ಗಿಡ ನೆಡಲು ನೆಲಕ್ಕಿಂತ ಮನಸ್ಸು ಮುಖ್ಯ


Team Udayavani, Jun 13, 2021, 6:20 AM IST

ಗಿಡ ನೆಡಲು ನೆಲಕ್ಕಿಂತ ಮನಸ್ಸು ಮುಖ್ಯ

ಎತ್ತರದ ಬಹುಮಹಡಿ ಕಟ್ಟಡದ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಅಂಗಳವೇ ಇಲ್ಲ ಎಂದು ಹಸುರನ್ನೇ ಮರೆಯುವವರಿದ್ದಾರೆ. ಆದರೆ ಗಿಡ ನೆಡಲು ಮಣ್ಣಿನ ನೆಲವೇ ಬೇಕಿಲ್ಲ. ಗ್ರೋ ಬ್ಯಾಗ್‌ಗಳಲ್ಲಿ, ಮಣ್ಣು / ಸಿಮೆಂಟ್‌/ ಪ್ಲಾಸ್ಟಿಕ್‌ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಈ ಪಾಟ್‌ಗಳನ್ನು ಇಂಟರ್‌ಲಾಕ್‌ ಅಳವಡಿಸಿದ ಅಂಗಳ, ಕಾಂಪೌಂಡ್‌ ಗೋಡೆ, ಫ್ಲ್ಯಾಟ್‌ನ ಬಾಲ್ಕನಿ, ಟೆರೆಸ್‌, ಮನೆಯ ಸಿಟೌಟ್‌, ಹಾಲ್‌, ಬೆಡ್‌ರೂಮ್‌, ಕಿಚನ್‌ನಲ್ಲೂ ಗಿಡದ ಪಾಟ್‌ಗಳನ್ನಿಡಬಹುದು.

ದಿನ 1: ಸಹಜವಾದ ಮನೆಯ ಒಳಾಂಗಣ ದೃಶ್ಯ. ದಿನ 365: ಎಲ್ಲೆಂದರಲ್ಲಿ ಹಸುರು ಗಿಡಗಳು ತುಂಬಿದ ಒಳಾಂಗಣ. ಇತ್ತೀಚೆಗೆ ವಾಟ್ಸ್‌ಆ್ಯಪ್‌ ನಲ್ಲಿ ಬಂದ ಚಿತ್ರವಿದು. ಇದು ನಗು ತರಿಸಬೇಕಾದ ಕಾಟೂìನ್‌ ಅಲ್ಲ. ಚಿಂತನೆಗೆ ಹಚ್ಚ ಬೇಕಾದ ಚಿತ್ರ.
ಇತ್ತೀಚೆಗೆ ಪ್ರಪಂಚ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲೊಂದು ಶುದ್ಧ ಗಾಳಿಯ ಕೊರತೆ. ವಾಯುಮಾಲಿನ್ಯದ ಭೀಕರ ಪರಿಣಾಮವಾಗಿ ಶ್ವಾಸಕೋಶ ಸಂಬಂಧೀ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೇ ಶ್ವಾಸಕೋಶ ವನ್ನು ಹಾನಿಗೆಡಹುವ ಕೋವಿಡ್‌ -19 ಎಂಬ ಮಹಾಮಾರಿಯೂ ಲಗ್ಗೆಯಿಟ್ಟಿದೆ.

ಕಲುಷಿತವಾದ ಪರಿಸರವನ್ನು ಸ್ವತ್ಛಗೊಳಿಸುವುದು, ವಾಯುಮಾಲಿನ್ಯ ತಗ್ಗಿಸುವುದು, ಪ್ರಾಣವಾಯು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವುದು ಪ್ರಪಂಚದ ತುರ್ತು ಅಗತ್ಯಗಳಲ್ಲೊಂದು. ದಿನೇ ದಿನೆ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ, ಹೊಸ ಕಾರ್ಖಾನೆಗಳ ಸ್ಥಾಪನೆ ವಾಯು ಶುದ್ಧವಾಗುವ ಸಾಧ್ಯತೆಯನ್ನು ಮತ್ತಷ್ಟೂ ದುರ್ಬಲಗೊಳಿಸುತ್ತಿದೆ. ಹಲವು ಆಕ್ರಮಣ ಕಾರಿ ರೋಗಗಳಿಂದ ನಮ್ಮನ್ನು ರಕ್ಷಿಸಲು ನಮ್ಮ ಶ್ವಾಸಕೋಶಗಳನ್ನು ಬಲಿಷ್ಠವಾಗಿಡಲೇ ಬೇಕು. ಮಲಿನ ವಾಯುವನ್ನು ಉಸಿರಾಡುತ್ತಾ ಹೋದಂತೆ ನಮ್ಮ ಶ್ವಾಸಕೋಶ ದುರ್ಬಲವಾಗುತ್ತಾ ಹೋಗುತ್ತದೆ. ನಮ್ಮ ಶ್ವಾಸಕೋಶಗಳ ಸುಸ್ಥಿತಿಗಾಗಿ, ತನ್ಮೂಲಕ ನಮ್ಮ ಶರೀರದ ಆರೋಗ್ಯಕ್ಕಾಗಿ ಒಂದಷ್ಟು ಶುದ್ಧಗಾಳಿಯನ್ನು ನಾವೇ ಉತ್ಪಾದಿಸಿದರೆ ಹೇಗೆ?

ಸಸ್ಯಗಳೆಂಬ ಆಮ್ಲಜನಕದ ಕಾರ್ಖಾನೆಗಳು
ಭೂಮಿಯಲ್ಲಿನ ಆಮ್ಲಜನಕವನ್ನು ಬಳಸಿ ಬದುಕುವ ಜೀವಿಗಳಿಂದಾಗಿ ಭೂಮಿಯ ಆಮ್ಲಜನಕ ಬರಿದಾಗದಿರಲೆಂದು ದೇವರು ಆ ಜೀವಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಗಳನ್ನು ಸೃಷ್ಟಿಸಿದರು. ಸಸ್ಯಗಳೂ ಆಮ್ಲಜನಕವನ್ನು ಉಸಿ ರಾಟಕ್ಕೆ ಬಳಸುತ್ತವೆ. ಆದರೆ ಅವುಗಳ ಆಹಾರ ತಯಾರಿಕೆ (ದ್ಯುತಿ ಸಂಶ್ಲೇಷಣೆ) ಕ್ರಿಯೆಯಲ್ಲಿ ಉಪ ಉತ್ಪನ್ನವಾಗಿ ಆಮ್ಲಜನಕ ಬಿಡುಗಡೆಯಾಗುತ್ತದೆ. ಪ್ರಪಂಚದಲ್ಲಿರುವ ಸಸ್ಯಗಳಲ್ಲಿ ಎಲ್ಲವೂ ಆಮ್ಲ ಜನಕವನ್ನು ಉತ್ಪಾದಿಸುತ್ತವೆಯಾದರೂ ಕೆಲವು ಸಸ್ಯಗಳು ಉಳಿದವುಗಳಿಗಿಂತ ಹೆಚ್ಚಿನ ಪ್ರಮಾಣ ದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಅಂತಹ ಸಸ್ಯಗಳನ್ನು ನಮ್ಮ ಮನೆಯ ಪರಿಸರದಲ್ಲಿ ಹೆಚ್ಚು ಹೆಚ್ಚಾಗಿ ನೆಟ್ಟು ಬೆಳೆಸಬೇಕು. ಹಿಂದಿನ ಕಾಲದಲ್ಲಿ ಪ್ರತಿಯೊಂದು ಊರಲ್ಲೂ ಕನಿಷ್ಠ ಒಂದಾದರೂ ಅರಳಿ ಮರ, ಅದರ ಸುತ್ತ ಒಂದು ಕಟ್ಟೆ ಇರುತ್ತಿತ್ತು. ಊರ ಪಂಚಾಯತ್‌ ಅದರ ಕೆಳಗೆ ಸೇರುತ್ತಿತ್ತು. ಆ ಮರ ಅತ್ಯಧಿಕ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆಯೆಂಬುದು ಅನಕ್ಷರಸ್ಥರಾದ ನಮ್ಮ ಪೂರ್ವಿಕರಿಗೆ ಹೇಗೋ ತಿಳಿದಿತ್ತು. ಇಂದು ರಸ್ತೆ ವಿಸ್ತರಣೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ಈ ಅರಳಿಮರದ ಕಟ್ಟೆಗಳು ನಾಶವಾಗಿವೆ. ಟನ್‌ಗಟ್ಟಲೆ ಆಮ್ಲಜನಕ ದಿನವೂ ಅದರಿಂದ ನಷ್ಟವಾಗಿದೆಯೆಂಬ ಘೋರ ಸತ್ಯವಂತೂ ಅಭಿವೃದ್ಧಿಯ ಜಪ ಮಾಡುವ ನಮಗೆ ಬೇಕಿಲ್ಲ.

ಲಾಕ್‌ಡೌನ್‌ ಮತ್ತು ಗಾರ್ಡನಿಂಗ್‌
ಕಳೆದ ಲಾಕ್‌ಡೌನ್‌ ಸಮಯದಲ್ಲಿ ಅನೇಕರು ತಮ್ಮ ಮನೆಯೆದುರು ಚಂದದ ಹೂತೋಟ ನಿರ್ಮಿಸಿಕೊಂಡರು. ಪರಿಸರ ಪ್ರಜ್ಞೆಯಿಂದ ಹೀಗೆ ಮಾಡಿದವರು ವಿರಳ. ಆದರೂ ಇದು ಕೂಡಾ ಪರಿಸರದಲ್ಲಿ ಆಮ್ಲಜನಕದ ಪ್ರಮಾಣ ಏರುವಲ್ಲಿ ಸಣ್ಣ ಮಟ್ಟಿನಲ್ಲಾದರೂ ಸಹಕರಿಸುತ್ತಿದೆ ಎಂಬುದಂತೂ ಸತ್ಯ. ಮನೆಯ ಅಂಗಳಕ್ಕೆಲ್ಲ ಇಂಟರ್‌ಲಾಕ್‌ ಹಾಕಿದ್ದೇವೆ. ಮನೆ ಹಾಗೂ ಅಂಗಳದ ಹೊರತಾಗಿ ಬೇರೆ ಜಾಗವಿಲ್ಲ, ಎತ್ತರದ ಬಹುಮಹಡಿ ಕಟ್ಟಡದ ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಅಂಗಳವೇ ಇಲ್ಲ ಎಂದು ಹಸುರನ್ನೇ ಮರೆಯುವವರಿದ್ದಾರೆ. ಆದರೆ ಗಿಡ ನೆಡಲು ಮಣ್ಣಿನ ನೆಲವೇ ಬೇಕಿಲ್ಲ. ಗ್ರೋ ಬ್ಯಾಗ್‌ಗಳಲ್ಲಿ, ಮಣ್ಣು / ಸಿಮೆಂಟ್‌/ ಪ್ಲಾಸ್ಟಿಕ್‌ ಪಾಟ್‌ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಈ ಪಾಟ್‌ಗಳನ್ನು ಇಂಟರ್‌ಲಾಕ್‌ ಅಳವಡಿಸಿದ ಅಂಗಳ, ಕಾಂಪೌಂಡ್‌ ಗೋಡೆ, ಫ್ಲ್ಯಾಟ್‌ನ ಬಾಲ್ಕನಿ, ಟೆರೆಸ್‌, ಮನೆಯ ಸಿಟೌಟ್‌, ಹಾಲ್‌, ಬೆಡ್‌ರೂಮ್‌, ಕಿಚನ್‌ನಲ್ಲೂ ಗಿಡದ ಪಾಟ್‌ಗಳನ್ನಿಡಬಹುದು.

ಒಳಾಂಗಣ ಗಿಡಗಳ ಆಯ್ಕೆ ಹೇಗೆ?
ಬಿಸಿಲಿಲ್ಲದೇ ಗಿಡ ಬೆಳೆಯುತ್ತವೆಯೇ? ಒಳಾಂಗಣದಲ್ಲಿ ಎಲ್ಲಿದೆ ಬಿಸಿಲು? ಪಾಟ್‌ಗಳನ್ನು ಒಳಗಿಟ್ಟು ನೀರು ಹಾಕಿ ಗಿಡ ಬೆಳೆಸುವಾಗ ನೆಲವೆಲ್ಲ ಹಾಳಾಗದೇ? ಒಳಾಂಗಣಕ್ಕೆ ಸೂಕ್ತ ವಾದ ಗಿಡಗಳು ಯಾವುವು? ಇತ್ಯಾದಿ ನೂರೆಂಟು ಪ್ರಶ್ನೆಗಳು ನಿಮ್ಮಲ್ಲಿರಬಹುದು. ಹೊರಗೆ ಬಿಸಿಲಿ ನಲ್ಲಿ, ಮಣ್ಣಿನಲ್ಲಿ ಬೆಳೆಯುವ ಎಲ್ಲ ಗಿಡಗಳೂ ಒಳಾಂಗಣದಲ್ಲಿ ಬೆಳೆಯ ಲಾರವು. ಕಡಿಮೆ ಬೆಳಕಿನಲ್ಲಿ ಬೆಳೆ ಯುವ, ಕಡಿಮೆ ಬೆಳಕು ಅಥವಾ ನೆರಳನ್ನೇ ಬಯಸುವ ಗಿಡಗಳು ಹಲವಿವೆ. ಅವನ್ನು ಒಳಾಂಗಣದಲ್ಲಿ ಬೆಳೆಸಬಹುದು. ಪೀಸ್‌ ಲಿಲ್ಲಿ ಎಂಬ ಗಾಢ ಹಸುರು ವರ್ಣದ ಎಲೆಯ ಬಿಳಿ ಹೂ ಬಿಡುವ ಗಿಡ ಅತ್ಯಂತ ಸುಂದರವಾದೊಂದು ಒಳಾಂಗಣ ಹೂ ಬಿಡುವ ಸಸ್ಯ. ಹಾಗೆಯೇ ಆಂಥೂರಿಯಂ ಗಿಡಗಳು ಸಹಾ ಬಹಳ ಕಾಲ ಬಾಳಿಕೆ ಬರುವ/ತಾಜಾ ಆಗಿ ಉಳಿಯುವ ಹೂಗಳನ್ನು ಹೊಂದಿರುವ ಸಸ್ಯ. ಸಿಂಗೋನಿಯಂ ಅಥವಾ ಆ್ಯರೋಹೆಡ್‌ ಪ್ಲಾಂಟ್‌, ಅಲೋಕೇಶಿಯಾ, ಸ್ನೇಕ್‌ ಪ್ಲಾಂಟ್‌, ಅರೆಕ್ಯಾ ಪಾಮ…, ರಬ್ಬರ್‌ ಪ್ಲಾಂಟ್‌, ಝೀ ಝೀ ಪ್ಲಾಂಟ್‌, ಲಕ್ಕಿ ಬ್ಯಾಂಬೂ ಇತ್ಯಾದಿಗಳು ಅತ್ಯುತ್ತಮ ಒಳಾಂಗಣ ಸಸ್ಯಗಳು. ಸ್ಪೆ  „ಡರ್‌ ಪ್ಲಾಂಟ್‌, ಟರ್ಟಲ್‌ ವೈವ್‌, ಇಂಗ್ಲಿಷ್‌ ಐವಿ, ಮನಿಪ್ಲಾಂಟ್‌ ಇತ್ಯಾದಿ ಹ್ಯಾಂಗಿಂಗ್‌ ಪ್ಲಾಂಟ್‌ಗಳನ್ನೂ ಒಳಾಂಗಣದಲ್ಲಿ ಬೆಳೆಸಬಹುದು. ಖಾಲಿ ಬಾಟಲ್‌ಗ‌ಳಲ್ಲಿ ನೀರು ತುಂಬಿಸಿ ಅದರಲ್ಲಿ ಮನಿಪ್ಲಾಂಟ್‌, ಸಿಂಗೋನಿಯಂ, ಕೆಲವು ರೀತಿಯ ಕ್ರಾಟನ್‌ ಗಿಡಗಳ ಗೆಲ್ಲುಗಳನ್ನಿಟ್ಟರೆ ಅವು ಅಲ್ಲಿ ಬೇರು ಬಿಟ್ಟು ಚಿಗುರಿ ಚೆನ್ನಾಗಿ ಬೆಳೆಯುತ್ತವೆ. ಡೈನಿಂಗ್‌ ಟೇಬಲ್, ಟೀಪಾಯ್, ಫ್ರಿಜ್‌, ವಾಷಿಂಗ್‌ ಮೆಷಿನ್‌, ಸ್ಟಡಿ ಟೇಬಲ್, ಬೆಡ್‌ ಸೈಡ್‌ ಟೇಬಲ್, ಕಿಟಕಿಗಳು, ಅಡುಗೆ ಮನೆಯ ಕೌಂಟರ್‌ ಟಾಪ್‌, ಮಹಡಿಯ ಮೆಟ್ಟಿಲುಗಳು.. ಹೀಗೆ ಎಲ್ಲೆಂದರಲ್ಲಿ ನೀವು ಗಿಡಗಳನ್ನು ನಿಮ್ಮ ಕಲ್ಪನೆಗನುಸಾರ ಅಂದವಾಗಿ ಜೋಡಿಸಬಹುದು. ಮಾರುಕಟ್ಟೆಯಲ್ಲಿ ಒಳಾಂಗಣ ಗಿಡಗಳಿಗೆಂದೇ ಸೆರಾಮಿಕ್‌, ಮೆಟಲ್‌ ಹಾಗೂ ಫೈಬರ್‌ನ ಅಂದವಾದ ವಿನ್ಯಾಸ ಹಾಗೂ ಬಣ್ಣಗಳ ಪಾಟ್‌ಗಳು ಲಭ್ಯವಿವೆ. ನೀರನ್ನೇ ಬಯಸದ ಕ್ಯಾಕ್ಟಸ್‌ ಜಾತಿಯ ಸುಂದರ ಹಾಗೂ ವೈವಿಧ್ಯಮಯ ಗಿಡಗಳು, ಮಣ್ಣು- ನೀರು ಏನೂ ಬೇಡದ, ದಾರದಲ್ಲಿ ಸುಮ್ಮನೆ ನೇತುಹಾಕಿ ಬೆಳೆಸಬಹು ದಾದ ಏರ್‌ ಪ್ಲಾಂಟ್‌ (ಗಾಳಿ ಗಿಡಗಳು), ಗಾಳಿಯ ತೇವಾಂಶ ಹೀರಿ ಬದುಕುವ ಸಕ್ಕಲೆಂಟ್‌ಗಳು ಇತ್ಯಾದಿ ಅತೀ ಸುಂದರವಾದ ಸಸ್ಯಗಳು ಮನೆಯ ಒಳಾಂಗಣವನ್ನು ಸುಂದರವಾಗಿಡುವುದಷ್ಟೇ ಅಲ್ಲ, ಒಳಗಿನ ಗಾಳಿಯಲ್ಲಿರಬಹುದಾದ ಮಾಲಿನ್ಯಗಳನ್ನು ಹೀರಿ ಶುದ್ಧಗಾಳಿಯನ್ನು ತುಂಬಿಸುತ್ತವೆ.

ಒಳಾಂಗಣ ಗಿಡಗಳಲ್ಲಿ ಕೆಲವನ್ನು ಏರ್‌ ಪ್ಯೂರಿಫೈಯರ್ಸ್‌ ಎನ್ನುತ್ತಾರೆ. ಸ್ನೇಕ್‌ ಪ್ಲಾಂಟ್‌, ಅಲೋವೆರಾ ಇತ್ಯಾದಿ ಗಿಡಗಳು ಆ ಗುಂಪಿಗೆ ಸೇರಿವೆ. ಸ್ನೇಕ್‌ ಪ್ಲಾಂಟ್‌ಗಳನ್ನು ಬೆಡ್‌ರೂಮ್‌ನಲ್ಲಿಡುವುದು ಉಸಿರಾಟದ ಸಮಸ್ಯೆ ಇರುವವರಿಗೆ ಒಳ್ಳೆಯದೆನ್ನುತ್ತಾರೆ ತಜ್ಞರು. ಈ ಲಾಕ್‌ಡೌನ್‌ ಅವಧಿಯಲ್ಲಿ ನಮಗೆ ಪುಕ್ಕಟೆಯಾಗಿ ಸಿಕ್ಕಿರುವ ಧಾರಾಳ ಸಮಯವನ್ನು ಗಿಡ ನೆಡುವ ಕಾರ್ಯದ ಮೂಲಕ ಸದುಪಯೋಗಪಡಿಸೋಣ. ಗಿಡ ನೆಡಲು ನೆಲ ಬೇಡ. ಮನಸ್ಸೊಂದೇ ಸಾಕು.

– ಜೆಸ್ಸಿ ಪಿ.ವಿ. ಪುತ್ತೂರು

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.