
Shahapura: ಕಾಂಗ್ರೆಸ್ ಮುಖಂಡ ಜೆಡಿಎಸ್ ಸೇರ್ಪಡೆ
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಹಾಜರಿದ್ದ ಮುಖಂಡ ಜೆಡಿಎಸ್ ಸೇರ್ಪಡೆ
Team Udayavani, Apr 20, 2023, 9:42 AM IST

ಶಹಾಪುರ: ಮೊನ್ನೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಮಂತ್ರಿ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವಾಗ ನಾಲ್ವರು ಮುಖಂಡರಲ್ಲಿ ಒಬ್ಬರಾಗಿ ಹಾಜರಾಗಿದ್ದ ಮುಸ್ಲಿಂ ಸಮುದಾಯದ ಮುಖಂಡ ಇಬ್ರಾಹಿಂ ಸಾಬ ಶಿರವಾಳ ಬುಧವಾರ ರಾತ್ರಿ ಜೆಡಿಎಸ್ ಸೇರ್ಪಡೆಯಾಗಿರುವದು ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ.
ಮೂಲತಃ ಶಿರವಾಳದವರಾದ ಇಬ್ರಾಹಿಂಸಾಬ ಶಿರವಾಳ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳರ ಆತ್ಮೀಯರಾಗಿದ್ದು, ಗುರು ಪಾಟೀಲರ ತಂದೆ ಅವರ ಕಾಲದಿಂದಲೂ ಅವರೊಂದಿಗೆ ಇದ್ದವರು, ಆದರೆ ಕಳೆದ ಚುನಾವಣೆಯಲ್ಲಿ ಗುರು ಪಾಟೀಲರು ಬಿಜೆಪಿ ಯಿಂದ ಸ್ಪರ್ಧೆ ಮಾಡಿದಾಗ, ಕೆಲ ವಿಚಾರಗಳಿಗೆ ಹೊಂದಾಣಿಕೆ ಆಗದ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಹಲವಾರು ಚುನಾವಣೆಯಲ್ಲಿ ಶಿರವಾಳ ಮನೆತನದ ಪರವಾಗಿ ಇಬ್ರಾಹಿಂಸಾಬ ಕೆಲಸ ಮಾಡಿದವರಾಗಿದ್ದರು. ಬುಧವಾರ ಇಬ್ರಾಹಿಂಸಾಬ ಅವರು ಗುರು ಪಾಟೀಲ್ ನೇತೃತ್ವದಲ್ಲಿ ಮತ್ತೆ ವಾಪಸ್ ಆಗಿದ್ದು, ಚುನಾವಣೆ ನಗರದಲ್ಲಿ ರಂಗೇರುತ್ತಿದೆ ಎನ್ನಬಹುದು.
ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಲಾಲನಸಾಬ ಖುರೇಶಿ, ಶಂಕರಗೌಡ ಶಿರವಾಳ, ಮಲ್ಲಿಕಾರ್ಜುನ ಗಂಧದಮಠ, ಮೋನಪ್ಪ ಕಿಣ್ಣಿ, ನುಮಾನ್ ಖಾಜಿ, ಬಾಬಾ ಸೇರಿದಂತೆ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadagiri: ಜಿಲ್ಲಾಧಿಕಾರಿಯಿಂದ ಸಾರ್ವಜನಿಕ ಆರೋಗ್ಯ ತಪಾಸಣೆಗೆ ಚಾಲನೆ

Yadagiri; ಟೆಂಡರ್ ವಿಳಂಬ ಸಲ್ಲದು: ಅಧಿಕಾರಿಗಳಿಗೆ ಸಚಿವ ದರ್ಶನಾಪುರ ಎಚ್ಚರಿಕೆ

Yadgir ; 150 ಕೆಜಿ ಶ್ರೀಗಂಧ ಸಹಿತ ಆರೋಪಿ ಬಂಧನ: ಓರ್ವ ಆರೋಪಿ ಪರಾರಿ

ISIS ಉಗ್ರನಿಗೆ ಯಾದಗಿರಿ ನಂಟು..? ಉಗ್ರ ಸಂಘಟನೆಯೊಂದಿಗೆ ಶಹಾಪುರ ಯುವಕನ ಸಂಪರ್ಕ

Brutal; 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಂದ ಮಲತಾಯಿ!
MUST WATCH
ಹೊಸ ಸೇರ್ಪಡೆ

Thothapuri 2; ಇದು ಎಲ್ಲರಿಗೂ ರುಚಿಸುವ ತೋತಾಪುರಿ: ನಟ ಜಗ್ಗೇಶ್ ಮಾತು

Kerala: ಯೋಧನನ್ನು ಅಪಹರಿಸಿ ಹಲ್ಲೆ ನಡೆಸಿದ ಪಿಎಫ್ ಐ ಕಾರ್ಯಕರ್ತರು…ವಿಡಿಯೋ ವೈರಲ್

Channapatna: ಕಳೆದ ವರ್ಷ ಅತಿವೃಷ್ಟಿ; ಈ ಬಾರಿ ಅನಾವೃಷ್ಟಿ!

Cauvery issue; ಮೈಸೂರಿನಲ್ಲಿ ಜನತಾ ದರ್ಶನಕ್ಕೂ ತಟ್ಟಿದ ಕಾವೇರಿ ಹೋರಾಟದ ಬಿಸಿ!

Asian Games: ಸ್ವರ್ಣ ಗೆದ್ದ ಭಾರತದ ವನಿತಾ ಕ್ರಿಕೆಟ್ ತಂಡ; ಲಂಕಾಗೆ ರಜತ ಗೌರವ