ಸಮಾಜಕ್ಕಾಗಿ ದುಡಿಯುವವರಿಗೆ ಭಗವಂತನ ಸಾನ್ನಿಧ್ಯ

ನಾಗರಿಕ ಸಮ್ಮಾನ ಸ್ವೀಕರಿಸಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ

Team Udayavani, Jan 18, 2022, 5:30 AM IST

ಸಮಾಜಕ್ಕಾಗಿ ದುಡಿಯುವವರಿಗೆ ಭಗವಂತನ ಸಾನ್ನಿಧ್ಯ

ಉಡುಪಿ: ಸ್ವಂತ ಇಚ್ಛೆ ಇಲ್ಲದೆ ಸಮಾಜಕ್ಕಾಗಿ ಕೆಲಸ ಮಾಡುವವರು, ದ್ವೇಷ ಸಾಧನೆ ಬಿಟ್ಟು ಸಮಸ್ಥಿತಿಯ ಚಿಂತನೆ ಹೊಂದಿರುವವರು ಭಗವಂತನ ಸಾನ್ನಿಧ್ಯ ಸೇರುತ್ತಾರೆ ಎಂದು ಪರ್ಯಾಯ ನಿರ್ಗಮಿತ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ನಗರ ಸಭೆ ಹಾಗೂ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿಯಿಂದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಗರಿಕ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಉಪಕಾರ ಮಾಡಲು ಸಾಧ್ಯವಾಗದೇ ಇದ್ದರೂ ತೊಂದರೆ ಮಾಡಬಾರದು. ಈ ರೀತಿಯ ಚಿಂತನೆಯಲ್ಲಿ ಬದುಕುವ ಪ್ರಯತ್ನ ಎಲ್ಲರೂ ಮಾಡಬೇಕು. ಶ್ರೀ ವಿಶ್ವಪ್ರಿಯತೀರ್ಥರು ತಾವು ಮಾಡಬೇಕಾದ ಪರ್ಯಾಯ ಪೂಜಾ ಕೈಂಕರ್ಯವನ್ನು ಶಿಷ್ಯನಿಗೆ ನೀಡಿದರು. ನಾವು ಚಾಲಕನ ಸೀಟಿನಲ್ಲಿ ಕುಳಿ ತಿದ್ದು ಮಾತ್ರ. ಉಳಿದೆಲ್ಲ ಸಾಧನೆಗೆ ಶ್ರೀ ವಿಶ್ವಪ್ರಿಯತೀರ್ಥರ ಭಕ್ತ ವೃಂದ, ಶ್ರೀಮಠದ ಸಿಬಂದಿ ವರ್ಗ ಕಾರಣ. ಹಿರಿಯರ ಮಾತು ಫ‌ಲಕಾರಿ ಯಾಗಲಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಪೂರ್ವಾಶ್ರಮದಲ್ಲಿದ್ದಾಗ ಕೃಷ್ಣಮಠಕ್ಕೆ ಬಂದಿದ್ದ ಸಂದರ್ಭದಲ್ಲಿ ಶ್ರೀಗಳು ದೇವರಲ್ಲಿ ಪ್ರಾರ್ಥನೆ ಮಾಡು, ದೇವರು ಅನುಗ್ರಹ ಮಾಡುತ್ತಾನೆ ಎಂದಿದ್ದರು. ಅದು ಸಾಕಾರವಾಗಿದೆ ಎಂದರು.

ಅಷ್ಟಮಠಾಧೀಶರ ಸಹಕಾರದ ಜತೆಗೆ ಶ್ರೀ ವಿಶ್ವಪ್ರಿಯತೀರ್ಥರ ದೊಡ್ಡ ಮಟ್ಟದ ಸಹಕಾರದೊಂದಿಗೆ ದೇವರ ಪೂಜೆ ಚೆನ್ನಾಗಿ ಆಗಿದೆ. ಆನೆಗಳ ಗುಂಪಿನಲ್ಲಿ ಮರಿಯಾನೆ ಇದ್ದಾಗ ಎಲ್ಲ ಆನೆಗಳು ಮರಿಯಾನೆಯನ್ನು ಹೇಗೆ ರಕ್ಷಣೆ ಮಾಡುತ್ತವೋ ಆ ರೀತಿಯಲ್ಲಿ ಅಷ್ಟಮಠದ ಯತಿಗಳು ನಮ್ಮನ್ನು ರಕ್ಷಣೆ ಮಾಡಿದ್ದಾರೆ. ಪರ್ಯಾಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿವಂದನೆಗಳು ಎಂದು ತಿಳಿಸಿದರು.

ಭಾವೀ ಪರ್ಯಾಯ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಲೋಕಕ್ಕೆ ಕೊರೊನಾ ಬಾಧೆ ಬಂದಿದ್ದರೂ ಪ್ರಥಮ ಬಾರಿಗೆ ಪರ್ಯಾಯದ ಹೊಣೆಗಾರಿಕೆ ವಹಿಸಿಕೊಂಡ ಅದಮಾರು ಶ್ರೀಗಳು ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಎಲ್ಲವನ್ನು ಸಕಾರಾತ್ಮಕ ವಾಗಿ ಸ್ವೀಕರಿಸಿ ತಮ್ಮ ಕಾರ್ಯವನ್ನು ಮುನ್ನಡೆಸಿದ್ದಾರೆ. ಶ್ರೀಕೃಷ್ಣ ಪೂಜೆಗೆ ಸ್ವಲ್ಪವೂ ಚ್ಯುತಿ ಬರದಂತೆ ನೋಡಿ ಕೊಂಡಿದ್ದಾರೆ ಮತ್ತು ಮಾಡಿ ತೋರಿಸಿ ದ್ದಾರೆ. ಗುರುಗಳು, ವಿದ್ಯಾಗುರುಗಳು, ನಾಗರಿಕರು, ಸಮಿತಿಯ ಸಹಕಾರ ದಿಂದ ಸಂಪ್ರದಾಯಕ್ಕೆ ಚ್ಯುತಿಯಾಗ ದಂತೆ ಕೊರೊನಾ ಉಪಟಳದ ನಡುವೆಯೂ ಎಲ್ಲವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಎರಡು ವರ್ಷ ಕೊರೊನಾದಿಂದ ಅಷ್ಟಮಠದ ಯತಿ ಗಳು ಉಡುಪಿಯಲ್ಲೇ ಇದ್ದಿದ್ದರು. ಎಲ್ಲರಿಗೂ ದೇವರ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ದೇಶಿ ಪ್ರಜ್ಞೆಕೊರೊನಾ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ದೇಶಿಪ್ರಜ್ಞೆ ಯನ್ನು ಬೆಳೆಸುವ ಪ್ರಯತ್ನ ಶ್ರೀಗಳು ಮಾಡಿದ್ದಾರೆ. ಪಾಶ್ಚಿಮಾತ್ಯದ ಪ್ರಭಾವ ದಿಂದ ನಾವು ನಮ್ಮ ತನವನ್ನು ಕಳೆದು ಕೊಳ್ಳುತ್ತಿದ್ದೇವೆ. ದೇವರು, ದೇಶ ಹಾಗೂ ದೇಶದ ಜನರ ಮೇಲೆ ಪ್ರೀತಿ ಇದೆ ಎಂಬುದನ್ನು ತಮ್ಮ ಪರ್ಯಾಯ ಅವಧಿಯಲ್ಲಿ ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಅವರ ಈ ಕ್ರಮ ಅನುಕರಣೀಯ. ದೇಶೀಯ ಪ್ರಜ್ಞೆ ಎಲ್ಲ ರಂಗದಲ್ಲೂ ಬರಬೇಕು. ಸರಕಾರಗಳು ಈ ವಿಷಯವಾಗಿ ಕೆಲವೊಂದು ನಿರ್ಧಾರ ತೆಗೆದುಕೊಂಡಿವೆ. ಶ್ರೀಗಳು ಅದನ್ನು ಕೊರೊನಾ ಸಂಕಷ್ಟದ ನಡುವೆ ಮಾಡಿ ತೋರಿಸಿದ್ದಾರೆ ಎಂದರು.

ಆಪತ್ತು ಬಂದಾಗ ಅದನ್ನು ಹೇಗೆ ಎದುರಿಸಿ ಮುನ್ನಡೆಯಬೇಕು ಎಂಬು ದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಅದಮಾರು ಮಠದ ನಿಧಿಯನ್ನು ಬಳಸಿ, ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಕಷ್ಟಬಂದಾಗ ಮಠವನ್ನು ಹೇಗೆ ನಡೆಸಬಹುದು ಎಂಬುದನ್ನು ಚೆನ್ನಾಗಿ ಆಚರಣೆ ಮಾಡಿ ತೋರಿಸಿದ್ದಾರೆ. ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಹೇಳಿದರು.

ವಿದ್ವಾಂಸರಾದ ಕೃಷ್ಣರಾಜ ಕುತ್ಪಾಡಿ ಅವರು ಅಭಿವಂದನಾ ಭಾಷಣ ಮಾಡಿದರು. ಪರ್ಯಾಯೋತ್ಸವ ಸಮಿ ತಿಯ ಕಾರ್ಯಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ಸ್ವಾಗತಿಸಿದರು. ನಗರ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಅಭಿನಂದನ ಪತ್ರ ಓದಿದರು. ಪರ್ಯಾಯ ಸ್ವಾಗತ ಸಮಿತಿಯ ಕೆ. ಸೂರ್ಯನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.

ಹೆರ್ಗ ಹರಿಪ್ರಸಾದ್‌ ಭಟ್‌ ನಿರೂ ಪಿಸಿದರು. ಸಮಿತಿಯ ಪ್ರಧಾನ ಕಾರ್ಯ ದರ್ಶಿ ವಿಷ್ಣುಪ್ರಸಾದ್‌ ಪಾಡಿಗಾರ್‌ ಧನ್ಯವಾದ ಸಮರ್ಪಿಸಿದರು.

ಟಾಪ್ ನ್ಯೂಸ್

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahalakshmi Co-Operative Bank; ಶಿಕ್ಷಣಕ್ಕೆ ಪ್ರೋತ್ಸಾಹ ಪುಣ್ಯದ ಕೆಲಸ: ಡಾ| ಜಿ. ಶಂಕರ್‌

Mahalakshmi Co-Operative Bank; ಶಿಕ್ಷಣಕ್ಕೆ ಪ್ರೋತ್ಸಾಹ ಪುಣ್ಯದ ಕೆಲಸ: ಡಾ| ಜಿ. ಶಂಕರ್‌

Kapu ಕಡಿಯುತ್ತಿದ್ದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

Kapu ಕಡಿಯುತ್ತಿದ್ದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

Manipal ಚೂರಿ ಇರಿತ: ನಾಲ್ವರ ಬಂಧನ

Manipal ಚೂರಿ ಇರಿತ: ನಾಲ್ವರ ಬಂಧನ

Udupi ಲಾರಿ ಮಾಲಕರ ಮುಷ್ಕರದಲ್ಲಿ ತಾತ್ಕಾಲಿಕ ಬದಲಾವಣೆ

Udupi ಲಾರಿ ಮಾಲಕರ ಮುಷ್ಕರದಲ್ಲಿ ತಾತ್ಕಾಲಿಕ ಬದಲಾವಣೆ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

Udupi ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 3 ಮಂದಿ ವಶಕ್ಕೆ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.