Sullia: ಜೇನು ನೊಣ ಓಡಿಸಲು ಬೆಂಕಿ ಪ್ರಯೋಗ; ಆತಂಕ
Team Udayavani, Dec 8, 2023, 12:02 AM IST
ಸುಳ್ಯ: ತೆಂಗಿನ ಮರದ ಮೇಲ್ಭಾಗದಲ್ಲಿದ್ದ ಜೇನು ನೊಣಗಳನ್ನು ಓಡಿಸಲು ಬೆಂಕಿಯ ಪ್ರಯೋಗ ಮಾಡಿದ ವೇಳೆ ಬೆಂಕಿ ಮರದಲ್ಲಿ ತೀವ್ರವಾಗಿ ಹರಡಿ ಆತಂಕ ಉಂಟು ಮಾಡಿದ ಘಟನೆ ಡಿ. 5ರಂದು ಸುಳ್ಯದ ಓಡಬಾಯಿ ಸಮೀಪ ಸಂಭವಿಸಿದೆ.
ಅಗ್ನಿಶಾಮಕ ಕಚೇರಿಯ ಬಳಿಯ ಮನೆಯೊಂದರ ತೆಂಗಿನ ಮರದಲ್ಲಿ ಜೇನು ಗೂಡು ಕಟ್ಟಿದ್ದು, ಕಾಯಿ ಕೊಯ್ಯಲು ಕಷ್ಟವಾಗುತ್ತಿದ್ದ ಕಾರಣ ನೊಣ ಓಡಿಸಲು ಜೇನು ಗೂಡಿಗೆ ಬೆಂಕಿಯ ಶಾಖ ನೀಡಿದ ವೇಳೆ ಬೆಂಕಿ ತೆಂಗಿನ ಗರಿಗೆ ತಾಗಿ ಬೃಹದಾಕಾರದಲ್ಲಿ ಬೆಂಕಿ ವ್ಯಾಪಿಸಿತ್ತು. ಅಗ್ನಿಶಾಮಕ ಸಿಬಂದಿಯವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.