ನಾಯಿಗೆ ಕಲ್ಲು: ಉಡುಪಿಯಲ್ಲಿ ಎರಡು ಕುಟುಂಬಗಳ ನಡುವೆ ತಾರಕಕ್ಕೇರಿದ ಜಗಳ
Team Udayavani, Dec 30, 2021, 11:44 AM IST
ಉಡುಪಿ: ನಾಯಿಗೆ ಕಲ್ಲು ಹೊಡೆದ ಘಟನೆಗೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟವಾಗಿದೆ. ಈ ಬಗ್ಗೆ 80 ಬಡಗಬೆಟ್ಟುವಿನ ವಿನು ಅವರು ನೀಡಿರುವ ದೂರಿನ ಪ್ರಕಾರ ಅವರು ನೇತಾಜಿನಗರದ ಮನೆಯ ಬಳಿ ನಿಂತಿದ್ದಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಣೇಶ ಎನ್ನುವಾತ ವಿನು ಅವರ ಮನೆಯ ಬಳಿ ಇದ್ದ ನಾಯಿಗೆ ಕಲ್ಲು ಹೊಡೆದಿದ್ದ. ಇದನ್ನು ಪ್ರಶ್ನಿಸಿದಾಗ ಗಣೇಶನು ವಿನು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಸಂದರ್ಭ ವಿಜಯ ಹಾಗೂ ಗಣೇಶ ಕತ್ತಿ ಮತ್ತು ಕಬ್ಬಿಣದ ರಾಡ್ನಿಂದ ವಿನು ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ಹೊಡೆದಾಟದಲ್ಲಿ ವಿನು ಅವರ ತಾಯಿ ಹಾಗೂ ತಂದೆಯೂ ಗಾಯಗೊಂಡಿದ್ದಾರೆ. ಪ್ರತಿದೂರು ಈ ಘಟನೆಗೆ ಸಂಬಂಧಿಸಿ ಆಶಾ ಅವರು ಕೂಡ ದೂರು ನೀಡಿದ್ದು, ಅವರ ಪತಿ ಗಣೇಶ ಅವರೊಂದಿಗೆ ಆರೋಪಿಗಳಾದ ವಿನು ಮತ್ತು ಮಂಜುನಾಥ ಜಗಳವಾಡುತ್ತಿದ್ದಾಗ ಆಶಾ ಅವರು ಬಿಡಿಸಲು ಹೋಗಿದ್ದು, ಈ ವೇಳೆ ಮಂಜುನಾಥ ಹಾಗೂ ವಿನು ಇಬ್ಬರೂ ಆಶಾ ಹಾಗೂ ಅವರ ಪತಿ ಗಣೇಶ ಅವರಿಗೆ ಕತ್ತಿ ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಲಾಗಿದೆ.
ಹಲ್ಲೆಯಿಂದ ಆಶಾ ಮತ್ತು ಅವರ ಪತಿ ಗಣೇಶ ಅವರ ತಲೆಗೆ ಗಾಯವಾಗಿದೆ ಎಂದು ದೂರಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ