
ವಾಡಿ: ಶಿವಲಿಂಗ ಕಿತ್ತು ನಿಧಿ ಶೋಧಿಸಿದ ಕಳ್ಳರು
Team Udayavani, Jun 4, 2023, 12:16 PM IST

ವಾಡಿ: ನಿಧಿ ಶೋಧನೆಗಾಗಿ ಕಳ್ಳರು ಪುರಾತನ ದೇವಾಲಯದ ಶಿವಲಿಂಗವನ್ನು ಕಿತ್ತು ಬೀಸಾಡಿದ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ಸುಗೂರ (ಎನ್) ಗ್ರಾಮದಲ್ಲಿ ಜೂ.3ರ ಶನಿವಾರ ತಡರಾತ್ರಿ ನಡೆದಿದೆ.
ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶದಲ್ಲಿರುವ ಸುಮಾರು 200 ವರ್ಷಗಳಷ್ಟು ಹಳೆಯದಾದ ಎನ್ನಲಾದ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳ್ಳರು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.
ನಿಧಿಗಾಗಿ ಕಳ್ಳರು ಶಿವಲಿಂಗ ಕಿತ್ತು ಬೇರೆಡೆಗೆ ಇಡುವ ಮೂಲಕ ಗರ್ಭಗುಡಿಯ ನೆಲ ಅಗೆದಿದ್ದಾರೆ. ಇದಕ್ಕೂ ಮುಂಚೆ ನಿಧಿಗಳ್ಳರು ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಬಾಳೆಹಣ್ಣು, ನಿಂಬೆಹಣ್ಣು, ಕುಂಕುಮ, ಕರ್ಪೂರ, ಊದುಬತ್ತಿ, ದೀಪದ ಹಣತೆ ಪತ್ತೆಯಾಗಿವೆ.
ಸುಗೂರು (ಎನ್) ಗ್ರಾಮದ ಈ ಮಲ್ಲಿಕಾರ್ಜುನ ದೇವಸ್ಥಾನ ಪದೆ ಪದೇ ನಿಧಿಗಳ್ಳರ ದಾಳಿಗೆ ಒಳಗಾಗುತ್ತಿದ್ದು, ಈ ಮೊದಲು ಮೂರು ಸಲ ಇದೇ ದೇವಸ್ಥಾನದಲ್ಲಿ ನಿಧಿ ಶೋಧ ನಡೆಸಿದ ಘಟನೆಗಳು ನಡೆದಿವೆ. ಆದರೆ ಪ್ರಕರಣ ಮಾತ್ರ ದಾಖಲಿಸಿರಲಿಲ್ಲ.
ಈ ಪರಿಣಾಮ ಕಳ್ಳರು ಪತ್ತೆಯಾಗಲಿಲ್ಲ. ಈ ಬಾರಿ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿ, ಗ್ರಾಮದಲ್ಲಿ ಒಟ್ಟು ನಾಲ್ಕು ಐತಿಹಾಸಿಕ ಶಿವಲಿಂಗಗಳಿವೆ. ಮೂರು ದೇಗುಲ ಸುರಕ್ಷಿತವಾಗಿವೆ. ಆದರೆ ಊರ ಹೊರಗಿನ ದೇವಸ್ಥಾನಕ್ಕೆ ಪ್ರತಿಸಲವೂ ಕಳ್ಳರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಗ್ರಾಮಸ್ಥರೇ ಯಾರಾದರೂ ಈ ಕೃತ್ಯ ಎಸಗುತ್ತಿರಬಹುದಾ ಎಂಬ ಅನುಮಾನ ಕಾಡುತ್ತಿದೆ. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರಾದ ಭೀಮರೆಡ್ಡಿಗೌಡ ಕುರಾಳ, ಸಿದ್ದುಗೌಡ ಕುರಾಳ ಆಗ್ರಹಿಸಿದ್ದಾರೆ.
ವಾಡಿ ಠಾಣೆಯ ಪಿಎಸ್ ಐ ಸುದರ್ಶನ ರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

Kalaburagi;ಅವ್ಯವಹಾರಕ್ಕೆ ಸಂಬಂಧಿಸಿ ಮೂವರು ಇಂಜಿನಿಯರ್ ಗಳ ಅಮಾನತು

Chincholi: ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

Wadi: ಬೀದಿಗೆ ಬಿದ್ದ ರೈಲು ನಿಲ್ದಾಣ ಸಫಾಯಿ ಕಾರ್ಮಿಕರು;

Tragedy: ಯುವ ರೈತ ಮೃತ್ಯು… ಶುಭಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಮಡುಗಟ್ಟಿದ ಶೋಕ
MUST WATCH
ಹೊಸ ಸೇರ್ಪಡೆ

Belagavi: ಶೆಫರ್ಡ ಇಂಡಿಯಾ ಇಂಟರ್ನ್ಯಾಷನಲ್ ಸಮಾವೇಶಕ್ಕೆ 1.50 ಲಕ್ಷ ಜನ ಸೇರುವ ನಿರೀಕ್ಷೆ

Pakistan: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 34 ಮಂದಿ ಮೃತ್ಯು, 100ಕ್ಕೂ ಹೆಚ್ಚು ಗಾಯ

Cauvery issue; ಕೆಆರ್ ಎಸ್ ಮುತ್ತಿಗೆಗೆ ವಾಟಾಳ್ ನಾಗರಾಜ್ ಕರೆ

Rain;ಉಡುಪಿ, ಉ.ಕ ಜಿಲ್ಲೆಗೆ ಆರೆಂಜ್, ದ.ಕ ಜಿಲ್ಲೆಗೆ ಯೆಲ್ಲೊ ಅಲರ್ಟ್; ಭಾರಿ ಮಳೆ ಸಾಧ್ಯತೆ

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ