BSNL, MTNLಗೆ ಸಿಬಂದಿ ಕೊರತೆ : ವಿಆರ್ಎಸ್ ಪಡೆದವರ ಮರು ನೇಮಕಕ್ಕೆ ಕೋರಿಕೆ
Team Udayavani, Jun 18, 2021, 7:40 AM IST
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ದೂರಸಂಪರ್ಕ ಕಂಪೆನಿಗಳಾಗಿರುವ ಭಾರತ್ ಸಂಚಾರ್ ನಿಗಮ ನಿಯಮಿತ, ಮಹಾನಗರ ಟೆಲಿಫೋನ್ ನಿಗಮ ನಿಯಮಿತಗಳಿಗೆ ಈಗ ಸಿಬಂದಿ ಕೊರತೆ ಎದುರಾಗಿದೆ. ಸರಿ ಸುಮಾರು ಒಂದೂವರೆ ವರ್ಷಗಳ ಹಿಂದೆ 2 ಸಂಸ್ಥೆಗಳಿಂದ 93 ಸಾವಿರ ಮಂದಿ ವಿವಿಧ ದರ್ಜೆಯ ಅಧಿಕಾರಿಗಳು, ಸಿಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಸದ್ಯ 2 ಸಂಸ್ಥೆಗಳಿಗೆ ಸಿಬಂದಿ ಕೊರತೆ ಎದುರಾಗಿದೆ. ಅನ್ನು ನಿವಾರಿಸಲು ನಿವೃತ್ತಿಯಾಗಿರುವವರನ್ನು ನೇಮಿಸುವ ಬಗ್ಗೆ ದೂರಸಂಪರ್ಕ ಸಚಿವಾಲಯಕ್ಕೆ ಲಿಖೀತ ಮನವಿ ಸಲ್ಲಿಸಲಾಗಿದೆ. ನಿವೃತ್ತಿಯಾದವರನ್ನು “ಸಲಹೆಗಾರರು’ ಎಂದು ಮರು ನೇಮಕಗೊಳಿಸಲು ಅವಕಾಶ ಇದೆಯೇ ಎಂದು ಕೋರಿಕೆ ಸಲ್ಲಿಸಲಾಗಿದೆ.
ಅದನ್ನು ಪರಿಶೀಲಿಸಿರುವ ಸಚಿವಾಲಯ ಸದ್ಯಕ್ಕೆ ಯಾವುದೇ ನೇಮಕ ಮಾಡಿಕೊಳ್ಳುವುದು ಬೇಡ. ಕೋರಿಕೆಯಲ್ಲಿ ಉಲ್ಲೇಖೀಸಿರುವಂತೆ ನೇಮಕ ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಂಡಿಯನ್
ಎಕ್ಸ್ಪ್ರೆಸ್’ ವರದಿ ಮಾಡಿದೆ.
2 ಸಂಸ್ಥೆಗಳನ್ನು ಪುನಃಶ್ಚೇತನ ಗೊಳಿಸುವ ನಿಟ್ಟಿನಲ್ಲಿ 2029ರಲ್ಲಿ ಕೇಂದ್ರ ಸರಕಾರ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಗೆ ಅನುಮೋದನೆ ನೀಡಿತ್ತು. ಅದರ ಅನುಷ್ಠಾನದ ಮೊದಲು ಬಿಎಸ್ಎನ್ಎಲ್ನಲ್ಲಿ 1,53,000, ಎಂಟಿಎನ್ಎಲ್ನಲ್ಲಿ 14,400 ಮಂದಿ ಉದ್ಯೋಗಿಗಳಿದ್ದರು. 2 ಸಂಸ್ಥೆಗಳಲ್ಲಿರುವ 55-60 ವಯೋಮಿತಿಯವರು ಸ್ವಯಂ ನಿವೃತ್ತಿ ಯೋಜನೆ ಆಯ್ಕೆ ಮಾಡಿದ್ದರು. 2020-21ರ ಬಜೆಟ್ನಲ್ಲಿ ವಿಆರ್ಎಸ್ಗಾಗಿ 37,278 ಕೋಟಿ ರೂ. ಮೀಸಲಾಗಿ ಇರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದೊಂದು ಆಗುವವರೆಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ…; ಪ್ರಶಾಂತ್ ಕಿಶೋರ್
ಪರೀಕ್ಷೆ ಬರೆದು ಹೋಗುವಾಗ ಅಪಘಾತ: ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಉಳಿದ ಪರೀಕ್ಷೆ ಬರೆದಳು.!
ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸರ್ಕಾರಿ ಅಧಿಕಾರಿ ಮೃತ್ಯು
ಆನೆ ದಾಳಿ: 3 ವರ್ಷಗಳಲ್ಲಿ 1,581 ಮಂದಿ ಸಾವು
MUST WATCH
ಹೊಸ ಸೇರ್ಪಡೆ
ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್ ಚಿತ್ತ!
ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !
ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ
ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!
ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ