ಪಂಚಾಯತ್‌ ನಿರ್ಮಿಸಿದ ಕಟ್ಟಡ ಖಾಸಗಿ ಜಾಗದಲ್ಲಿ?

ಮಹಡಿ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ ಮಹಿಳೆ!

Team Udayavani, Feb 24, 2022, 8:15 AM IST

ಪಂಚಾಯತ್‌ ನಿರ್ಮಿಸಿದ ಕಟ್ಟಡ ಖಾಸಗಿ ಜಾಗದಲ್ಲಿ?

ಉಪ್ಪಿನಂಗಡಿ: ತನಗೆ ಸೇರಿದ ಜಾಗದಲ್ಲಿ ಪಂಚಾಯತ್‌ ಬಲವಂತವಾಗಿ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದು, ತನಗೆ ನ್ಯಾಯ ಒದಗಿಸಬೇಕೆಂದು ಕೋರ್ಟ್‌ ಮೊರೆ ಹೋಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬ, ಇದೀಗ ಅದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಡೆದಿದೆ.

ತೆಕ್ಕಾರು ಗ್ರಾಮದ ಬಾಜಾರ ಮನೆ ನಿವಾಸಿ ದಿವಂಗತ ನೇಮು ನಾಯ್ಕ ಅವರ ಪತ್ನಿ ಯಮುನಾ ಪೊಲೀಸರಿಗೆ ದೂರು ನೀಡಿದ್ದು, ತೆಕ್ಕಾರು ಗ್ರಾಮದಲ್ಲಿನ ತನ್ನ ಹಕ್ಕಿನ 103/1ಎ2 ರಲ್ಲಿನ 0.69 ಎಕ್ರೆ ಭೂಮಿಗೆ ಪಂಚಾಯತ್‌ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆರು ತಿಂಗಳ ಹಿಂದೆ ಅಕ್ರಮವಾಗಿ ಪ್ರವೇಶಿಸಿ ಬುಲ್ಡೋಜರ್‌ ತಂದು ಕೃಷಿಯನ್ನು ಕೂಡ ನಾಶ ಮಾಡಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ. ಆ ವೇಳೆ ಪ್ರಶ್ನಿಸಿದ ನನ್ನನ್ನು, ನನ್ನ ಜಾತಿಯ ಕಾರಣದಿಂದ ನಿಂದಿಸಿ ಪ್ರಶ್ನಿಸಿದರೆ ಈ ಊರಿನಲ್ಲೇ ಇರಲು ಬಿಡುವುದಿಲ್ಲವೆಂದು ಜೀವ ಬೆದರಿಕೆಯೊಡ್ಡಿದ್ದಾರೆಂದು ಪೊಲೀಸ್‌ ಉಪ ಅಧೀಕ್ಷಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದು ತಾನು 40 ವರ್ಷಗಳಿಂದ ಸ್ವಾಧೀನ ಹೊಂದಿದ ಭೂಮಿಯಾಗಿದೆ ಎಂದು ಸಂಬಂಧಿತ ದಾಖಲೆಗಳ ಸಹಿತ ಪುತ್ತೂರು ಸಹಾಯಕ ಕಮಿಷನರ್‌ ನ್ಯಾಯಾಲಯದಲ್ಲಿ ಮಹಿಳೆ ದಾವೆ ಹೂಡಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್‌ ಮಧ್ಯಾಂತರ ಆದೇಶ ಜಾರಿಗೊಳಿಸಿ, ಗ್ರಾ.ಪಂ. ಮೂಲ ದಾಖಲೆಯನ್ನು ಬೆಳ್ತಂಗಡಿ ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.

ಈ ಮಧ್ಯೆ ತನ್ನ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡವು ತನಗೇ ಸೇರಿದ್ದೆಂದು ವಾದಿಸಿ ಯಮುನಾ ಅವರ ಕುಟುಂಬವು ಸದ್ರಿ ಕಟ್ಟಡಕ್ಕೆ 2-3 ದಿನಗಳ ಹಿಂದೆ ಪ್ರವೇಶಗೈದು ವಾಸ್ತವ್ಯವನ್ನು ಆರಂಭಿಸಿದೆ.

ಏನಿದು ಪ್ರಕರಣ?
ತೆಕ್ಕಾರು ಗ್ರಾ. ಪಂ. ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ 20 ಸೆಂಟ್ಸ್‌ ಭೂಮಿಯನ್ನು ಮಂಜೂರು ಮಾಡಿದ್ದು, ಸದ್ರಿ ಮಂಜೂರಾದ ಭೂಮಿಯು ಸರ್ವೆ ನಂಬ್ರ 64/ 1ರಲ್ಲಿ ಇದೆ ಎನ್ನಲಾಗಿದೆ. ಯಮುನಾ ಅವರು ಆಪಾದಿಸಿರುವಂತೆ ಸರ್ವೆ ನಂಬ್ರದ ಭೂಮಿಯು ಕಟ್ಟಡ ನಿರ್ಮಿಸುತ್ತಿರುವ ಸ್ಥಳಕ್ಕಿಂತ ಸುಮಾರು 1 ಕಿ.ಮೀ. ದೂರದಲ್ಲಿದೆ. ಪಂಚಾಯತ್‌ನವರು ತನ್ನ 103/ 1ಎ2 ಸರ್ವೆ ನಂಬರ್‌ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ. ನಾನು ಮೊದಲೇ ಆಕ್ಷೇಪಿಸಿದಾಗ ನನಗೆ ಬೆದರಿಕೆ ಹಾಕಲಾಗಿದ್ದು, ಆದುದರಿಂದ ನ್ಯಾಯಾಲಯಕ್ಕೆ ಹೋಗಬೇಕಾಯಿತು ಎನ್ನುತ್ತಾರೆ ಯಮುನಾ.

ತಾವು ನಿರ್ಮಿಸಿದ ಕಟ್ಟಡಕ್ಕೆ ಮಹಿಳೆಯ ಕುಟುಂಬ ಅಕ್ರಮ ಪ್ರವೇಶ ಮಾಡಿ ಅಲ್ಲಿಯೇ ವಾಸವಾಗಿದ್ದಾರೆ ಎಂದು ಪಂಚಾಯತ್‌ ಆಡಳಿತ ದೂರು ನೀಡಿದ್ದು, ಮಂಗಳವಾರ ಎರಡೂ ತಂಡಗಳನ್ನು ಪೊಲೀಸ್‌ ಉಪ ಅಧೀಕ್ಷಕಿ ಗಾನ ಪಿ. ಕುಮಾರ್‌ ಅವರು ಕರೆದು ವಿಚಾರಣೆ ನಡೆಸಿದ್ದು, ಮೊದಲು ಸರಕಾರಿ ಸರ್ವೇಯರ್‌ಗಳಿಂದ ಅಳತೆ ಮಾಡಿಸುವಂತೆ ಸೂಚಿಸಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.