ಯಾರಿಂದಲೂ ಬಿಜೆಪಿ ಶಕ್ತಿ ಒಡೆಯಲು ಆಗಲ್ಲ; ಸಚಿವ ಸುನೀಲ್ ಕುಮಾರ್
ಒಂದು ಕಾಲದಲ್ಲಿ ಬಿಜೆಪಿಯಿಂದ ಒಬ್ಬರಾದರೂ ಗೆಲ್ಲಲಿ ಎಂದು ಗೇಲಿ ಮಾಡುವ ಸಂದರ್ಭವಿತ್ತು.
Team Udayavani, Sep 9, 2021, 4:25 PM IST
ಅಫಜಲಪುರ: ಭಾರತೀಯ ಜನತಾ ಪಕ್ಷವನ್ನು ಇನ್ನಷ್ಟು ಪ್ರಬಲಗೊಳಿಸಲು ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ ಹೇಳಿದರು. ತಾಲೂಕಿನದೇವಲ ಗಾಣಗಾಪುರದಲ್ಲಿ ಬೂತ್ ನಂಬರ್ 143ರ ಅಧ್ಯಕ್ಷೆ ಮೀನಾಕ್ಷಿ ಶ್ರೀಪಾದ ಮಾಳಗೆ ಅವರ ಮನೆಗೆ ನಾಮಫಲಕ ಹಾಕುವ ಮೂಲಕ ಬಿಜೆಪಿ ಪದಾಧಿಕಾರಿಗಳ ಮನೆಗಳಿಗೆ ನಾಮಫಲಕ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಬಿಜೆಪಿಯಿಂದ ಒಬ್ಬರಾದರೂ ಗೆಲ್ಲಲಿ ಎಂದು ಗೇಲಿ ಮಾಡುವ ಸಂದರ್ಭವಿತ್ತು. ಈಗ ಬಿಜೆಪಿ ಇಡೀ ದೇಶವನ್ನೇ ಆವರಿಸಿದೆ. ಇಷ್ಟು ದೊಡ್ಡ ಮಟ್ಟಕ್ಕೆ ಪಕ್ಷ ಬೆಳೆಯಲು ಕಾರ್ಯಕರ್ತರ ಶ್ರಮವೇಕಾರಣ. ಆದ್ದರಿಂದ ಪದಾಧಿಕಾರಿಗಳ ಮನೆಗಳಿಗೆ ಫಲಕ ಹಾಕುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಾಸಕ ಬಸವರಾಜ ಮತ್ತಿಮಡು, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ, ಯುವ ಮುಖಂಡರಾದ ಕುಶಾಳ ಗುತ್ತೇದಾರ, ಅಪ್ಪಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ನಿಂಗದಳ್ಳಿ, ತಾಲೂಕು ಪ್ರಧಾನಕಾರ್ಯದರ್ಶಿ ಭೀಮರಾಯಕಲಶೆಟ್ಟಿ, ಸುಭಾಷ ಪ್ಯಾಟಿ, ವಿನೋದ ರಾಠೊಡ, ಬಲವಂತಜಕಬಾ, ಸಿದ್ರಾಮಪ್ಪ ಕಲಶೆಟಿ, ಪ್ರಿಯಾಂಕ್ ಪೂಜಾರಿ, ಅರೂಣಭಟ್ ಪೂಜಾರಿ, ದತ್ತಾತ್ರೇಯ ಪೂಜಾರಿ, ರಾಮಣ್ಣಖರ್ಚಿ, ರಾಜು ಸಬಸಗಿ, ಆನಂದ , ಭಾಗಪ್ಪ ವಡಗೇರಿ, ಮಹಾದೇವ ಬೆಳಗುಂಪಿ, ದತ್ತು ಹೇರೂರ, ದಿಗಂಬರ ಕರ್ಜಗಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ