

Team Udayavani, May 25, 2024, 12:18 AM IST
ಸುಳ್ಯ: ಸುಳ್ಯದ ಕಲ್ಲುಮುಟ್ಲು ಡ್ಯಾಂನ ಗೇಟ್ ತೆರವು ಮಾಡಿ ನೀರು ಹೊರಕ್ಕೆ ಬಿಟ್ಟ ಪರಿಣಾಮ ಹೀರು ಸಂಗ್ರಹಗೊಂಡಿದ್ದ ಡ್ಯಾಂ ಮೇಲ್ಭಾಗದಲ್ಲಿ ಮಣ್ಣು ಕುಸಿತಗೊಂಡ ಘಟನೆ ಸಂಭವಿಸಿದೆ.
ಬೇಸಗೆಯಲ್ಲಿ ಡ್ಯಾಂ ಗೇಟ್ ಅಳವಡಿಸಿದ್ದರಿಂದ ಅಣೆಕಟ್ಟಿನಲ್ಲಿ ಸುಮಾರು 10-15 ಅಡಿ ಎತ್ತರದಲ್ಲಿ ನೀರು ಸಂಗ್ರಹಗೊಂಡು ಎರಡು ಭಾಗದಲ್ಲಿ ಕೃಷಿ ತೋಟಗಳು ಕಳೆದ 6 ತಿಂಗಳ ಕಾಲ ಪೂರ್ಣ ಪ್ರಮಾಣದಲ್ಲಿ ಜಲಾವೃತಗೊಂಡಿದ್ದವು.
ಡ್ಯಾಂನಲ್ಲಿ ನೀರು ಶೇಖರಣೆಯಿಂದ ಸುಳ್ಯ ನಗರ ನಿವಾಸಿಗಳಿಗೆ ಹಾಗೂ ನದಿಯ ಆಸು-ಪಾಸಿನ ಕೃಷಿಕ ರಿಗೂ ಪ್ರಯೋಜನವಾಗಿತ್ತು. ನಾಗಪಟ್ಟಣ ದಿಂದ ಮೇಲೆ ಅರಂಬೂರು ಪೆರಾಜೆ ವರೆಗೆ ನೀರು ಸಂಗ್ರಹಗೊಂಡು ನದಿ ಬದಿಯ ತೋಟಗಳು ಜಲಾವೃತ ಗೊಂಡಿದ್ದವು ಎನ್ನುತ್ತಾರೆ ಕೃಷಿಕರು.
ನದಿ ಬದಿಯ ಮಣ್ಣು ಕುಸಿತಇದೀಗ ನಿರಂತರ ಮಳೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದರಿಂದ ಡ್ಯಾಂ ಗೇಟ್ ತೆರವು ಮಾಡಿ ನೀರು ಹೊರಕ್ಕೆ ಬಿಡಲಾಗಿದೆ. ಪರಿಣಾಮ ನದಿ ಬದಿಯಲ್ಲಿ ಮಣ್ಣು ಕುಸಿತಗೊಳ್ಳುತ್ತಿದ್ದು, ನದಿ ಬದಿಯ ಮಣ್ಣು ಮರ ಸಮೇತ ನದಿಗೆ ಬೀಳುತ್ತಿದೆ. ಜತೆಗೆ ಕೆಲವೆಡೆ ಕೃಷಿ ಬೆಳೆಗಳು ನದಿಗುರುಳುತ್ತಿರುವ ಘಟನೆ ಸಂಭವಿಸುತ್ತಿವೆ. ಮಳೆಗಾಲದಲ್ಲಿ ಹೆಚ್ಚಿನ ಮಳೆಗೆ ಇನ್ನಷ್ಟು ಕುಸಿತ ಸಂಭವಿಸುವ ಮೊದಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Ad
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್ನ ಶವ ಪತ್ತೆ – ಫ್ಯಾನ್ಸ್ ಶಾಕ್
Optimistic: ಆಶಾವಾದಿಗಳಾಗೋಣ
You seem to have an Ad Blocker on.
To continue reading, please turn it off or whitelist Udayavani.