Crime: ಎಂಡಿಎಂಎ, ಗಾಂಜಾ ಸಹಿತ ಸೆರೆ
Team Udayavani, Sep 8, 2023, 11:25 PM IST
ಕಾಸರಗೋಡು: ಅಣಂಗೂರಿನಿಂದ 21 ಗ್ರಾಂ ಎಂಡಿಎಂಎ ಮತ್ತು 7.374 ಗ್ರಾಂ ಗಾಂಜಾ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್, ಈ ಸಂಬಂಧ ಅಣಂಗೂರು ಸುಲ್ತಾನ್ ನಗರದ ಅಬ್ದುಲ್ ಖಾದರ್ (26)ನನ್ನು ಬಂಧಿಸಿದೆ.
ರೈಲು ಢಿಕ್ಕಿ ಹೊಡೆದು ಮಹಿಳೆ ಸಾವು
ಕಾಸರಗೋಡು: ಚಿತ್ತಾರಿ ಶಾಲೆ ಸಮೀಪ ರೈಲು ಢಿಕ್ಕಿ ಹೊಡೆದು ಚಿತ್ತಾರಿ ನಾಯಕರ ವಳಪ್ಪಿಲ್ ಪ್ರಶಾಂತ್ ಅವರ ಪತ್ನಿ ವಿದ್ಯಾಕುಮಾರಿ (36) ಮೃತಪಟ್ಟಿದ್ದಾರೆ.
ಅಡಿಕೆ ಕಳವು: ಇನ್ನೋರ್ವನ ಬಂಧನ
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಂಪೌಂಡ್ನ ರೆಹ್ಮಾನ್ ಸಹೀಂ ಅವರ ಮನೆಯಿಂದ ಅಡಿಕೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಡಾಜೆ ಕಾಜೂರು ನಿವಾಸಿ ಅಬ್ದುಲ್ ನೌಶಾದ್(20)ನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಮೂವರನ್ನು ಈವರೆಗೆ ಬಂಧಿಸಲಾಗಿದೆ.
ಸಾಮಗ್ರಿ ಕಳವು: ಮೂವರ ಬಂಧನ
ಬದಿಯಡ್ಕ: ಕಂದಲ್-ಮುಂಡಿತ್ತಡ್ಕ ರಸ್ತೆ ನಿರ್ಮಾಣಕ್ಕಾಗಿ ತಂದಿರಿಸಿದ್ದ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಪಾಲಿಪೊನದ ನಿಸಾದ್(48), ಮೇಲ್ಪರಂಬ ಕಳನಾಡಿನ ಇರ್ಫಾನ್(36) ಮತ್ತು ಚೆರ್ಕಳ ಕೆಕೆ ಪುರದ ಸುಂದರ (48) ನನ್ನು ಪೊಲೀಸರು ಬಂಧಿಸಿದ್ದಾರೆ.