ವ್ಯಕ್ತಿಗಳು’ ಎಂದು ಜ.13ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಬದಲಾವಣೆ ಮಾಡಿದೆ.
ಜತೆಗೆ ಅವರು ವಲಸಿಗರಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾ|ಎಂ.ಆರ್ಶಾ ಹಾಗೂ ನ್ಯಾ|ಬಿ.ವಿ.ನಾಗರತ್ನ ಅವರ ನ್ಯಾಯಪೀಠ ಈ ಬಗ್ಗೆ ವಿಚಾರಣೆ ನಡೆಸಿತು. ಕೇಂದ್ರ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಆದೇಶವನ್ನು ಸರಿಪಡಿಸಬೇಕು’ ಎಂದು ಕೋರಿಕೊಂಡರು.
ಸಿಕ್ಕಿಂನಲ್ಲಿ ಇರುವ ಹಳೆಯ ವಸಾಹತುದಾರರಿಗೆ ತೆರಿಗೆ ವಿನಾಯತಿ ವಿಸ್ತರಿಸುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧಿಸಿದಂತೆ ಜ.13ರಂದು ತೀರ್ಪು ನೀಡಿತ್ತು. ಈ ವೇಳೆ ಸಿಕ್ಕಿಮೀಸ್ ನೇಪಾಲಿಗರನ್ನು ವಲಸಿಗರು ಎಂದು ಉಲ್ಲೇಖೀಸಿತ್ತು. ಈ ಬಳಿಕ ಸಿಕ್ಕಿಂನಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

ಅಗ್ನಿ ಆಕಸ್ಮಿಕ: ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿ

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್ ಅಬ್ಬರ

ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’