ಮೋದಿ ಅಲೆ, ಸಂಘಟನೆಯ ಸೆಲೆ, ತಂತ್ರಗಾರಿಕೆಯ ಬಲೆ


Team Udayavani, May 26, 2019, 3:08 AM IST

modi-ale

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಇದಕ್ಕೆ ಪ್ರಧಾನಿ ಮೋದಿ ಅಲೆಯ ಜತೆಗೆ ಪಕ್ಷದ ಸಂಘಟನೆಯ ಶ್ರಮ, ತಂತ್ರಗಾರಿಕೆ ಪ್ರಧಾನವಾಗಿ ಫ‌ಲ ನೀಡಿದಂತಿದೆ.

ಮೋದಿ ಅಲೆಯ ಅಬ್ಬರದ ಜತೆಗೆ ಪಕ್ಷದ ಸಿದ್ಧಾಂತ, ಬದಲಾದ ಪರಿಸ್ಥಿತಿಗೆ ತಕ್ಕಂತೆ ರೂಪಿಸಿದ ಚುನಾವಣಾ ರಣತಂತ್ರ, ಕೇಡರ್‌ನ ಅವಿರತ ಪರಿಶ್ರಮ ಫ‌ಲ ನೀಡಿದ್ದರೆ, ಮತ್ತೂಂದೆಡೆ ಸರ್ಜಿಕಲ್‌ ಸ್ಟ್ರೈಕ್‌, ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ಬಿಜೆಪಿ ಗೆಲುವಿನ ಓಟಕ್ಕೆ ಹೆಚ್ಚಿನ ವೇಗ ತುಂಬಿವೆ. ಜತೆಗೆ, ರಾಜ್ಯ ಮೈತ್ರಿ ಸರ್ಕಾರದ ವೈಫ‌ಲ್ಯ, ಕಚ್ಚಾಟ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲು ಕಾರಣವಾಗಿದೆ ಎಂಬ ವಿಶ್ಲೇಷಣೆ ಪಕ್ಷದ ವಲಯದಿಂದ ಕೇಳಿ ಬಂದಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗರಿಷ್ಠ 22 ಸ್ಥಾನ ಗೆಲ್ಲುವುದಾಗಿ ಯಡಿಯೂರಪ್ಪ ಚುನಾವಣಾ ಘೋಷಣೆಗೂ ಮೊದಲೇ ಗುರಿ ನಿಗದಿಪಡಿಸಿಕೊಂಡಿದ್ದರು. ಆ ಗುರಿಯನ್ನು ತಲುಪುವ ಪ್ರಯತ್ನದಲ್ಲೇ ರಾಜ್ಯ ನಾಯಕರು ಸಕ್ರಿಯರಾಗಿದ್ದರು. ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿ ಕೇಂದ್ರದ ಹಲವು ಸಚಿವರು ಪ್ರಚಾರ ನಡೆಸಿದ್ದರು.

ಈ ನಡುವೆಯೂ 22ರ ಗುರಿ ತಲುಪುವ ಬಗ್ಗೆ ಬಿಜೆಪಿಯ ಬಹುಪಾಲು ನಾಯಕರಿಗೇ ವಿಶ್ವಾಸವಿದ್ದಂತಿರಲಿಲ್ಲ. 18ರಿಂದ 20 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ನಿರೀಕ್ಷೆ ಮೀರಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಅದರ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷದ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿರಬಹುದಾದ ಅಂಶಗಳ ಬಗ್ಗೆ ವಿಶ್ಲೇಷಣೆಯೂ ನಡೆದಿದೆ.

ಮೋದಿ ಅಲೆಯ ಅಬ್ಬರ: ದೇಶದಲ್ಲಿ ಬಿಹಾರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಪ್ರಧಾನಿ ಮೋದಿಯ ಅಲೆ ಪ್ರಚಂಡವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇದ್ದರು. ಹಲವು ಸುತ್ತಿನಲ್ಲಿ ಮೋದಿಯವರು ಪ್ರಚಾರ ಮಾಡಿದ ಬೆನ್ನಲ್ಲೇ ಅಲೆಯ ಅಬ್ಬರ ತೀವ್ರವಾಯಿತು. ಮೋದಿಯವರು ಪ್ರಚಾರ ಮಾಡಿದ ಕ್ಷೇತ್ರಗಳು ಮಾತ್ರವಲ್ಲದೆ, ಅಕ್ಕಪಕ್ಕದ ಹಲವು ಕ್ಷೇತ್ರಗಳಲ್ಲೂ ಪ್ರಭಾವ ಬೀರುವಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತು. ಮೋದಿ ಅಲೆಯ ತೀವ್ರತೆ ಫ‌ಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎನ್ನುತ್ತಾರೆ ನಾಯಕರು.

ಸಂಘಟನೆ- ಸಿದ್ಧಾಂತ ಫ‌ಲ: ಬಿಜೆಪಿಯ ಸಂಘಟನಾ ವ್ಯವಸ್ಥೆ, ಬಿಜೆಪಿ ಗೆಲುವಿನ ತೀವ್ರತೆಗೆ ಸಾಕಷ್ಟು ವೇಗ ನೀಡಿದೆ. ಬೂತ್‌ಮಟ್ಟದಿಂದ ಎಲ್ಲ ಹಂತಗಳಲ್ಲೂ ಸಂಘಟನಾತ್ಮಕವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸಿದ್ದು, ಉತ್ತಮ ಫ‌ಲಿತಾಂಶಕ್ಕೆ ಸಹಕಾರಿಯಾಗಿದೆ. ಜತೆಗೆ, ಪಕ್ಷದ ಸಿದ್ಧಾಂತ, ಅದರಲ್ಲೂ ಮುಖ್ಯವಾಗಿ ಹಿಂದುತ್ವ ಎಲ್ಲ ವರ್ಗದ ಮತದಾರರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.

ತಂತ್ರಗಾರಿಕೆ, ಸರ್ಜಿಕಲ್‌ ಸ್ಟೈಕ್‌, ಕಲ್ಯಾಣ ಕಾರ್ಯಕ್ರಮ…: ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ತಂತ್ರಗಾರಿಕೆ, ಭಯೋತ್ಪಾದಕ ಚಟುವಟಿಕೆ ವಿರುದ್ಧ ನಡೆದ ಸರ್ಜಿಕಲ್‌ ಸ್ಟ್ರೈಕ್‌, ರಕ್ಷಣಾ ವಿಚಾರಕ್ಕೆ ಸಂಬಂಧಪಟ್ಟಂತೆ ಮೋದಿಯವರು ತೆಗೆದುಕೊಂಡ ದಿಟ್ಟ ನಿಲುವು, ಕಲ್ಯಾಣ ಕಾರ್ಯಕ್ರಮಗಳು ಜನರ ವಿಶ್ವಾಸ ಗಳಿಸಿ ಬೆಂಬಲ ಪಡೆಯುವಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಬಿಜೆಪಿಯ ಅದ್ಭುತ ಸಾಧನೆಗೆ ನನ್ನ ಪ್ರಕಾರ ಪಂಚ ಕಾರಣ ಪ್ರಮುಖವಾಗಿವೆ. ಮೊದಲಿಗೆ ಪ್ರಧಾನಿ ಮೋದಿ ಅಲೆ, ನಾಯಕತ್ವ. ಸಿದ್ಧಾಂತ, ಅದರಲ್ಲೂ ಹಿಂದುತ್ವ. ಚುನಾವಣೆಯುದ್ದಕ್ಕೂ ಬದಲಾದ ಟ್ರೆಂಡ್‌ನ‌ ಪರಿಣಾಮಕಾರಿ ಬಳಕೆ ಜತೆಗೆ ಸಂಘಟನೆ ನಿರ್ವಹಿಸಿದ ಮಹತ್ತರ ಪಾತ್ರ. ಯಾವ ಕ್ಷೇತ್ರದಲ್ಲೂ ಭಿನ್ನಮತ- ಗೊಂದಲವಿಲ್ಲದಂತೆ ಅನುಸರಿಸಿದ ರಾಜಕೀಯ ತಂತ್ರಗಾರಿಕೆ. ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನದ ಮಾಹಿತಿ ಜನರಿಗೆ ತಲುಪಿಸಿದ್ದು. ಆರನೇ ಮಹತ್ತರ ಕಾರಣವೆಂದರೆ ರಾಜಕೀಯ ವಿರೋಧಿಗಳು ಪ್ರಧಾನಿಯವರ ವಿರುದ್ಧ ನಡೆಸಿದ ಅಪಪ್ರಚಾರ ಪಕ್ಷಕ್ಕೆ ಪ್ರಚಾರವಾಗಿ ಪರಿಣಮಿಸಿದ್ದು. ಜತೆಗೆ ಚುನಾವಣೆಗೂ ಮೊದಲೇ ಕಮಲ ಜ್ಯೋತಿ, ಮೇರಾ ಬೂತ್‌ ಸಬ್‌ಸೇ ಮಜಬೂತ್‌, ಕಮಲ ಸಂದೇಶ ಯಾತ್ರೆಯಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದವು.
-ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಮೋದಿಯವರ ಅಲೆಯ ಜತೆಗೆ ಯಡಿಯೂರಪ್ಪ ಅವರ ವರ್ಚಸ್ಸು ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ಮೈತ್ರಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸಂಘಟನೆ ವತಿಯಿಂದ ನಡೆದ ಶಿಸ್ತುಬದ್ಧ ಪ್ರಯತ್ನ, ಸರ್ಜಿಕಲ್‌ ಸ್ಟೈಕ್‌ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಂದೇಶ ಸಾರಿದ್ದು, ಇದರಿಂದ ದೇಶಕ್ಕೆ ಒಳ್ಳೆಯ ಆಡಳಿತ ಬೇಕು ಎಂಬ ಕಾರಣಕ್ಕೆ ಜನ ಬಿಜೆಪಿ ಬೆಂಬಲಿಸಿದ್ದಾರೆ.
-ಎನ್‌. ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

* ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

prahlad-joshi

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

1-sadsa

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

1-saddas

Gokarna; ಸೆ. 27,28,29 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು, ಕೇರಳಕ್ಕೆ 16 ಲೋಕಸಭಾ ಸ್ಥಾನ ನಷ್ಟ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

1-sadad

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

1-saasds

BJP ಸಂಸದನ ವಿವಾದ ; ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದಗಳ ಬಳಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad-joshi

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ

Protest: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

Protest: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

hd deve gowda

JDS BJP Alliance; ಮೈತ್ರಿ ವಿಚಾರವಾಗಿ ಮೌನ ಮುರಿಯದ ದೇವೇಗೌಡರು

madhu bangarappa

Cauvery ವಿಚಾರದಲ್ಲಿ ಸಿಎಂ ಕಠಿಣ ನಿಲುವಿಗೆ ಬೆಂಬಲ: ಮಧು ಬಂಗಾರಪ್ಪ

dinesh gundu rao

Cauvery ವಿಚಾರದಲ್ಲಿ ರಾಜಕೀಯ ಬೇಡ; ಒಗ್ಗಟ್ಟಾಗಿ ಹೋರಾಟ ಮಾಡುವ: ದಿನೇಶ್ ಗುಂಡೂರಾವ್

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

prahlad-joshi

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ

Pune: ದಕ್ಷಿಣ – ಉತ್ತರ ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಎರಡು ಕೈಗಳಿದ್ದಂತೆ

Pune: ದಕ್ಷಿಣ – ಉತ್ತರ ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಎರಡು ಕೈಗಳಿದ್ದಂತೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

1-sadsa

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

1-saddas

Gokarna; ಸೆ. 27,28,29 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.