ಅಂತ್ಯ ಕಾಣದ ಮಾರ್ಕೊಪೊಲೊ ಹಗರಣ
ಹೊಸ ಸಾರಿಗೆ ಸಚಿವರ ಅಧಿಕಾರ ಸ್ವೀಕಾರ ಬೆನ್ನಲ್ಲೇ ಚಿಗುರೊಡೆದ ನಿರೀಕ್ಷೆ; ಧೂಳು ತಿನ್ನುತ್ತಿವೆ ಹಳೆಯ ಬಸ್ಗಳು!
Team Udayavani, Aug 27, 2021, 4:40 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಾಲದ ಸುಳಿಯಲ್ಲಿ ಸಿಲುಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಾಟಾ
ಮಾರ್ಕೊಪೊಲೊ ಬಸ್ ಖರೀದಿ ಹಗರಣ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದೆ. ಕೋಟ್ಯಂತರ ರೂ. ಹಗರಣವೊಂದನ್ನು ಈಗ ಕೇಳುವವರೂ
ಇಲ್ಲದಂತಾಗಿದೆ!
ಸುಮಾರು ಒಂದು ದಶಕದ ಹಿಂದೆ ನಡೆದಿತ್ತು ಎನ್ನಲಾದ ಈ ಹಗರಣ ಬೆಳಕಿಗೆ ಬಂದ ನಂತರ ಐವರು ಸಾರಿಗೆ ಸಚಿವರು ಬಂದು ಹೋದರು. ಬಿಳಿ ಆನೆಯಾಗಿ ಪರಿಣಮಿಸಿದ್ದ ಮಾರ್ಕೊಪೊಲೊ ಬಸ್ಗಳು ಮೂಲೆ ಸೇರಿದವು. ಈಗಲೂ ಹೊಸದಾಗಿ ನಿರ್ಮಿಸಿದ ಡಿಪೋಗಳಲ್ಲಿ ಈ ಬಸ್ಗಳು ಧೂಳು ತಿನ್ನುತ್ತಿವೆ. ಹಗರಣದ ತನಿಖೆ ನಡೆಸಿ ಸಲ್ಲಿಸಿದ ಕಡತಗಳೂ ಧೂಳು ತಿನ್ನುತ್ತಿವೆ. ಆದರೆ, ಇದುವರೆಗೆ ಈ ಬಗ್ಗೆ ಆಡಳಿತ ಪಕ್ಷವಾಗಲಿ ಹಾಗೂ ಪ್ರತಿಪಕ್ಷಗಳಾಗಲಿ ಚಕಾರ ಎತ್ತುತ್ತಿಲ್ಲ. ಇನ್ನು ತಪ್ಪಿತಸ್ಥರಿಗೆ ಶಿಕ್ಷೆ ದೂರದ ಮಾತು. ಹಗರಣದ ತನಿಖೆಗೆ ಸದನ ಸಮಿತಿ ರಚಿಸಿತ್ತು. ಅದು ವರದಿ ಸಲ್ಲಿಸಿದ ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಯಿತು. ನಂತರ ಹಗರಣವೇ ಕಣ್ಮರೆ ಆಯಿತು. ಇದೆಲ್ಲದರ ನಡುವೆ ಆರೋಪಿಗಳು ಮಾತ್ರ “ಕಂಫರ್ಟ್ ಝೋನ್’ನಲ್ಲಿ ನಿಶ್ಚಿಂತವಾಗಿದ್ದಾರೆ.
ಮತ್ತೊಂದೆಡೆ ಬಿಎಂಟಿಸಿ ಇದುವರೆಗೆ ಖರೀದಿಯಿಂದಾದ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸುತ್ತಲೇ ಇದೆ! “ಈಗ ಸಾರಿಗೆ ಇಲಾಖೆಗೆ
ಡೈನಾಮಿಕ್ ಸಚಿವರು ಬಂದಿದ್ದಾರೆ’ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಈಗಲಾದರೂ ಹಗರಣವು ತಾರ್ಕಿಕ ಅಂತ್ಯ ಕಾಣಬಹುದು ಎಂಬ ನಿರೀಕ್ಷೆಗಳು ಸಾರಿಗೆ ನೌಕರರಲ್ಲಿ ಚಿಗುರೊಡೆದಿವೆ.
ನಿಗಮಗಳ ತಾಂತ್ರಿಕ ತಂಡದ ಆಕ್ಷೇಪಣೆ ನಡುವೆಯೂ ಕೇಂದ್ರದ ಜೆ-ನರ್ಮ್ ಯೋಜನೆ ಅಡಿ142 ಟಾಟಾ ಮಾರ್ಕೊಪೊಲೊಬಸ್ಗಳನ್ನು
2008-09ರಲ್ಲಿ ಖರೀದಿಸಲಾಗಿತ್ತು. ಇದರಲ್ಲಿ ಬಿಎಂಟಿಸಿಯ 98 ಹಾಗೂ ಕೆಎಸ್ಆರ್ಟಿಸಿಯ ಮೈಸೂರು ಘಟಕ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು
ಬಸ್ಗಳನ್ನುಕಾರ್ಯಾಚರಣೆಗಿಳಿಸಲಾಗಿತ್ತು. ಪ್ರತಿ ಬಸ್ಗೆ ಅಂದಾಜು 75ರಿಂದ 80 ಲಕ್ಷ ರೂ. ಪಾವತಿಸಲಾಗಿತ್ತು. ಇದರಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಬಿಎಂಟಿಸಿಯ ಪಾಲು ಕ್ರಮವಾಗಿ ಶೇ.50 ಹಾಗೂ ತಲಾ ಶೇ. 25ರಷ್ಟಿತ್ತು. ಟೆಂಡರ್ನಲ್ಲಿ ಬಸ್ ಪೂರೈಸಿದ ಕಂಪನಿಗೆ ಪೂರಕ ವಾಗುವಂತೆ ಮಾಡಲಾಗಿತ್ತು ಎಂಬ ಆರೋಪಇದೆ.
ಈ ಬಸ್ಗಳು ರಸ್ತೆಗಿಳಿದ ತಿಂಗಳುಗಳಲ್ಲಿ ಅವುಗಳ ಬಣ್ಣ ಬಯಲಾಯಿತು. ತಾಂತ್ರಿಕ ದೋಷ ಹೊಂದಿದ್ದ ಬಸ್ಗಳು ಕಪ್ಪು ಹೊಗೆ ಉಗುಳಲು ಪ್ರಾರಂಭಿಸಿದವು. ಪ್ರತಿ ಲೀಟರ್ಗೆ ಮೈಲೇಜ್ ಒಂದೂವರೆಯಿಂದ ಎರಡು ಕಿ.ಮೀ. ಮಾತ್ರ ಇತ್ತು. ಆದರೆ, ವೋಲ್ವೋ ಬಸ್ಗಳು ಲೀ.ಗೆ 2.5ರಿಂದ 3 ಕಿ.ಮೀ. ಓಡುತ್ತಿದ್ದವು. ಇನ್ನು ಸಾಮಾನ್ಯಬಸ್ಗಳ ಮೈಲೇಜ್ 4 ರಿಂದ 5 ಕಿ.ಮೀ. ಆಗಿದೆ. ಜತೆಗೆ ಉಳಿದ ಬಸ್ಗಳಿಗೆ ಹೋಲಿಸಿದರೆ,ಮಾರ್ಕೊಪೊಲೊ ಬಸ್ಗಳ ನಿರ್ವಹಣಾ ವೆಚ್ಚ ದುಬಾರಿ ಆಗಿತ್ತು. ಇದರಿಂದ ಬಿಎಂಟಿಸಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದವು.
ಲಕ್ಷ ಕಿ.ಮೀ. ಕೂಡ ಓಡದೆ ಗುಜರಿ ಸೇರಿದವು
ಚಾಲಕರಿಂದಲೂ “ಪಿಕ್ಅಪ್’ ಇಲ್ಲ, ಏರ್ ಸಸ್ಪ್ಯಾನನ್ನಲ್ಲಿ ದೋಷ ಸೇರಿದಂತೆ ಸಾಕಷ್ಟು ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಆ
ಬಸ್ಗಳನ್ನು ಒಂದೊಂದಾಗಿ ಮೂಲೆ ಸೇರಿಸುವ ಪ್ರಕ್ರಿಯೆ ಶುರುವಾಯಿತು.ಕೇವಲ 50 ಸಾವಿರದಿಂದ ಒಂದು ಲಕ್ಷ ಕಿ.ಮೀ.ಕಾರ್ಯಾಚರಣೆ
ಮಾಡುವಷ್ಟರಲ್ಲಿ ಅವುಗಳು ಗುಜರಿಗೆ ತಳ್ಳಲ್ಪಟ್ಟವು. ಸಾಮಾನ್ಯವಾಗಿ ಬಸ್ಗಳು ಕನಿಷ್ಠ 10 ರಿಂದ11 ಲಕ್ಷಕಿ.ಮೀ.ಕಾರ್ಯಾಚರಣೆ ಮಾಡಿದ ನಂತರ ಗುಜರಿ ಪಟ್ಟಿಗೆ ಸೇರುತ್ತವೆ. ಈ ನಿಟ್ಟಿನಲ್ಲೂ ಸಂಸ್ಥೆಗೆ ನಷ್ಟ ಉಂಟಾಯಿತು. ಈಗ ಅವುಗಳನ್ನು ತಲಾ ಒಂದು ಲಕ್ಷ ರೂಪಾಯಿಗೆ ಕೇಳುತ್ತಿದ್ದಾರೆ. ಏನು ಮಾಡುವುದು ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
“ಹಗರಣಕ್ಕೆ ಸಂಬಂಧಪಟ್ಟ ತನಿಖೆ ಮತ್ತು ಅದರ ವರದಿ ಸರ್ಕಾರದ ಹಂತದಲ್ಲಿದೆ. ಅದು ಸೂಕ್ತ ನಿರ್ಣಯ ಕೈಗೊಳ್ಳಬಹುದೆ ಹೊರತು, ಸಾರಿಗೆ
ನಿಗಮಗಳ ಪಾತ್ರ ಇಲ್ಲಿ ಏನೂ ಇಲ್ಲ. ನಷ್ಟ ಭರಿಸಲು ಸಾಧ್ಯವಿಲ್ಲ; ಕಳೆದುಹೋದ ಹಣವೂ ವಾಪಸ್ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕೊನೆ ಪಕ್ಷ ತಪ್ಪಿತಸ್ಥರಿಗೆ ಶಿಕ್ಷೆಯಾದರೂ ಆದರೆ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗದಂತೆ ತಡೆಯಬಹುದು’ ಎಂದು ಮತ್ತೂಬ್ಬ ಅಧಿಕಾರಿ ಸ್ಪಷ್ಟಪಡಿಸುತ್ತಾರೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ