ನಾವು ಮರೆತ ಆಟ ಲಗೋರಿ, ಆಡೋಕ್ಕೆ ಮಜಾರೀ…


Team Udayavani, Jul 14, 2020, 2:39 PM IST

ನಾವು ಮರೆತ ಆಟ ಲಗೋರಿ, ಆಡೋಕ್ಕೆ ಮಜಾರೀ…

ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಆಟಗಳಲ್ಲಿ ಲಗೋರಿಯೂ ಒಂದು. 4 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಹುಡುಗರು ಈ ಆಟವನ್ನು ಆಡಬಹುದು. ಈ ಆಟಕ್ಕೆ ಸಮಯದ ಮಿತಿ ಇಲ್ಲ. ಎಷ್ಟು ಹೊತ್ತು ಬೇಕಾದರೂ ಆಡಬಹುದು. ಕರ್ನಾಟಕದಲ್ಲಿ ಲಗೋರಿ, ಡಿಕೋರಿ ಎಂಬುದಾಗಿ, ಆಂಧ್ರಪ್ರದೇಶದಲ್ಲಿ ಲಿಂಗೋಚ್‌, ತಮಿಳುನಾಡಿನಲ್ಲಿ ಅಡಿಕ ಆಟಂ ಮತ್ತು ಮಹಾರಾಷ್ಟ್ರದಲ್ಲಿ ಲಿಂಗೋರಚ್ಯ ಎಂದು ಈ ಆಟಕ್ಕೆ ಹೆಸರಿದೆ.

ಆಟದ ಸಾಮಗ್ರಿಗಳು: ಈ ಆಟವನ್ನು ಆಡಲು ಬೇಕಾಗಿರುವುದು ಒಂದು ಸಮತಟ್ಟಾದ ಮೈದಾನ ಹಾಗೂ 7 ಅಥವಾ 5 ಲಗೋರಿ ಕಾಯಿಗಳು. ಈಗ ಲಗೋರಿ ಕಾಯಿಗಳು ಕಣ್ಮರೆಯಾಗಿದ್ದು, ಅದರ ಬದಲು 7 ಸಮತಟ್ಟಾದ ಚಪ್ಪಟೆ ಆಕಾರದ ಕಲ್ಲುಗಳನ್ನು ಬಳಸಲಾಗುತ್ತದೆ. ಲಗೋರಿಯನ್ನು ಉರುಳಿಸಲು ಒಂಡು ರಬ್ಬರ್‌ ಚೆಂಡು ಬೇಕು.

ಆಡುವ ವಿಧಾನ
ಎರಡು ತಂಡಗಳನ್ನು ಹುಡುಗರು ರಚಿಸಿಕೊಳ್ಳುತ್ತಾರೆ. ಪ್ರತಿ ತಂಡಕ್ಕೂ ಒಬ್ಬ ನಾಯಕನಿರುತ್ತಾರೆ. ತಂಡದ ನಾಯಕರಿಬ್ಬರು ಸೇರಿ ಟಾಸ್‌ ಹಾಕಿ, ಯಾರು ಮೊದಲು ಲಗೋರಿ ಉರುಳಿಸಬಹುದು ಎಂದು ನಿರ್ಧರಿಸು ತ್ತಾರೆ. ನಂತರ ನೆಲದಲ್ಲಿ ವೃತ್ತಾಕಾರದ ಗೆರೆ ಕೊರೆದು ಅದರಲ್ಲಿ 7 ಲಗೋರಿ ಕಾಯಿ ಅಥವಾ ಕಲ್ಲಿನ ಸಣ್ಣ ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಜೋಡಿಸುತ್ತಾರೆ. ಹೀಗೆ ಜೋಡಿಸಿದ ಕಲ್ಲಿನಿಂದ ಸ್ವಲ್ಪ ದೂರದಲ್ಲಿ ಒಂದು ಗೆರೆಯನ್ನು ಎಳೆಯಬೇಕು. ಆ ಸ್ಥಳದಲ್ಲಿ ನಿಂತು ಚೆಂಡಿನಿಂದ ಲಗೋರಿ
ಕಾಯಿಗಳಿಗೆ ಹೊಡೆಯಬೇಕು.

ಪ್ರತಿಯೊಬ್ಬ ಆಟಗಾರನಿಗೂ ಲಗೋರಿ ಉರುಳಿಸಲು 3 ಅವಕಾಶವಿರುತ್ತದೆ. ಈ 3 ಎಸೆತದಲ್ಲಿ ಲಗೋರಿ ಉರುಳಿಸಲು ವಿಫ‌ಲವಾದರೆ, ಅದೇ ತಂಡದ ಮತ್ತೂಬ್ಬನಿಗೆ ಆಡುವ ಅವಕಾಶ. ಲಗೋರಿ ಬೀಳಿಸಲು ಚೆಂಡನ್ನು ಎಸೆದಾಗ ಆ ಚೆಂಡು ಲಗೋರಿ ಉರುಳಿಸದೇ ನೆಲದಿಂದ ಪುಟಿದಾಗ, ಎದುರಾಳಿ ತಂಡದವರು ಅದನ್ನು ಕ್ಯಾಚ್‌ ಹಿಡಿದರೆ, ಆಗ ಚೆಂಡನ್ನು ಎಸೆದ ಆಟಗಾರ ಆಟದಿಂದ ಹೊರಕ್ಕೆ. ಆಗಲೂ ಅದೇ ತಂಡದ ಮುಂದಿನವನಿಗೆ ಆಡುವ ಅವಕಾಶ ಸಿಗುತ್ತದೆ. ಎದುರಾಳಿ ತಂಡದವರು ಎಸೆದ ಚೆಂಡನ್ನು ಬೆನ್ನಿಗೆ ತಾಗಿಸಿಕೊಳ್ಳದೇ ಲಗೋರಿಗಳನ್ನು ಮತ್ತೆ ಒಂದರ ಮೋಲೊಂದರಂತೆ ಜೋಡಿಸಿದರೆ, ಅವರಿಗೆ 1 ಅಂಕ. ಹೀಗೆ ಆಟ ಮುಂದುವರಿಯುತ್ತದೆ. ದೈಹಿಕ ವ್ಯಾಯಾಮ ಹಾಗೂ ಏಕಾಗ್ರತೆ ಹೆಚ್ಚಿಸಲು ಸಹಾಯವಾಗಿದ್ದ ಈ ಕ್ರೀಡೆ, ಇತ್ತೀಚೆಗೆ
ಮರೆಯಾಗುತ್ತಿದೆ.

ಪ್ರಕಾಶ್‌.ಕೆ. ನಾಡಿಗ್‌, ಶಿವಮೊಗ್ಗ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.