ಸಿದ್ದರಾಮಯ್ಯ-ಜಿಟಿಡಿ ಸಂಧಾನ
Team Udayavani, Apr 5, 2019, 6:01 AM IST
ಬೆಂಗಳೂರು: ಮಂಡ್ಯದಲ್ಲಿ ದೋಸ್ತಿಗಳ ನಡುವಿನ ವಿರಸ ಮುಂದುವರಿದಿದ್ದರೆ, ಮೈಸೂರಿನಲ್ಲಿ ಜೆಡಿಎಸ್ ನಾಯಕ, ಸಚಿವ ಜಿ.ಟಿ.ದೇವೇಗೌಡರಮನವೊಲಿಕೆಯಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಸಚಿವ ಜಮೀರ್ ಅಹಮದ್ ಮತ್ತು ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಅವರು ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ನಡುವೆ ಸಮನ್ವಯ ಮೂಡಿಸಿದ್ದಾರೆ.
ಬಾಲಕೃಷ್ಣ ನಿವಾಸದಲ್ಲಿ ಬುಧವಾರ ರಾತ್ರಿ ನಡೆದ ಮಾತುಕತೆಯಲ್ಲಿ ಈ ಇಬ್ಬರೂ ನಾಯಕರು ಪಾಲ್ಗೊಂಡು, ಊಟ ಮಾಡಿ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದಾರೆ. ಹೀಗಾಗಿ ಏ.7ರಿಂದಲೇ ಇಬ್ಬರೂ ಪ್ರಚಾರ ನಡೆಸಲಿದ್ದಾರೆ. ಇನ್ನು, ಮಂಡ್ಯದಲ್ಲೂ ಕೈ ನಾಯಕರ ಮನವೊಲಿಕೆ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಶನಿವಾರ ಮಂಡ್ಯ ಕಾಂಗ್ರೆಸ್ ನಾಯಕರ ಜತೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಲಿದ್ದಾರೆ.