ಶಿರಸಿ: ಸಹಸ್ರಲಿಂಗಕ್ಕೆ, ಬನವಾಸಿಗೆ ಭಕ್ತ ಸಾಗರ
Team Udayavani, Feb 18, 2023, 2:11 PM IST
ಶಿರಸಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸಹಸ್ರಲಿಂಗ ಹಾಗೂ ಬನವಾಸಿ ಮಧುಕೇಶ್ವರ ದೇವಲಾಯಕ್ಕೆ ಭಕ್ತ ಸಾಗರವೇ ಮಹಾ ಶಿವರಾತ್ರಿಯಂದು ಹರಿದು ಬಂತು.
ಶನಿವಾರ ತಾಲೂಕಿನ ಹಲವಡೆ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡಿ ಚಿಲಗಿ ಚಂಡೆ,ಪತ್ರೆಯ ಜೊತೆ ರುದ್ರಚನೆಗಳನ್ನು ಹೇಳಿ ಪೂಜಿಸಿದ ಭಕ್ತರು, ಮನೆ ಮನೆಗಳಲ್ಲಿ ಪೂಜಿಸಿದರು. ಉಪವಾಸ ಕೂಡ ಆಚರಿಸಿದರು.
ಸಹಸ್ರಲಿಂಗಕ್ಕೆ ವಿಶೇಷ ವಾಹನ ಸಾರಿಗೆಯನ್ನು ಮಾಡಲಾಗಿತ್ತು. ಹಲವಡೆ ಅರವಟ್ಟಿಗೆ ಕೂಡ ಇಡಲಾಗಿತ್ತು. ಸಹಸ್ರಲಿಂಗದಲ್ಲಿ ಭೈರುಂಬೆ ಪಂಚಾಯ್ತಿ ಅಧ್ಯಕ್ಷ ರಾಘು ನಾಯ್ಕ ನೇತೃತ್ವದಲ್ಲಿ ಸಿದ್ದತೆ ಜೊತೆ ಸಿಸಿಟಿವಿ ಕೂಡ ಅಳವಡಿಸಲಾಗಿತ್ತು.
ದೂರದ ಉತ್ತರ ಕರ್ನಾಟಕ ಭಾಗದಿಂದಲೂ ಆಗಮಿಸಿದ ಭಜಕರು ಶಾಲ್ಮಲಾ ನದಿಯೊಳಗಿನ ಶಿವ ಲಿಂಗಗಳಿಗೆ ಪೂಜೆ ನಡೆಸಿದರು. ಬನವಾಸಿಯಲ್ಲಿ ಮಧು ಬಣ್ಣದ ಮಧುಕೇಶ್ವರನಿಗೆ ಕೂಡ ವಿಶೇಷ ಪೂಜೆ ಸಲ್ಲಿಸಿದರು. ಸೋಮಸಾಗರ, ಲಿಂಗದಕೋಣ, ಈಶ್ವರ ದೇವಸ್ಥಾನ, ದೊಡ್ನಳ್ಳಿ ದೇವಾಲಯ ಸೇರಿದಂತೆ ಹಲವಡೆ ವಿಶೇಷ ಪೂಜೆಗಳು ನಡೆದವು. ಭಕ್ತರು ನೀರನ್ನು ಹಾಕಿಯೂ ಧನ್ಯತೆ ಅನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ